ಆ್ಯಪ್ನಗರ

ಮೊದಲು ಕನ್ನಡ ನಂತರ ಬೇರೆ ಭಾಷೆ ಕಲಿಯಿರಿ: ವೆಂಕಯ್ಯ ನಾಯ್ಡು

ಮೊದಲು ಕನ್ನಡ ಕಲಿಯಿರಿ ನಂತರ ಬೇರೆ ಭಾಷೆ ಕಲಿಯಿರಿ. ಮಮ್ಮಿ ಏನಿದು?. ಅದೇ ಅಮ್ಮ ಎಷ್ಟು ಚೆನ್ನಾಗಿದೆ.

Vijaya Karnataka 26 Sep 2017, 2:55 pm
ಗದಗ: ಮೊದಲು ಕನ್ನಡ ಕಲಿಯಿರಿ ನಂತರ ಬೇರೆ ಭಾಷೆ ಕಲಿಯಿರಿ. ಮಮ್ಮಿ ಏನಿದು?. ಅದೇ ಅಮ್ಮ ಎಷ್ಟು ಚೆನ್ನಾಗಿದೆ. ಅಮ್ಮ ಎನ್ನುವ ಪದ ಹೃದಯದಿಂದ ಬರುತ್ತೆ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡ ಪಾಠ ಮಾಡಿದರು.
Vijaya Karnataka Web first kannada there after everything says naidu
ಮೊದಲು ಕನ್ನಡ ನಂತರ ಬೇರೆ ಭಾಷೆ ಕಲಿಯಿರಿ: ವೆಂಕಯ್ಯ ನಾಯ್ಡು


ನರಗುಂದದ ತಾಲೂಕಿಗೆ ಭೇಟಿ ನೀಡಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಅವರು, ನರಗುಂದ ತಾಲೂಕವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿದರು. ಈ ಕೆಲಸ ಮಾಡಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.

'ನಾನು ರಿಟೈರ್ಡ್ ಆಗಿದ್ದೇನೆ. ಆದರೆ, ಟಯರ್ಡ್ ಆಗಿಲ್ಲ. ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಗಾಂಧೀಜಿಯವರೇ ಹೇಳಿದ್ದರು. ಸ್ವಚ್ಛ ಭಾರತ ಯೋಜನೆ ಕೇವಲ ಸರಕಾರದ ಯೋಜನೆ ಇದಲ್ಲ, ಇದು ಜನರ ಯೋಜನೆ' ಎಂದು ಹೇಳಿದರು.

'ಗ್ರಾಮರಾಜ್ಯ ಇಲ್ಲದೆ ರಾಮರಾಜ್ಯ ಸಾಧ್ಯವಿಲ್ಲ. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದಾಗ ಪಿಎಂ ಗ್ರಾಮಸಡಕ್ ಯೋಜನೆ ಆರಂಭಿಸಿದ್ದೆ. ಇದಕ್ಕೆ ವಾಜಪೇಯಿ ಅವರು ಸಹಕರಿಸಿದ್ದರು. ಗ್ರಾಮಕ್ಕೆ ರಸ್ತೆ ಇಲ್ಲ ಅಂದ್ರೆ ಡಾಕ್ಟರ್, ಟ್ರಾಕ್ಟರ್ ಯಾವುದು ಬರಲ್ಲ. ಈ ಕೆಲಸಕ್ಕೆ ಸಾರ್ವಜನಿಕರು ಕೈ ಜೋಡಿಸಿದರೆ, ಯೋಜನೆ ಸಫಲವಾಗುತ್ತದೆ' ಎಂದರು.

1 ಲಕ್ಷ ಮಕ್ಕಳು ಶೌಚದ ವ್ಯವಸ್ಥೆ ಇಲ್ಲದೆ ಆರೋಗ್ಯದ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ 60 ಕೋಟಿ ಜನ ಬಯಲಿಗೆ ಹೋಗುತ್ತಿದ್ದರು. ಇದೀಗ 20 ಕೋಟಿಗೆ ಇಳಿದಿರುವುದು ಇತಿಹಾಸವೇ ಸರಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ