ಆ್ಯಪ್ನಗರ

ಜೂಜಾಟ, 32 ಜನರ ಬಂಧನ

ಗದಗ: ಜಿಲ್ಲೆಯ ಬೆಟಗೇರಿ, ಗಜೇಂದ್ರಗಡ ಮತ್ತು ನರಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿಇಸ್ಪೀಟ್‌ ಆಡುತ್ತಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿಶನಿವಾರ ಒಟ್ಟು 32 ಜನರನ್ನು ಬಂಧಿಸಿ, 63,600 ರೂ. ವಶಪಡಿಸಿಕೊಳ್ಳಲಾಗಿದೆ.

Vijaya Karnataka 4 Nov 2019, 5:00 am
ಗದಗ: ಜಿಲ್ಲೆಯ ಬೆಟಗೇರಿ, ಗಜೇಂದ್ರಗಡ ಮತ್ತು ನರಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿಇಸ್ಪೀಟ್‌ ಆಡುತ್ತಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿಶನಿವಾರ ಒಟ್ಟು 32 ಜನರನ್ನು ಬಂಧಿಸಿ, 63,600 ರೂ. ವಶಪಡಿಸಿಕೊಳ್ಳಲಾಗಿದೆ.
Vijaya Karnataka Web gambling 32 people detained
ಜೂಜಾಟ, 32 ಜನರ ಬಂಧನ


ಬೆಟಗೇರಿ ಹೆಲ್ತ್‌ ಕ್ಯಾಂಪ್‌ ಸಮೀಪ ಸಾರ್ವಜನಿಕ ಸ್ಥಳದಲ್ಲಿಶನಿವಾರ ಸಂಜೆ ಇಸ್ಪೀಟ್‌ ಆಡುತ್ತಿದ್ದ ಅವಳಿ ನಗರದ ಒಟ್ಟು 9 ಜನರನ್ನು ಬೆಟಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಗಜೇಂದ್ರಗಡ ಸಮೀಪದ ನಾಗೇಂದ್ರಗಡ ಗುಡ್ಡದ ಬಯಲು ಜಾಗೆಯಲ್ಲಿತಮ್ಮ ವೈಯಕ್ತಿಕ ಲಾಭಕ್ಕಾಗಿ ಜೂಜಾಟದಲ್ಲಿನಿರತರಾಗಿದ್ದ ಆರು ಜನರನ್ನು ಗಜೇಂದ್ರಗಡ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

ಜಿಲ್ಲೆಯ ನರಗುಂದ ಪಟ್ಟಣದ ಸರಸ್ವತಿ ನಗರದಲ್ಲಿರುವ ಸರಸ್ವತಿ ದೇವಸ್ಥಾನದ ಮುಂದಿನ ಜಾಗದಲ್ಲಿಶನಿವಾರ ರಾತ್ರಿ ಜೂಜಾಟದಲ್ಲಿನಿರತರಾಗಿದ್ದ 9 ಜನರನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಇಸ್ಪೀಟ್‌ ಎಲೆಗಳು ಹಾಗೂ 34650 ನಗದು ಪಶವಡಿಸಿಕೊಂಡಿದ್ದಾರೆ. ಅದೇ ರೀತಿ ನವೋದಯ ಶಾಲೆಯ ಹಿಂದಿನ ರಸ್ತೆಯಲ್ಲಿಜೂಜಾಟವಾಡುತ್ತಿದ್ದ 8 ಜನರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 28950 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ