ಆ್ಯಪ್ನಗರ

ರಂಗಭೂಮಿಗೆ ಗದುಗಿನ ಕೊಡುಗೆ ಅಪಾರ

ಗದಗ: ರಂಗಭೂಮಿಗೆ ಗದುಗಿನ ಕೊಡುಗೆ ಬಹು ದೊಡ್ಡದು ಎಂದು ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜಸ್ವಾಮಿ ಹಿಡ್ಕಿಮಠ ಅಭಿಪ್ರಾಯಪಟ್ಟರು.

Vijaya Karnataka 13 Dec 2019, 5:00 am
ಗದಗ: ರಂಗಭೂಮಿಗೆ ಗದುಗಿನ ಕೊಡುಗೆ ಬಹು ದೊಡ್ಡದು ಎಂದು ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜಸ್ವಾಮಿ ಹಿಡ್ಕಿಮಠ ಅಭಿಪ್ರಾಯಪಟ್ಟರು.
Vijaya Karnataka Web gaddus contribution to theater is immense
ರಂಗಭೂಮಿಗೆ ಗದುಗಿನ ಕೊಡುಗೆ ಅಪಾರ


ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿಗುರುಪುಟ್ಟರಾಜ ಕಲಾಪೋಷಕರ ಸಂಘ ಹಾಗೂ ಜನಪರ ಹೋರಾಟ ವೇದಿಕೆ ಏರ್ಪಡಿಸಿದ್ದ ಸಭೆಯಲ್ಲಿವೇದಿಕೆಯ ಗೌರವ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡು ಸನ್ಮಾನಿತರಾಗಿ ಅವರು ಮಾತನಾಡಿದರು.

ಗದಗ ಪರಿಸರದಲ್ಲಿಮಲ್ಲಮ್ಮ ಹಾಗೂ ಪುಷ್ಪಾ ನಾಟಕ ಕಂಪನಿಗಳು ನಿರಂತರವಾಗಿ ರಂಗಭೂಮಿಗೆ ತೊಡಗಿಸಿಕೊಂಡಿದ್ದನ್ನು ಸ್ಮರಿಸಿಕೊಂಡರು. ಕುಮಾರೇಶ್ವರ ಕೃಪಾಪೋಷಿತ ಪಂ.ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ ಕಳೆದ 75 ಕ್ಕೂ ಹೆಚ್ಚು ಕಾಲ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿ ರಂಗಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿಕಾರ್ಯನಿರತವಾಗಿದೆ. ಆಂಧ್ರಪ್ರದೇಶ ಗಡಿ ಭಾಗದಲ್ಲೂಪ್ರದರ್ಶನ ನೀಡಿರುವ ಈ ನಾಟಕ ಮಂಡಳಿಯಲ್ಲಿಪುರುಷರೇ ಮಹಿಳೆಯರ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ ಎಂದರು.

ಗುರುಪುಟ್ಟರಾಜ ಕಲಾಪೋಷಕರ ಸಂಘ ಹಾಗೂ ಜನಪರ ಹೋರಾಟ ವೇದಿಕೆಯು ಗುರುಪುಟ್ಟರಾಜ ಕವಿಗವಾಯಿಗಳ ಹೆಸರಿನಲ್ಲಿಕಲಾಪೋಷಕರ ಸಂಘಟನೆ ಮಾಡಿರುವುದು ಸ್ವಾಗತಾರ್ಹ. ವೇದಿಕೆಗೆ ತಮ್ಮಿಂದ ಎಲ್ಲರೀತಿಯ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡ ಶರಣು ಚವಡಿ, ಅಧ್ಯಕ್ಷರಾಗಿ ಆಯ್ಕೆಗೊಂಡ ಫಕ್ಕೀರಗೌಡ ಮರಿಗೌಡ್ರ ಮಾತನಾಡಿ, ರಂಗಭೂಮಿ ಕಲೆ ರಕ್ಷಣೆ ಹಾಗೂ ರಂಗಭೂಮಿ ಕಲಾವಿದರ ಪೋಷಣೆಗೆ ವೇದಿಕೆ ಬದ್ಧತೆಯಿಂದ ಕಾರ್ಯ ಮಾಡುವುದು ಎಂದರು.

ಕಾರ್ಯದರ್ಶಿ ಡಾ.ಮಹಾಂತೇಶ ಸಜ್ಜನ ಮಾತನಾಡಿ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿರುವ ಗದಗ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ತಮ್ಮ ಕಲಾಪ್ರತಿಭೆ ಬೆಳಗಿಸಿದ್ದಾರæ ಎಂದರು.

ಉಪಾಧ್ಯಕ್ಷ ಸಿದ್ದಲಿಂಗಪ್ಪ ಅರಳಿ, ಮುತ್ತಣ್ಣ ಬೀಳಗಿ, ಸಹ ಕಾರ್ಯದರ್ಶಿ ಪ್ರಭು ಹೆಬಸೂರ, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ನಾಯ್ಕರ್‌, ಬಸಣ್ಣ ಹೂಗಾರ, ಖಜಾಂಚಿ ಮುಸ್ತಾಕ ಢಾಲಾಯತ್‌ ಹಾಗೂ ನೂತನ ಸಲಹಾ ಸಮಿತಿಯ ಸದಸ್ಯರಾದ ಬಾಬುಗೌಡ್ರ ಪಾಟೀಲ, ವೀರಯ್ಯಜ್ಜ ಮಂಡಲಗೇರಿ (ಹಿರೇಮಠ), ಪಂಚಾಕ್ಷರಿ ಹಡಪದ, ತೋಟಪ್ಪ ಕರಮುಡಿ, ಪ್ರಭುಸ್ವಾಮಿ ಹಿರೇಮಠ, ಸುರೇಶಗೌಡ ಪೊಲೀಸ್‌ಪಾಟೀಲ, ನಜೀರಸಾಬ ಮಜ್ಜಗಿ, ಮಲ್ಲಿಕಾರ್ಜುನ ಕರಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ