ಆ್ಯಪ್ನಗರ

ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶ ಅನುಸರಿಸಿ

ಮುಳಗುಂದ: ಮಹಾತಾಯಿ ಮಲ್ಲಮ್ಮನ ಜೀವನದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಎಸ್‌.ಸಿ ಅಮರಶೆಟ್ಟರ ಹೇಳಿದರು.

Vijaya Karnataka 11 May 2019, 5:00 am
ಮುಳಗುಂದ: ಮಹಾತಾಯಿ ಮಲ್ಲಮ್ಮನ ಜೀವನದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಎಸ್‌.ಸಿ ಅಮರಶೆಟ್ಟರ ಹೇಳಿದರು.
Vijaya Karnataka Web follow the philosophy of hemareddy mallamma
ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶ ಅನುಸರಿಸಿ


ಪಟ್ಟಣದ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದ ಆವರಣದಲ್ಲಿ ರೆಡ್ಡಿ ಸಮುದಾಯದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸಮಾಜದ ಪ್ರತಿಯೊಬ್ಬರೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮಳ ಆದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದ ರಮೇಶ ಈಶ್ವರಪ್ಪ ಬಟ್ಟೂರ, ಸಂದೀಪ ಗುರುಶಿದ್ದಪ್ಪ ತಹಶಿಲ್ದಾರ, ಮಾಲತೇಶ ಬಸವರಾಜ ಬಟ್ಟೂರ ಅವರನ್ನು ಸನ್ಮಾನಿಸಿ ಮಾತನಾಡಿದ ಮಹಾದೇವಪ್ಪ ಬಟ್ಟೂರ, ಸಮಾಜದಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷ ಣವಂತರಾಗಬೇಕು. ಮತ್ತು ಹೇಮರೆಡ್ಡಿ ಮಲ್ಲಮ್ಮಳ ದೈವಭಕ್ತಿ , ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಪ್ಪ ಬಟ್ಟೂರ, ಮಹಾದೇವಪ್ಪ ಬಟ್ಟೂರ, ಚಂದ್ರಣ್ಣಾ ಬಟ್ಟೂರ, ಡಾ.ಸಂಜೀವರೆಡ್ಡಿ, ನಿಂಗರಾಜ ಬಟ್ಟೂರ,ಜಗದೀಶ ಬಟ್ಟೂರ, ಮಂಜುನಾಥ ಬಟ್ಟೂರ, ಬಸವರಾಜ ಬಟ್ಟೂರ, ಸಂತೋಷ ಬಟ್ಟೂರ, ರಾಜು ಬಟ್ಟೂರ, ಮಹಾದೇವಪ್ಪ ದೇವರೆಡ್ಡಿ ಹಾಗೂ ಸಮಾಜದ ಮಹಿಳೆಯರು ಮಕ್ಕಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ