ಆ್ಯಪ್ನಗರ

ಹೆದ್ದಾರಿ ಪಕ್ಕದ ಫುಟ್‌ಪಾತ್‌ ತೆರವು

ನರಗುಂದ: ಹುಬ್ಬಳ್ಳಿ -ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಬಸ್‌ ನಿಲ್ದಾಣ ಮುಂದಿನ ಕಸದ ತೊಟ್ಟಿಯನ್ನು ತೆರವುಗೊಳಿಸಲು ಪೌರ ನೌಕರರು ಎರಡು ದಿನದಿಂದ ಹರಸಾಹಸ ಪಡುತ್ತಿದ್ದಾರೆ.

Vijaya Karnataka 24 Nov 2019, 5:00 am
ನರಗುಂದ: ಹುಬ್ಬಳ್ಳಿ -ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಬಸ್‌ ನಿಲ್ದಾಣ ಮುಂದಿನ ಕಸದ ತೊಟ್ಟಿಯನ್ನು ತೆರವುಗೊಳಿಸಲು ಪೌರ ನೌಕರರು ಎರಡು ದಿನದಿಂದ ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಕಸ ಎಸೆಯದಂತೆ ಪುರಸಭೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
Vijaya Karnataka Web 23NRD4_25
ನರಗುಂದ ಬಸ್‌ ನಿಲ್ದಾಣ ಮುಂದಿನ ಹೆದ್ದಾರಿ ಪಕ್ಕದ ಫುಟ್‌ಪಾತ್‌ನಲ್ಲಿರುವ ಕಸವನ್ನು ಪೌರ ನೌಕರರು ತೆರವುಗೊಳಿಸಿದರು.


ಫುಟ್‌ಪಾತ್‌ ಕಸದ ತೊಟ್ಟಿ ಕುರಿತು ವಿಜಯ ಕರ್ನಾಟಕ ವರದಿಗೆ ಸ್ಪಂದಿಸಿದ ಪುರಸಭೆ ಬಸ್‌ ನಿಲ್ದಾಣದ ಕಂಪೌಂಡ್‌ ಹಾಗೂ ಹೆದ್ದಾರಿ ಫುಟ್‌ಪಾತ್‌ಗೆ ಹೊಂದಿಕೊಂಡು ಆರೇಳು ಟ್ರ್ಯಾಕ್ಟರ್‌ನಷ್ಟು ಬಿದ್ದಿದ್ದ ಪ್ಲಾಸ್ಟಿಕ್‌ನಿಂದ ಕೂಡಿದ್ದ ರಾಶಿ ರಾಶಿಯಾಗಿ ಕಸ ತೆರವುಗೊಳಿಸಲು ಪೌರ ನೌಕರರು ಎರಡು ದಿನದಿಂದ ಶ್ರಮಿಸುತ್ತಿದ್ದಾರೆ.

ಬಸ್‌ ನಿಲ್ದಾಣದಿಂದ ಮತ್ತು ಹೆದ್ದಾರಿ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ಕಸ ತಂದು ಫುಟ್‌ಪಾತ್‌ನಲ್ಲಿಹಾಕುತ್ತಿದ್ದರು. ಹೆದ್ದಾರಿ ಕಾಮಗಾರಿ ಅರ್ಧದಲ್ಲೆಕೈಬಿಟ್ಟಿದ್ದರಿಂದ ಹೆದ್ದಾರಿ ಪಕ್ಕದ ಚರಂಡಿ ಮತ್ತು ಬಸ್‌ ನಿಲ್ದಾಣದ ಕಂಪೌಂಡ ಮಧ್ಯ ಇರುವ ಗುಂಡಿಯನ್ನು ಮುಚ್ಚದೆ ಕೈಬಿಟ್ಟಿದ್ದರಿಂದ ಕಸದ ತೊಟ್ಟಿಯಾಗಿ ನಿರ್ಮಾಣಗೊಳ್ಳಲು ಕಾರಣವಾಗಿತ್ತು. ಒಂದು ವರ್ಷದಿಂದ ಫುಟ್‌ಪಾತ್‌ ಪಕ್ಕದ ಗುಂಡಿ ಮಣ್ಣು ಹಾಕಿ ಮುಚ್ಚದೆ ಇದ್ದುದರಿಂದ ಆರೇಳು ಟ್ರ್ಯಾಕ್ಟರ್‌ನಷ್ಟು ಕಸ ಸಂಗ್ರಹಗೊಂಡಿತ್ತು. ಸಿಬ್ಬಂದಿ ಕೊರತೆಯಿಂದ ಪೌರ ನೌಕರರು ದಿನಕ್ಕೊಂದು ಟ್ರ್ಯಾಕ್ಟರ್‌ನಂತೆ ಎರಡುದಿನದಿಂದ ಕಸ ತೆರವುಗೊಳಿಸುತ್ತಿದ್ದಾರೆ.

ಬಸ್‌ ನಿಲ್ದಾಣದ ಕಸ ಎಸೆಯದಂತೆ ತಾಕೀತು ಮಾಡಿರುವ ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಸಂಗಮೇಶ ಬ್ಯಾಳಿ, ನಿತ್ಯ ಬೆಳಗ್ಗೆ ಬಸ್‌ ನಿಲ್ದಾಣಕ್ಕೆ ಬರುವ ಪುರಸಭೆ ವಾಹನದಲ್ಲಿಕಸ ಹಾಕುವಂತೆ ಸೂಚಿಸಿದ್ದು ಅಲ್ಲದೆ, ಹೆದ್ದಾರಿಗೆ ಹೊಂದಿಕೊಂಡಿರುವ ವ್ಯಾಪಾರಸ್ಥರಿಗೂ ಕಸ ಎಸೆಯಂದತೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ