ಆ್ಯಪ್ನಗರ

ಫುಟ್ಬಾಲ್‌ ಗೆಲುವಿನ ಸಂಭ್ರಮ

ಗದಗ: ಮಣಿಪುರ ರಾಜ್ಯದ ಇಂಫಾಲ್‌ನಲ್ಲಿ ನಡೆದ ಸ್ಟೂಡೆಂಟ್ಸ್‌ ಅಸೋಸಿಯೇಶನ್‌ 5 ನೇ ರಾಷ್ಟ್ರೀಯ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ನಗರದ ಜೇಸಿ ಪ್ರೌಢಶಾಲೆ ಕ್ರೀಡಾಪಟುಗಳು ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Vijaya Karnataka 22 Jan 2019, 5:00 am
ಗದಗ: ಮಣಿಪುರ ರಾಜ್ಯದ ಇಂಫಾಲ್‌ನಲ್ಲಿ ನಡೆದ ಸ್ಟೂಡೆಂಟ್ಸ್‌ ಅಸೋಸಿಯೇಶನ್‌ 5 ನೇ ರಾಷ್ಟ್ರೀಯ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ನಗರದ ಜೇಸಿ ಪ್ರೌಢಶಾಲೆ ಕ್ರೀಡಾಪಟುಗಳು ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Vijaya Karnataka Web football triumph
ಫುಟ್ಬಾಲ್‌ ಗೆಲುವಿನ ಸಂಭ್ರಮ


ತಂಡವನ್ನು ಶಾಲೆ ಆಡಳಿತ ಮಂಡಳಿ ಸದಸ್ಯ ಆರ್‌.ಕೆ.ಹಬೀಬ, ಟಿ.ಬಿ.ಸೋಮರೆಡ್ಡಿ ಆಡಳಿತಾಧಿಕಾರಿ ವಿದ್ಯಾ ಓದುಗೌಡರ, ಮುಖ್ಯಾದ್ಯಾಪಕಿ ಜಯಶ್ರೀ ಮಡಿವಾಳರ ಅವರು ಆರತಿ ಮಾಡಿ ಸ್ವಾಗತಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಫುಟ್ಬಾಲ್‌ ತರಬೇತುದಾರ ಸರ್ಫರಾಜ ಶೇಖ್‌ ಮಾತನಾಡಿ, ಸತತ ಪ್ರಯತ್ನಕ್ಕೆ ಸನ್ಮಾರ್ಗ ತೋರಿದ ಜೇಸಿ ಪ್ರೌಢಶಾಲೆ ಆಡಳಿತಮಂಡಳಿ ಸಹಕಾರವೇ ಸಾಧನೆಗೆ ಕಾರಣ ಎಂದರು.

ಇನ್ನೊಬ್ಬ ತರಬೇತುದಾರ ಶ್ಯಾಮ್‌ ಸನ್‌ ಡಾನ್‌ ಮಾತನಾಡಿ, ಜೇಸಿ ಪ್ರೌಢ ಶಾಲೆಯಲ್ಲಿ ಜೇಸಿ ಫ್ರೀಡಂ ಕಪ್‌ ಪಂದ್ಯಾವಳಿ ಆರಂಭಿಸುವ ಮೂಲಕ ಮಕ್ಕಳಲ್ಲಿ ಫುಟ್ಬಾಲಿನ ಸದಭಿರುಚಿ ಹೆಚ್ಚಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಆರ್‌.ಕೆ ಹಬೀಬ,ನಿಮ್ಮೆಲ್ಲರ ಸತತ ಪರಿಶ್ರಮವೇ ಈ ಗೆಲುವಿಗೆ ಮೂಲಕಾರಣ ಎಂದರು.

ಆರ್‌.ಎಸ್‌.ಬುರಡಿ ಮಾತನಾಡಿ, ಪ್ರತಿ ವರ್ಷ ಜೇಸಿ ಪ್ರೌಢಶಾಲೆಯಲ್ಲಿ ಆಯೋಜಿಸುವ ಜೇಸಿ ಫ್ರೀಡಂ ಕಪ್‌ ಫುಟ್ಬಾಲ್‌ ಪಂದ್ಯಾವಳಿಯಿಂದ ಮಕ್ಕಳಲ್ಲಿ ಫುಟ್ಬಾಲ್‌ ಆಡುವ ಆಸಕ್ತಿ ಹೆಚ್ಚಿಸಿದಂತಾಗಿದೆ. ಅಲ್ಲದೇ ಇಂಫಾಲ ನಗರದಲ್ಲಿನ ಚಳಿ ಲೆಕ್ಕಿಸದೇ ಆಟವಾಡಿದ ದೃಶ್ಯ ಅವರ ಆಸಕ್ತಿಗೆ ಹಿಡಿದ ಕನ್ನಡಿಯಂತಿತ್ತು ಎಂದು ಇಂಫಾಲದಲ್ಲಿನ ಅನುಭವ ಹಂಚಿಕೊಂಡರು.

ಮುಖ್ಯಾಧ್ಯಾಪಕಿ ಜಯಶ್ರೀ ಮಡಿವಾಳರ ಮಾತನಾಡಿ, ಕಠಿಣ ಪರಿಶ್ರಮ ಆತ್ಮವಿಶ್ವಾಸವಿದ್ದರೆ ಯಶ ತಾನಾಗಿಯೇ ಲಭಿಸುತ್ತದೆ ಎಂದರು.

ಆಡಳಿತ ಮಂಡಳಿ ಸದಸ್ಯ ಟಿ.ಬಿ.ಸೋಮರೆಡ್ಡಿ, ಆಡಳಿತಾಧಿಕಾರಿ ವಿದ್ಯಾ ಓದುಗೌಡರ ,ಶಾಲೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ