ಆ್ಯಪ್ನಗರ

ಮಕ್ಕಳನ್ನು ಆಕರ್ಷಿಸಿದ ಹಡಗು ಮೀನುಗಳು

ಗದಗ: ಶಾಲಾ ಪ್ರಾಂಗಣದಲ್ಲೊಂದು ಸಣ್ಣ ವಾಟರ್‌ ಟಬ್‌, ಅದರಲ್ಲಿ ಬಣ್ಣ ಬಣ್ಣದ ಕಾಗದಗಳಿಂದ ಸಿದ್ದಪಡಿಸಿದ ಹಡಗು, ಮೀನುಗಳನ್ನು ನೀರಿನಲ್ಲಿ ತೇಲಿ ಬಿಡುವ ಮೂಲಕ ಮಕ್ಕಳನ್ನು ಆಕರ್ಷಿಸಿ ಆಟದೊಂದಿಗೆ ಪಾಠಕ್ಕೆ ಚಾಲನೆ ನೀಡುವ ಶೈಕ್ಷ ಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸನ್ನಿವೇಶ ಇಲ್ಲಿಯ ಬಸವೇಶ್ವರ ನಗರದ ಲಿಂಗಾಯತ ಬಣಗಾರ ಶಿಕ್ಷ ಣ ಸಂಸ್ಥೆಯ ಶಂಕರ ಗ್ಲೋಬಲ್‌ ಸ್ಕೂಲ್‌ನಲ್ಲಿ ಜರುಗಿತು.

Vijaya Karnataka 1 Jun 2019, 5:00 am
ಗದಗ: ಶಾಲಾ ಪ್ರಾಂಗಣದಲ್ಲೊಂದು ಸಣ್ಣ ವಾಟರ್‌ ಟಬ್‌, ಅದರಲ್ಲಿ ಬಣ್ಣ ಬಣ್ಣದ ಕಾಗದಗಳಿಂದ ಸಿದ್ದಪಡಿಸಿದ ಹಡಗು, ಮೀನುಗಳನ್ನು ನೀರಿನಲ್ಲಿ ತೇಲಿ ಬಿಡುವ ಮೂಲಕ ಮಕ್ಕಳನ್ನು ಆಕರ್ಷಿಸಿ ಆಟದೊಂದಿಗೆ ಪಾಠಕ್ಕೆ ಚಾಲನೆ ನೀಡುವ ಶೈಕ್ಷ ಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸನ್ನಿವೇಶ ಇಲ್ಲಿಯ ಬಸವೇಶ್ವರ ನಗರದ ಲಿಂಗಾಯತ ಬಣಗಾರ ಶಿಕ್ಷ ಣ ಸಂಸ್ಥೆಯ ಶಂಕರ ಗ್ಲೋಬಲ್‌ ಸ್ಕೂಲ್‌ನಲ್ಲಿ ಜರುಗಿತು.
Vijaya Karnataka Web GDG-31RUDRAGOUD12
ಗದಗನ ಬಸವೇಶ್ವರ ನಗರದ ಲಿಂಗಾಯತ ಬಣಗಾರ ಶಿಕ್ಷ ಣ ಸಂಸ್ಥೆಯ ಶಂಕರ ಗ್ಲೋಬಲ್‌ ಸ್ಕೂಲ್‌ನಲ್ಲಿ ಮಕ್ಕಳನ್ನು ಆಕರ್ಷಿಸಿದ ವಾಟರ್‌ ಟಬ್‌.


ಮಕ್ಕಳನ್ನು ಶೈಕ್ಷ ಣಿಕ ವರ್ಷಕ್ಕೆ ಸಜ್ಜುಗೊಳಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದ ಕ್ರಿಯಾಶೀಲ ಶಾಲಾ ಮುಖ್ಯಸ್ಥೆ ಬ್ಲೇಸಿನಾ ಡೇನಿಯಲ್‌ ಮಕ್ಕಳನ್ನು ಕಲಿಕೆಗೆ ಅಣಿಗೊಳಿಸಿದರು. ಮಕ್ಕಳಿಗೆ ಬಣ್ಣ ಬಣ್ಣದ ಚಿತ್ತಾರಗಳ ಆಟಿಕೆಗಳನ್ನು ನೀಡಿ ಅವರ ಮನಸ್ಸನ್ನು ಉಲ್ಲಾಸಗೊಳಿಸಲಾಯಿತು.

ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಗುರುಲಿಂಗಪ್ಪ ತಡಸದ, ಕಾರ್ಯದರ್ಶಿ ಬಸವರಾಜ ಪಿಳ್ಳಿ, ಖಜಾಂಚಿ ಶಂಭುಲಿಂಗಪ್ಪ ಕಾರದಕಟ್ಟಿ ಸೇರಿದಂತೆ ನಿರ್ದೆಶಕರು ಮಕ್ಕಳಿಗೆ ಸಿಹಿಯೊಂದಿಗೆ ಪುಸ್ತಕಗಳನ್ನು ವಿತರಿಸಿ ಶಾಲೆಗೆ ಬರಮಾಡಿಕೊಂಡರು.

ಗುರುಲಿಂಗಪ್ಪ ತಡಸದ ಮಾತನಾಡಿದರು. ಸಿದ್ದಲಿಂಗಪ್ಪ ಪಿಳ್ಳಿ, ಶಿವಪುತ್ರಪ್ಪ ಶಿವಸಿಂಪಿಗೇರ, ದಾನಪ್ಪ ತಡಸದ, ಬಸವರಾಜ ಕಾಡಪ್ಪನವರ, ಶಂಕರಲಿಂಗಪ್ಪ ಮುನವಳ್ಳಿ, ಈಶ್ವರ ಬೇವಿನಮರದ, ಮಹೇಶ ಗಡಾದ, ಕೆ.ಎಸ್‌.ಚೆಟ್ಟಿ, ಅಶೋಕ ಇಟಗಿ, ಸಿದ್ದಣ್ಣ ಕಾಡಪ್ಪನವರ ಹಾಗೂ ಹಿರಿಯರಾದ ರಾಚಪ್ಪ ಮಿಣಜಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ