ಆ್ಯಪ್ನಗರ

ಇಲ್ಲಿಂದ ಅಲ್ಲಿಗೆ... ಅಲ್ಲಿಂದ ಇನ್ನೆಲ್ಲಿಗೆ ?

ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರದಲ್ಲಿರುವ ಅಂಗನವಾಡಿ (153) ಕಟ್ಟಡದ ಮೇಲ್ಛಾವಣಿ ಮೇಲ್ಪದರು ಕುಸಿದು ಕೇಂದ್ರದಲ್ಲಿನ ಮಕ್ಕಳು ಗಾಯಗೊಂಡ ಘಟನೆ ನಂತರ 3 ದಿನಗಳ ಕಾಲ ಬೀರೇಶ್ವರ ದೇವಸ್ಥಾನದಲ್ಲಿ ಅಂಗನವಾಡಿ ನಡೆಸಲಾಗಿತ್ತು.

Vijaya Karnataka 4 Mar 2019, 5:00 am
ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರದಲ್ಲಿರುವ ಅಂಗನವಾಡಿ (153) ಕಟ್ಟಡದ ಮೇಲ್ಛಾವಣಿ ಮೇಲ್ಪದರು ಕುಸಿದು ಕೇಂದ್ರದಲ್ಲಿನ ಮಕ್ಕಳು ಗಾಯಗೊಂಡ ಘಟನೆ ನಂತರ 3 ದಿನಗಳ ಕಾಲ ಬೀರೇಶ್ವರ ದೇವಸ್ಥಾನದಲ್ಲಿ ಅಂಗನವಾಡಿ ನಡೆಸಲಾಗಿತ್ತು.
Vijaya Karnataka Web GDG-03LXR01A
ತಾಲೂಕಿನ ಬಾಲೆಹೊಸೂರುದಲ್ಲಿರುವ ಮೇಲ್ಛಾವಣೆ ಕುಸಿದ ಅಂಗನವಾಡಿ ಕಟ್ಟಡ.


ನಂತರ ಯಾವುದಾದರೂ ಬಾಡಿಗೆ ಮನೆಯೊಂದರಲ್ಲಿ ಅಂಗನವಾಡಿ ಆರಂಭಿಸಬೇಕು ಎಂಬ ಸೂಚನೆ ಮೆರೆಗೆ ಈಗ ಮಲ್ಲಪ್ಪ ಮಾಯಕೊಂಡ ಅವರ ಮನೆಯೊಂದರಲ್ಲಿ ಆರಂಭಿಸಲಾಗಿದೆ. ಕೇವಲ 15 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡ ಮೇಲ್ಛಾವಣಿ ಮೆಲ್ಪದರು ಕುಸಿದು ಬಿದ್ದಿದ್ದನ್ನು ಇಲಾಖೆಯವರು 50 ಸಾವಿರ ರೂ.ವೆಚ್ಚದಲ್ಲಿ ಈ ಕಟ್ಟಡದ ದುರಸ್ತಿಗಾಗಿ ಮುಂದಾಗಿದ್ದರು. ಆದರೆ ಗ್ರಾಮಸ್ಥರು ಇದಕ್ಕೆ ತಕರಾರು ತೆಗೆದು ದುರಸ್ತಿ ಬೇಡ ಹೊಸ ಕಟ್ಟಡ ನಿರ್ಮಿಸುವುದಾದರೆ ಮಾತ್ರ ನಾವು ಒಪ್ಪಿಗೆ ನೀಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಮಕ್ಕಳು ಆ ಕಟ್ಟಡದಲ್ಲಿ ಹೇಗೆ ಇರಬೇಕು. ಇಂತಹ ಘಟನೆ ಮತ್ತೆ ನಡೆದರೆ ಯಾರು ಹೊಣೆ ? ಆ ಕಟ್ಟಡ ದುರಸ್ತಿ ಮಾಡುವ ಬದಲು ನೂತನ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಇದಕ್ಕೆ ಸಂಬಂಧ ಪಟ್ಟಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡದ ಅವ್ಯವಸ್ಥೆ ಕುರಿತು ಜಿಲ್ಲಾ ಪಂಚಾಯತರಾಜ್‌ ಎಂಜನಿಯರಿಂಗ್‌ ಇಲಾಖೆಗೆ ಈ ಕುರಿತು ವರದಿ ನೀಡುವಂತೆ ಪತ್ರವನ್ನು ಬರೆದಿದೆ.

ಈ ವರದಿ ಇಲಾಖೆಯ ಕೈ ಸೇರಿದ ಮೇಲೆ ಕಟ್ಟಡ ದುರಸ್ತಿ ಮಾಡಬೇಕೊ ಅಥವಾ ನೂತನ ಕಟ್ಟಡಕ್ಕೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂಬುವ ಗೊಂದಲದಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ.

ಮಕ್ಕಳನ್ನು ಕರೆದುಕೊಂಡು ಗುಡಿ, ಗುಂಡಾರ ಮನೆ-ಮನೆಗೆ ಅಲೆಯುವುದಕ್ಕಿಂತಲೂ ಅಂಗನವಾಡಿ ಕಟ್ಟಡಗಳ ನಿರ್ವಹಣೆಗಾಗಿರುವ ಅನುದಾನ ಕ್ರೂಢಿಕರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಒಳಿತು ಎಂಬುದು ಪ್ರಜ್ಞಾವಂತರ ಅನಿಸಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ