ಆ್ಯಪ್ನಗರ

ಉಚಿತ ಆರೋಗ್ಯ ತಪಾಸಣೆ ಶಿಬಿರ ಇಂದು

ಗದಗ: ಬಸವೇಶ್ವರ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಆ.9 ರಂದು ಬೆಳಗ್ಗೆ 10.30ಕ್ಕೆ ಸ್ವದೇಶಿ ಸ್ವಾಭಿಮಾನ ಕೇಂದ್ರ, ಶಂಕರಲಿಂಗ ದೇವಸ್ಥಾನ, ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ಸಹಯೋಗದಲ್ಲಿ ಮಾ ಗೋ ಪ್ರಾಡಕ್ಟ್ಸ್ ಪ್ರೈ.ಲಿ ವತಿಯಿಂದ ಪಂಚಗವ್ಯ ಆಯುರ್ವೇದಿಕ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.

Vijaya Karnataka 9 Aug 2019, 5:00 am
ಗದಗ: ಬಸವೇಶ್ವರ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಆ.9 ರಂದು ಬೆಳಗ್ಗೆ 10.30ಕ್ಕೆ ಸ್ವದೇಶಿ ಸ್ವಾಭಿಮಾನ ಕೇಂದ್ರ, ಶಂಕರಲಿಂಗ ದೇವಸ್ಥಾನ, ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ಸಹಯೋಗದಲ್ಲಿ ಮಾ ಗೋ ಪ್ರಾಡಕ್ಟ್ಸ್ ಪ್ರೈ.ಲಿ ವತಿಯಿಂದ ಪಂಚಗವ್ಯ ಆಯುರ್ವೇದಿಕ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
Vijaya Karnataka Web free health checkup camp today
ಉಚಿತ ಆರೋಗ್ಯ ತಪಾಸಣೆ ಶಿಬಿರ ಇಂದು


ಡಾ.ಡಿ.ಪಿ.ರಮೇಶ , ಡಾ.ಅನಿಲ ತಮ್ಮಣ್ಣವರ ರೋಗಿಗಳನ್ನು ತಪಾಸಣೆ ಮಾಡುವರು. ಮಧುಮೇಹ, ಗಂಟು, ಸಂದೀನೋವು, ಗ್ಯಾಸ್‌ ಸಮಸ್ಯೆ, ಸಿಹಿಮೂತ್ರ, ಮಲಬದ್ಧತೆ, ಅತಿಸಾರ, ಸೋರಿಯಾಸಿಸ್‌, ಅಜೀರ್ಣ, ಅಸ್ತಮಾ, ಬೇಧಿ, ಮೂಲವ್ಯಾದಿ, ನಿದ್ರಾಹೀನತೆ, ಸ್ತ್ರೀರೋಗಗಳು, ಚರ್ಮರೋಗ, ಆರ್ತರಿಟಿಸ್‌, ಕ್ಯಾನ್ಸರ್‌, ಕ್ಷ ಯ ಮಾನಸಿಕ ಆರೋಗ್ಯ, ಸೌಂದರ್ಯ ಸಮಸ್ಯೆ ಮುಂತಾದ ಮಹಾರೋಗಗಳ ನಿವಾರಣೆಗೂ ಗೋಜನ್ಯ ವಸ್ತುಗಳಿಂದ ತಯಾರು ಮಾಡಿದ ಔಷಧಿಗಳಲ್ಲಿ ಪರಿಹಾರ ನೀಡುವರು. ಈ ಶಿಬಿರಕ್ಕೆ ಆಗಮಿಸುವ ರೋಗಿಗಳು ತಮ್ಮಲ್ಲಿರುವ ಖಾಯಿಲೆಗೆ ಸಂಬಂಧಪಟ್ಟ ಹಿಂದಿನ ದಾಖಲಾತಿ ತರಬೇಕು. ಶಿಬಿರದ ಸ್ಥಳದಲ್ಲಿ ಗೋಜನ್ಯ ಔಷಧಗಳ ಪ್ರದರ್ಶನ ಮತ್ತು ಮಾರಾಟ ಲಭ್ಯವಿರುತ್ತವೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ