ಆ್ಯಪ್ನಗರ

ಗದಗ; ಕಾಂಗ್ರೆಸ್‌ನ ಸುಳ್ಳಿನ ಬಾಗಿಲು ಬಂದ್

ಗದಗ: ಪ್ರಧಾನಿ ಮೋದಿ ಅವರು ಮುಂದಿನ 10 ವರ್ಷ ಮೀಸಲಾತಿ ಮುಂದುವರಿಸುವ ಘೋಷಣೆ ಮಾಡಿದ್ದರಿಂದ ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳುವ ಬಾಗಿಲು ಮುಚ್ಚಿದಂತಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಹೇಳಿದರು.

Vijaya Karnataka 24 Nov 2020, 5:00 am
ಗದಗ: ಪ್ರಧಾನಿ ಮೋದಿ ಅವರು ಮುಂದಿನ 10 ವರ್ಷ ಮೀಸಲಾತಿ ಮುಂದುವರಿಸುವ ಘೋಷಣೆ ಮಾಡಿದ್ದರಿಂದ ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳುವ ಬಾಗಿಲು ಮುಚ್ಚಿದಂತಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಹೇಳಿದರು.
Vijaya Karnataka Web 23SALIM2_25
ಗದಗ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಮಾತನಾಡಿದರು.


ಸೋಮವಾರ ನಗರದ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಿಜೆಪಿ ದಲಿತ ವಿರೋಧಿ ಪಕ್ಷ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿಮೀಸಲಾತಿ ರದ್ದಾಗುತ್ತದೆ. ಬಿಜೆಪಿ ನಾಯಕರಿಗೆ ಅಂಬೇಡ್ಕರ್‌ ಬಗ್ಗೆ ಗೌರವ ಇಲ್ಲಎಂದೆಲ್ಲಾಹಸಿ ಸುಳ್ಳು ಹೇಳುತ್ತಲೆ ಕಾಂಗ್ರೆಸ್‌ ರಾಜಕಾರಣ ಮಾಡಿದ್ದು ದಲಿತ ಸಮುದಾಯದವರಿಗೆ ಅರ್ಥವಾಗಿದೆ. ಆ ಕಾರಣಕ್ಕಾಗಿ ದೇಶದಲ್ಲಿನಡೆಯುತ್ತಿರುವ ಚುನಾವಣೆಗಳಲ್ಲಿಕಾಂಗ್ರೆಸ್ಸಿಗೆ ಸಾಲು ಸಾಲು ಸೋಲು ಎದುರಾಗುತ್ತಿರುವುದೇ ಸಾಕ್ಷಿ ಎಂದರು.

ಸದಾಶಿವ ವರದಿ ಆಯೋಗ ಜಾರಿ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ ನಾರಾಯಣಸ್ವಾಮಿ, 2008ರಲ್ಲಿಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಸದಾಶಿವ ಆಯೋಗ ರಚನೆ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದರು. ಮುಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂತು. ಸರಕಾರದ ಮುಂದೆ ಆಯೋಗದ ವರದಿ ಇದ್ದಾಗ ವರದಿ ಜಾರಿ ಬಗ್ಗೆ ಕಿಂಚಿತ್ತೂ ಮಾತಾಡದೆ ಈಗ ಯಥಾವತ್‌ ಜಾರಿ ಮಾಡಿ ಎಂದು ಒತ್ತಾಯಿಸುತ್ತಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ ಅವರು, ವರದಿ ಜಾರಿ ಬಗ್ಗೆ ಸದನದಲ್ಲಿಚರ್ಚೆ ಆಗಬೇಕು. ಪರ-ವಿರೋಧ ಅಭಿಪ್ರಾಯ ಪಡೆದು ಜಾರಿ ಮಾಡಬೇಕು. ಬಿಎಸ್‌ವೈ ನೇತೃತ್ವದ ಸರಕಾರ ಆ ಕೆಲಸ ಮಾಡಲಿದೆ ಎಂದರು.

ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ರಾಜ್ಯ ಉಪಾಧ್ಯಕ್ಷ ಬಸವರಾಜ ನಾಯ್ಕ, ಈಶಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಪಡಿಯಪ್ಪ ಪೂಜಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್‌. ಕರಿಗೌಡ್ರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ