ಆ್ಯಪ್ನಗರ

ಗಜೇಂದ್ರಗಡದಲ್ಲಿ ಫುಟ್‌ಪಾತ್‌ ಕಾರ್ಯಾಚರಣೆ

ಗಜೇಂದ್ರಗಡ : ತಾಲೂಕು ಕೇಂದ್ರ ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದಿನ ಪುರಸಭೆ ಸ್ವಾಧೀನದ ಜಾಗ ಆಕ್ರಮಿಸಿಕೊಂಡ ತಗಡಿನ ಚಾವಣಿ, ನಾಮಫಲಕಗಳನ್ನು ಜಿಲ್ಲಾ ಮತ್ತು ಪುರಸಭೆ ಅಧಿಕಾರಿಗಳ ತಂಡ ಜೆಸಿಬಿ ಯಂತ್ರದಿಂದ ಫುಟ್‌ಪಾತ್‌ ಆಪರೇಷನ್‌ ಕಾರ್ಯಾಚರಣೆ ನಡೆಸುವ ಮೂಲಕ ಮಂಗಳವಾರ ತೆರವುಗೊಳಿಸಲಾಯಿತು.

Vijaya Karnataka 31 Jul 2019, 5:00 am
ಗಜೇಂದ್ರಗಡ : ತಾಲೂಕು ಕೇಂದ್ರ ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದಿನ ಪುರಸಭೆ ಸ್ವಾಧೀನದ ಜಾಗ ಆಕ್ರಮಿಸಿಕೊಂಡ ತಗಡಿನ ಚಾವಣಿ, ನಾಮಫಲಕಗಳನ್ನು ಜಿಲ್ಲಾ ಮತ್ತು ಪುರಸಭೆ ಅಧಿಕಾರಿಗಳ ತಂಡ ಜೆಸಿಬಿ ಯಂತ್ರದಿಂದ ಫುಟ್‌ಪಾತ್‌ ಆಪರೇಷನ್‌ ಕಾರ್ಯಾಚರಣೆ ನಡೆಸುವ ಮೂಲಕ ಮಂಗಳವಾರ ತೆರವುಗೊಳಿಸಲಾಯಿತು.
Vijaya Karnataka Web footpath operation in gajendragad
ಗಜೇಂದ್ರಗಡದಲ್ಲಿ ಫುಟ್‌ಪಾತ್‌ ಕಾರ್ಯಾಚರಣೆ


ಗದಗ ರಸ್ತೆಯ ಬಸ್‌ ನಿಲ್ದಾಣದಿಂದ ಶ್ರೀ ಕಾಲಕಾಲೇಶ್ವರ ವೃತ್ತದವರೆಗಿನ ಜೋಡು ರಸ್ತೆ ಅಕ್ಕ ಪಕ್ಕದ ಅಂಗಡಿಗಳ ಮುಂದೆ ನಿರ್ಮಿಸಿರುವ ಚಾವಣಿ ತಗಡುಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವಿಗೆ ಮುಂದಾದಾಗ ಕೆಲ ವರ್ತಕರು ಆಕ್ಷೇಪ ಎತ್ತಿದರು. ಆಗ ಅಧಿಕಾರಿಗಳು ಮತ್ತು ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪಿಡಿಒ ಎಸ್‌. ರುದ್ರೇಶ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮಾ ನಾಯಕ, ಎಂಜಿನಿಯರ್‌ ಮರಿಗೌಡ್ರ, ಪುರಸಭೆ ಸಿಬ್ಬಂದಿ, ರಾಘು ಮಂತಾ, ಪಿ. ಎನ್‌. ದೊಡ್ಡಮನಿ, ಎನ್‌.ಎ. ಸಾಂಗ್ಲಿಕರ್‌, ನಿಂಗಪ್ಪ ಮೂಲಿಮನಿ, ಸಿವಪ್ಪ ಸೂಡಿ, ಮಾರುತಿ ಅಬ್ಬಿಗೇರಿ ಇನ್ನಿತರು ಪುರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಆ.3 ರಂದು ಮತ್ತೆ ಕಾರ್ಯಾಚರಣೆ
ಅಂಗಡಿಗಳ ಮುಂದಿರುವ ತಗಡಿನ ಚಾವಣಿ ತೆರವಿಗೆ ಮೊದಲೇ ನೋಟಿಸ್‌ ನೀಡಲಾಗಿದೆ. ಅದೇ ರೀತಿ ಆ. 3 ರಂದು ಬೆಳಗ್ಗೆ 5 ಗಂಟೆಯಿಂದ ತೆರವು ಕಾರ್ಯಾಚರಣೆ ನಡೆಯಲಿದ್ದು, ಜೋಡು ರಸ್ತೆ, ರೋಣ, ಕುಷ್ಟಗಿ ರಸ್ತೆ ಅಕ್ಕ ಪಕ್ಕದ ಫುಟ್‌ಪಾತ್‌ ಮೇಲಿನ ಚಾವಣಿ ಸ್ವಯಂ ತೆರವಿಗೆ ಅವಕಾಶ ನೀಡಲಾಗಿದೆ ಎಂದು ಪಿಡಿಒ ಎಸ್‌. ರುದ್ರೇಶ ತಿಳಿಸಿದರು.

30ಜಿಜೆಡಿ2, 2ಎ ಗಜೇಂದ್ರಗಡ ಶ್ರೀ ಕಾಲಕಾಲೇಶ್ವರ ವೃತ್ತದ ಬಳಿಯಲ್ಲಿ ಮಂಗಳವಾರ ಪುರಸಭೆ ಸ್ವಾಧೀನದ ಜಾಗ ಆಕ್ರಮಿಸಿಕೊಂಡ ತಗಡಿನ ಚಾವಣಿ, ನಾಮಫಲಕಗಳನ್ನು ಜಿಲ್ಲಾ ಮತ್ತು ಪುರಸಭೆ ಅಧಿಕಾರಿಗಳ ತಂಡ ಜೆಸಿಬಿ ಯಂತ್ರದಿಂದ ತೆರವುಗೊಳಿಸುವ ಮೂಲಕ ಫುಟ್‌ಪಾತ್‌ ಆಪರೇಷನ್‌ ಕಾರ್ಯಾಚರಣೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ