ಆ್ಯಪ್ನಗರ

ಮಕ್ಕಳಿಂದ ಹುಯ್ಯೋ ಹುಯ್ಯೋ ಮಳೆರಾಯ...!

ರೋಣ: ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು,ಮಳೆಗಾಗಿ ದೇವರ ಮೊರೆ ಹೋಗಿರುವ ಸಾರ್ವಜನಿಕರು ಪೂಜೆ ಪುನಸ್ಕಾರ ಮಾಡುವುದು ಒಂದೆಡೆಯಾದರೆ, ತಾಲೂಕಿನ ಜಕ್ಕಲಿ ಗ್ರಾಮದ ಜನತೆ ಎಳೆಯ ಮಕ್ಕಳಿಂದ ಹುಯ್ಯೋ ಹುಯ್ಯೋ ಮಳೆರಾಯ ಎಂಬ ವಿಶಿಷ್ಟ ಆಚರಣೆ ಮೂಲಕ ವರುಣ ದೇವನ ಒಲುಮೆ ಮುಂದಾಗಿದ್ದಾರೆ.

Vijaya Karnataka Web 19 May 2019, 5:00 am
ರೋಣ: ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು,ಮಳೆಗಾಗಿ ದೇವರ ಮೊರೆ ಹೋಗಿರುವ ಸಾರ್ವಜನಿಕರು ಪೂಜೆ ಪುನಸ್ಕಾರ ಮಾಡುವುದು ಒಂದೆಡೆಯಾದರೆ, ತಾಲೂಕಿನ ಜಕ್ಕಲಿ ಗ್ರಾಮದ ಜನತೆ ಎಳೆಯ ಮಕ್ಕಳಿಂದ ಹುಯ್ಯೋ ಹುಯ್ಯೋ ಮಳೆರಾಯ ಎಂಬ ವಿಶಿಷ್ಟ ಆಚರಣೆ ಮೂಲಕ ವರುಣ ದೇವನ ಒಲುಮೆ ಮುಂದಾಗಿದ್ದಾರೆ.
Vijaya Karnataka Web from the children hi or rain rain
ಮಕ್ಕಳಿಂದ ಹುಯ್ಯೋ ಹುಯ್ಯೋ ಮಳೆರಾಯ...!


ಕೆಲವೆಡೆ ಕಪ್ಪೆ,ಕತ್ತೆ ಮದುವೆ ಮತ್ತು ಇನ್ನು ಹಲವೆಡೆ ವಾರಪೂರ್ತಿ ದೇವಾಲಯಗಳಲ್ಲಿ ಅಭಿಷೇಕ ಕಾರ‍್ಯ ಭರ್ಜರಿಯಾಗಿಯೇ ನಡೆಯುತ್ತಿವೆ.ಅಂತೆಯೇ ಜಕ್ಕಲಿ ಗ್ರಾಮದಲ್ಲಿ ಶುಕ್ರವಾರ ನಾನಾ ದೇವಾಲಗಳಿಗೆ ನೀರು ಹಾಕುವ ಮೂಲಕ ಮಕ್ಕಳು ಪೂಜೆ ಸಲ್ಲಿಸಿ ಮಳೆಗಾಗಿ ಪಾರ್ಥಿಸಲಾಗುತ್ತಿದೆ. ಈ ಬಾರಿ ಮೇ ಮೂರನೇ ವಾರ ಕಳೆಯುತ್ತ ಬಂದರೂ 'ಮುಂಗಾರು ಕಾಣುತ್ತಿಲ್ಲ' ಮಳೆ ಸಂಪೂರ್ಣ ವೈಫಲ್ಯ ಕಂಡು ಎಲ್ಲೆಡೆ ಅನಾವೃಷ್ಠಿ ಎದುರಾಗಿದೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಜಕ್ಕಲಿ ಗ್ರಾಮದ ವಿವಿಧ ದೇವಾಲಗಳಲ್ಲಿ ಸಾಮೂಹಿಕ ಪೂಜೆ, ದೇವರಿಗೆ ನೀರೆರೆಯುವ ಕಾರ್ಯ ನಡೆಸಲಾಯಿತು.

ಅಡಕೇಶ್ವರ,ಮಡಿಕೇಶ್ವರ ಉಘೇ ಉಘೇ : ಅಡಿಕೇಶ್ವರ,ಮಡಿಕೇಶ್ವರ ಉಘೇ ಉಘೇ ಎಂಬ ನಾದಘೋಶ ಮೊಳಗಿದ್ದು ಜಕ್ಕಲಿ ಗ್ರಾಮದಲ್ಲಿ ಮಕ್ಕಳು ತಣ್ಣಿರು ಸ್ನಾನ ಮಾಡಿ, ವದ್ದೆ ಮೈಯಿಗೆ ವಿಭೂತಿ ಧರಿಸಿ ಭುಜದ ಮೇಲೆ ತುಂಬಿದ ಕೊಡ ಹೊತ್ತು ನಾದಗೋಷಗಳಿಂದ ದೇವಸ್ಥಾನಕ್ಕೆ ತೆರಳಿ ದೇವರಿಗೆ ನೀರು ಹಾಕಿದರು. ಬೆಳಗಿನ 7ಕ್ಕೆ ಆರಂಭವಾದ ಮಳೆಗಾಗಿ ಪ್ರಾರ್ಥನೆ ಕಾರ್ಯ ಬೆಳಗ್ಗೆ 9 ರ ವರೆಗೂ ನಿರಂತರವಾಗಿ ನಡೆಯಿತು. ಮಕ್ಕಳ ಕಾರ್ಯಕ್ಕೆ ಗ್ರಾಮದ ಹಿರಿಯರು ಸಾಥ್‌ ನೀಡಿದರು.ಇದು ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಡೆಯುವ ಭಕ್ತಿಯ ಪರಾಕಾಷ್ಟೆ.

ಸಾಮರಸ್ಯದ ಪ್ರಾರ್ಥನೆ : ವಾಡಿಕೆಯಂತೆ ತಾಲೂಕಿನಲ್ಲಿ ಮೇ ತಿಂಗಳಲ್ಲಿ ಬರಬೇಕಿದ್ದ ಮುಂಗಾರು ಕ್ಷೀಣಗೊಂಡು ಬರಗಾಲದ ಛಾಯೆ ನಿರ್ಮಾಣವಾಗಿರುವುದರಿಂದ ಗ್ರಾಮದ ಬಸವೇಶ್ವರ, ವೀರಭದ್ರೇಶ್ವರ, ಅಡಿಕೇಶ್ವರ,ಮಡಿಕೇಶ್ವರ, ಮಹಾಂತಮಲ್ಲಯ್ಯ ದೇವಾಲಯಗಳು ಸೇರಿದಂತೆ ಗ್ರಾಮದ ಮಸೀದಿಗಳಿಗೂ ಧರ್ಮಭೇದ ಮರೆತು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಜತೆಗೆ ದೇವಾಲಯಗಳಿಗೆ ನೀರೇರೆಯುವ ಕಾರ್ಯ ನಡೆಯಿತು.

ಈ ಬಾರಿ ತಾಲೂಕಿನ ಎಲ್ಲ ಭಾಗಗಳಲ್ಲಿ ಮಳೆಯ ಕೊರತೆ ಮತ್ತಷ್ಟು ಕಡಿಮೆಯಾಗುತ್ತಿದೆ.ಮತ್ತೊಂದು ಬರಗಾಲ ಆವರಿಸುವುದೇ ಎಂಬ ಚಿಂತೆ ಕಾಡಲಾರಂಭಿಸಿದೆ. ಮುಂಗಾರು ಬಿತ್ತನೆಗೆ, ಕುಡಿಯುವ ನೀರಿಗೆ, ತೋಟಗಾರಿಕೆಗೆ ವಿದ್ಯುತ್‌ ಉತ್ಪಾದನೆಗೆ ಮಳೆಯೇ ಆಧಾರವಾಗಿರುವುದರಿಂದ ಬರಗಾಲದ ಸಂಕಷ್ಟದಿಂದ ಪಾರಾಗಲು ವರುಣ ದೇವನನ್ನು ಪ್ರಾರ್ಥಿಸುವುದೇ ಅದೂ ಮಕ್ಕಳಿಂದ ಉಳಿದಿರುವ ದಾರಿ ಎಂದ ಅರಿತ ಗ್ರಾಮಸ್ಥರು ನಾನಾ ದೇವರ ಮೊರೆ ಹೋಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ