ಆ್ಯಪ್ನಗರ

ಗದಗ : ಅನುದಾನ ಸದ್ಭಳಕೆಯಾಗಲಿ

ಗದಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ದೌರ್ಜನ್ಯ ನಡೆಯದಂತೆ ನಿಯಂತ್ರಿಸಬೇಕು. ಸರಕಾರ ಪರಿಶಿಷ್ಟರ ಕಲ್ಯಾಣಕ್ಕೆ ನೀಡಿದ ಅನುದಾನ ಸದ್ಭಳಕೆ ಆಗÜಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಹೇಳಿದರು.

Vijaya Karnataka 16 Sep 2020, 5:00 am
ಗದಗ: ಜಿಲ್ಲೆಯಲ್ಲಿಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ದೌರ್ಜನ್ಯ ನಡೆಯದಂತೆ ನಿಯಂತ್ರಿಸಬೇಕು. ಸರಕಾರ ಪರಿಶಿಷ್ಟರ ಕಲ್ಯಾಣಕ್ಕೆ ನೀಡಿದ ಅನುದಾನ ಸದ್ಭಳಕೆ ಆಗÜಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಹೇಳಿದರು.
Vijaya Karnataka Web 15RUDRAGOUD1_25
ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿನಡೆದ ಎಸ್‌ಸಿಪಿ,ಟಿಎಸ್‌ಪಿ ಪ್ರಗತಿ ಪರಿಶೀಲನೆ ಹಾಗೂ ಸಫಾಯಿ ಕರ್ಮಚಾರಿ,ಮ್ಯಾನ್ಯುಯಲ್‌ ಸ್ಕಾತ್ರ್ಯವೆಂಜರ್ಸ್ಗಳ ತ್ರೈಮಾಸಿಕ ಸಭೆಯಲ್ಲಿಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಮಾತನಾಡಿದರು.


ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದೌರ್ಜನ್ಯ ನಿಯಂತ್ರಣ ಜಾಗೃತ ಸಮಿತಿ, ಎಸ್‌ಸಿಪಿ,ಟಿಎಸ್‌ಪಿ ಪ್ರಗತಿ ಪರಿಶೀಲನೆ ಹಾಗೂ ಸಫಾಯಿ ಕರ್ಮಚಾರಿ,ಮ್ಯಾನ್ಯುಯಲ್‌ ಸ್ಕಾತ್ರ್ಯವೆಂಜರ್ಸ್ಗಳ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯದಂತಹ ಪ್ರಕರಣ ವರದಿಯಾಗದಂತೆ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಸರಕಾರದ ಸೌಲಭ್ಯ ಮತ್ತು ಆರ್ಥಿಕ ಪರಿಹಾರ ಒದಗಿಸಬೇಕು. ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಬೇಕು ಎಂದರು.

ಪಜಾ ಮತ್ತು ಪಪಂ ಕಲ್ಯಾಣಕ್ಕೆ ಮೀಸಲಿರುವ ಅನುದಾನವನ್ನು ಪೂರ್ಣ ಬಳಕೆ ಮಾಡಬೇಕು. ಸಮುದಾಯ ಭವನಗಳ ನವೀಕರಣ, ಪರಿಶಿಷ್ಟರ, ಮ್ಯಾನ್ಯುಯಲ್‌ ಸ್ಕಾತ್ರ್ಯವೆಂಜರ್ಸ್ ಹಾಗೂ ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗಾಗಿ ಶೇ.24.10ರಷ್ಟು ಮೀಸಲು ಅನುದಾನ ಬಳಕೆ ಮಾಡಿಕೊಳ್ಳಬಹುದು. ಯಾವಗಲ್‌, ಮಾಳವಾಡ ಗ್ರಾಮದಲ್ಲಿಸ್ಮಶಾನ ಭೂಮಿಗೆ ನಿವೇಶನ ಲಭ್ಯವಿದೆ. ಮುಗಳಿ ಗ್ರಾಮದಲ್ಲಿರುದ್ರಭೂಮಿಗಾಗಿ ಖಾಸಗಿಯವರಿಂದ ಖರೀದಿಸುವ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿಹಂತ ಹಂತವಾಗಿ ವ್ಯಕ್ತಿಗತ ಚಟುವಟಿಕೆ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಬಿಡುಗಡೆ ಆಗುವ ಹಾಗೂ ಬಾಕಿ ಉಳಿಸ ಅನುದಾನವನ್ನು ಮಾರ್ಚ್ ತಿಂಗಳೊಳಗೆ ಖರ್ಚು ಮಾಡಬೇಕು.

ಸ್ವಚ್ಛತಾ ಸಿಬ್ಬಂದಿಗೆ ಅವಶ್ಯವಿರುವ ಸುರಕ್ಷತಾ ಪರಿಕರ ವಿತರಿಸಬೇಕು. ಜಿಲ್ಲೆಯಲ್ಲಿಶೌಚಾಲಯ, ಒಳಚರಂಡಿ ಹಾಗೂ ತೆರೆÜದ ಗುಂಡಿ ಸೇರಿದಂತೆ ಯಾವುದೇ ಅನೈರ್ಮಲ್ಯ ಸ್ಥಳಗಳಲ್ಲಿಮ್ಯಾನ್ಯುಯಲ್‌ ಸ್ಕಾತ್ರ್ಯವೆಂಜಿಂಗ್‌ ಆಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜಾತಿ ನಿಂದನೆ ಹಾಗೂ ಅತ್ಯಾಚಾರ ಸೇರಿದಂತೆ ಜಿಲ್ಲೆಯಲ್ಲಿಒಟ್ಟು 12 ಪ್ರಕರಣ ದಾಖಲಾಗಿವೆ.ಒಟ್ಟು 17 ಜನ ಸಂತ್ರಸ್ತರಿಗೆ 7.75 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂದರು.

ಜಿಪಂ ಸಿಇಒ ಡಾ.ಆನಂದ ಕೆ., ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌, ನಗರಸಭೆ ಯೋಜನಾಧಿಕಾರಿ ಎಸ್‌.ಎನ್‌. ರುದ್ರೇಶ್‌, ತಹಸೀಲ್ದಾರರು, ತಾಪಂ ಇಒಗಳು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾಮಟ್ಟದ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ