ಆ್ಯಪ್ನಗರ

ಡೋಣಿಯಲ್ಲಿ ಜಾನಪದ ಕಲಾ ಮೇಳ

ಗದಗ: ಮುಂಡರಗಿ ತಾಲೂಕ ಡೋಣಿ ಗ್ರಾಮದ ಬಯಲು ರಂಗ ಮಂದಿರದಲ್ಲಿಇತ್ತೀಚೆಗೆ ಲಕ್ಕುಂಡಿಯ ನೂಲಿ ಚಂದಯ್ಯ ಜಾನಪದ ಕಲಾ ಮೇಳ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿಜಾನಪದ ಕಲಾ ಮೇಳ ಜರುಗಿತು.

Vijaya Karnataka 12 Nov 2019, 5:00 am
ಗದಗ: ಮುಂಡರಗಿ ತಾಲೂಕ ಡೋಣಿ ಗ್ರಾಮದ ಬಯಲು ರಂಗ ಮಂದಿರದಲ್ಲಿಇತ್ತೀಚೆಗೆ ಲಕ್ಕುಂಡಿಯ ನೂಲಿ ಚಂದಯ್ಯ ಜಾನಪದ ಕಲಾ ಮೇಳ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿಜಾನಪದ ಕಲಾ ಮೇಳ ಜರುಗಿತು.
Vijaya Karnataka Web folk art fair at doni
ಡೋಣಿಯಲ್ಲಿ ಜಾನಪದ ಕಲಾ ಮೇಳ


ಮುಂಡರಗಿ ಎಪಿಎಂಸಿ ಸದಸ್ಯ ರಾಘವೇಂದ್ರ ಡೊಳ್ಳಿನ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನೂಲಿ ಚಂದಯ್ಯ ಜಾನಪದ ಕಲಾ ಮೇಳದ ಅಧ್ಯP್ಷÜ ಶಿವಪ್ಪ ಭಜಂತ್ರಿ ಅಧ್ಯP್ಷÜತೆ ವಹಿಸಿದ್ದರು.

ಬಸಯ್ಯ ಗದಗಿನಮಠ ಮಾತನಾಡಿ, ಜನಪದವು ಜನರ ಜೀವನಾಡಿಯಂತಿದ್ದು, ಜನರ ಬದುಕಿನಲ್ಲಿಹಾಸುಹೊಕ್ಕಾಗಿದೆ ಎಂದರು.

ಪ್ರಕಾಶ ಕುರಬರ ಮತ್ತು ತಂಡದಿಂದ ಡೊಳ್ಳು ಕುಣಿತ, ಷಣ್ಮುಖಸ್ವಾಮಿ ಭಜನಾ ಮಂಡಳಿದಿಂದ ಭಜನೆ, ಬೀರಲಿಂಗೇಶ್ವರ ಜಾನಪದ ಕಲಾ ತಂಡದಿಂದ ಡೊಳ್ಳಿನ ಪದ, ಗೌಡಪ್ಪ ಬೊಮ್ಮಪ್ಪನವರ ಮತ್ತು ತಂಡದಿಂದ ಜಾನಪದ, ಕೊಟ್ರಯ್ಯಸ್ವಾಮಿ ನಾಗಾವಿಮಠ ಮತ್ತು ತಂಡದಿಂದ ತತ್ವಪದ, ಭೀಮಾಂಬಿಕೆದೇವಿ ಜನಪದ ಕಲಾ ತಂಡದಿಂದ ಡೊಳ್ಳಿನ ಪದಗಳನ್ನು ಹಾಡಿ ಸೇರಿ ಜನರನ್ನು ರಂಜಿಸಿದರು.

ಗೊಣೆಪ್ಪ ಗೋಣಿಸ್ವಾಮಿ, ನಿಂಗಪ್ಪ ಗುಡ್ಡದ, ಮಂಜುನಾಥ ಹೊಸಮನಿ, ಪರಸಪ್ಪ ಬೆಳ್ಳಿ, ನೀಲಪ್ಪ ಹವಳನವರ, ಶಿವು ಭಜಂತ್ರಿ, ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ