ಆ್ಯಪ್ನಗರ

ನೀರಿನ ಹೋರಾಟಕ್ಕೆ ಐದು ವರ್ಷ

ನರಗುಂದ: ನೀರಿಗಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ತಾಲೂಕಿನಲ್ಲಿಈ ಹೋರಾಟಗಳು ಸಾಮಾನ್ಯದಂತಾಗಿವೆ.ಅದೇ ರೀತಿ ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿನೀರಿಗಾಗಿ ನಿರಂತರ ಧರಣಿ ಸತ್ಯಾಗ್ರಹ ನಡೆದು ಇಂದಿಗೆ ಐದು ವರ್ಷಗಳು ಸಂದಿವೆ. ಸರಕಾರಗಳು ಮತ್ತು

Vijaya Karnataka 16 Jul 2020, 5:00 am
ನರಗುಂದ: ನೀರಿಗಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ತಾಲೂಕಿನಲ್ಲಿಈ ಹೋರಾಟಗಳು ಸಾಮಾನ್ಯದಂತಾಗಿವೆ.
Vijaya Karnataka Web 15NRD3_25
ನರಗುಂದದಲ್ಲಿನೀರಿಗಾಗಿ ಒತ್ತಾಯಿಸಿ ಹೆದ್ದಾರಿ ತಡೆ ನಡೆಸಿ ಬಂದ ಆಚರಿಸುತ್ತಿರುವ ರೈತರು.(ಸಂಗ್ರಹ ಚಿತ್ರ)

ಅದೇ ರೀತಿ ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿನೀರಿಗಾಗಿ ನಿರಂತರ ಧರಣಿ ಸತ್ಯಾಗ್ರಹ ನಡೆದು ಇಂದಿಗೆ ಐದು ವರ್ಷಗಳು ಸಂದಿವೆ. ಸರಕಾರಗಳು ಮತ್ತು ರಾಜಕೀಯ ವ್ಯವಸ್ಥೆ ರೈತರ ಬೇಡಿಕೆಗೆ ನಿರ್ಲಕ್ಷ್ಯ ತಾಳಿವೆ ಎಂಬುದು ರೈತರ ಆರೊಪ.

ನಿಲ್ಲದ ಹೋರಾಟ: 16 ಜು.2015ರಂದು ರೈತ ಹುತಾತ್ಮ ವೀರಗಲ್ಲುಎದುರು ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿಮಹದಾಯಿ ನೀರಿಗಾಗಿ ಹೋರಾಟ ಆರಂಭಿಸಿತು. ರೈತರ ಹೋರಾಟ ಹಳ್ಳಿಯಿಂದ ದಿಲ್ಲಿವರೆಗೂ ಜನಾಂದೋಲನವಾಗಿ ಮಾರ್ಪಟ್ಟಿತು.

ಪ್ರತಿ ವರ್ಷ ಜು.16 ರಂದು ರೈತ ಸೇನಾ ಕರ್ನಾಟಕ ವರ್ಷಾಚರಣೆ ಮಾಡಿಕೊಂಡು ಬಂದಿದೆ. ಆದರೆ ಈ ಭಾರಿ ಕೊರೊನಾ ಮಹಾಮಾರಿಯಿಂದಾಗಿ ಹೆಚ್ಚಿನ ರೈತರು ಪಾಲ್ಗೊಳ್ಳುವುದಿಲ್ಲ. ಕೆಲವು ರೈತರು, ರೈತ ಮುಖಂಡರು ವೀರ ಬಾಬಾಸಾಹೇಬ ಭಾವೆ ಅವರ ಪುತ್ಥಳಿಯಿಂದ ಮೆರವಣಿಗೆ ನಡೆಸಿ ಹೋರಾಟ ವೇದಿಕೆಯಲ್ಲಿಆಗಮಿಸಲಾಗುವುದು ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ