ಆ್ಯಪ್ನಗರ

ಗ್ರಾಮೀಣರ ಹೃದಯ ಪದಗಳೇ ಜಾನಪದ ಸಾಹಿತ್ಯ

ಗದಗ: ಜಾನಪದ ಸಾಹಿತ್ಯವು ವಿಶ್ವ ಮಾನ್ಯತೆ ಪಡೆದ ಸಾಹಿತ್ಯವಾಗಿದೆ. ಜಗದ ಜನರ ಈ ಮಣ್ಣಿನ ಮಕ್ಕಳ ಎದೆಯ ಹಾಡುಗಳಾಗಿ ಹೃದಯ ಸ್ಪರ್ಶವಾದ ಸಾಹಿತ್ಯವೇ ಈ ಜಾನಪದ ಸಾಹಿತ್ಯ ಎಂದು ಜಾನಪದ ವಿದ್ವಾಂಸ ಡಾ.ಸಿದ್ದಣ್ಣ ಜಕಬಾಳ ಹೇಳಿದರು.

Vijaya Karnataka 17 Oct 2019, 5:00 am
ಗದಗ: ಜಾನಪದ ಸಾಹಿತ್ಯವು ವಿಶ್ವ ಮಾನ್ಯತೆ ಪಡೆದ ಸಾಹಿತ್ಯವಾಗಿದೆ. ಜಗದ ಜನರ ಈ ಮಣ್ಣಿನ ಮಕ್ಕಳ ಎದೆಯ ಹಾಡುಗಳಾಗಿ ಹೃದಯ ಸ್ಪರ್ಶವಾದ ಸಾಹಿತ್ಯವೇ ಈ ಜಾನಪದ ಸಾಹಿತ್ಯ ಎಂದು ಜಾನಪದ ವಿದ್ವಾಂಸ ಡಾ.ಸಿದ್ದಣ್ಣ ಜಕಬಾಳ ಹೇಳಿದರು.
Vijaya Karnataka Web folk literature is the heart of the villagers
ಗ್ರಾಮೀಣರ ಹೃದಯ ಪದಗಳೇ ಜಾನಪದ ಸಾಹಿತ್ಯ


ಇಲ್ಲಿಯ ಪ್ರೋಬಸ್‌ ಕ್ಲಬ್‌ನಲ್ಲಿಪಾಕ್ಷಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಾನಪದ ಸಾಹಿತ್ಯದ ಇತಿಹಾಸವನ್ನು ತಿಳಿಸಿದರು. ಈ ನಾಡಿನ ಸಂಸ್ಕೃತಿ ಪರಂಪರೆಯ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಹಿತ್ಯವಾಗಿ, ಎಲ್ಲಜನರ ನಾಡಿಮಿಡಿತವಾಗಿ, ದೈನಂದಿನ ಬದುಕಿನ ಜೀವಂತ ಸಾಕ್ಷಿಯಾಗಿದೆ ಎಂದರು. ಸೋಬಾನ ಪದ, ಬಿಸುಕಲ್ಲುಪದ, ಹಂತಿ ಪದ, ಜೋಕಾಲಿ, ಗೀಗಿ ಪದ ಹೀಗೆ ಅನೇಕ ಪದಗಳನ್ನು ಜನಪದ ಸಾಹಿತ್ಯ ಬೆಳೆವಣಿಗೆ ಹೊಂದಲು ಸಹಕಾರಿಯಾಗಿದೆ ಎಂದರು.

ಸಾಹಿತಿ ವೀರಣ್ಣ ವಾಲಿ, ನಮ್ಮ ನೆಲ ನಮ್ಮ ಜನ ಕೃತಿ ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನÜ ಅಧ್ಯಕ್ಷ ವಿ.ಎಂ.ನಿಂಗೋಜಿ, ಗಂಗಣ್ಣ ಕೋಟಿ, ಡಾ.ಮಲ್ಲಣ್ಣ ರಾಟಿ, ನೀಲಮ್ಮ ರಾಟಿ, ಸುಭಾಸಚಂದ್ರ ಪೇಂಟಾ, ವಿ.ಎಂ.ಮುಂದಿಲಮನಿ, ಪ್ರೊ.ಗರಡಿಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ