ಆ್ಯಪ್ನಗರ

ಗಣಪತಿ ಹೋದ,ಜೋಕುಮಾರ ಬಂದ !

​ರೋಣ: ಭಾದ್ರಪದ ಮಾಸ,ಶುಕ್ಲಪಕ್ಷದ ಸಂದರ್ಭದಲ್ಲಿಗಣೇಶ ಚತುರ್ಥಿ ನಂತರ ಜೋಕುಮಾರನ ಆರಚರಣೆ ಪ್ರಮುಖವಾದುದು. ಗಂಗಾಮತದ ಹೆಣ್ಣು ಮಕ್ಕಳು ಬೇವಿನ ಸೊಪ್ಪಿನ ಬುಟ್ಟಿಯಲ್ಲಿಮಣ್ಣಿನ ಮೂರ್ತಿ ಇಟ್ಟು ಮನೆಮನೆಗೆ ಹೋಗುತ್ತಾರೆ. ಮನೆಯಲ್ಲಿರುವ ತಗಣಿ,ಚುಕ್ಕಾಡಿಗಳನ್ನು ತಮ್ಮ ಬುಟ್ಟಿಯಲ್ಲಿಹಾಕಿಕೊಂಡು ಹೋಗುತ್ತಾರೆ. ಜೋಕುಮಾರನ ಆಚರಣೆಯಲ್ಲಿಇದು ಪ್ರಮುಖವಾದ ಸಂಪ್ರದಾಯವಾಗಿದೆ.

Vijaya Karnataka 12 Sep 2019, 5:00 am
ಯಲ್ಲಪ್ಪ ತಳವಾರ
Vijaya Karnataka Web 053210 RON 2_25
ಜೋಕುಮಾರನ ಮೂರ್ತಿ.

ರೋಣ: ಭಾದ್ರಪದ ಮಾಸ,ಶುಕ್ಲಪಕ್ಷದ ಸಂದರ್ಭದಲ್ಲಿಗಣೇಶ ಚತುರ್ಥಿ ನಂತರ ಜೋಕುಮಾರನ ಆರಚರಣೆ ಪ್ರಮುಖವಾದುದು. ಗಂಗಾಮತದ ಹೆಣ್ಣು ಮಕ್ಕಳು ಬೇವಿನ ಸೊಪ್ಪಿನ ಬುಟ್ಟಿಯಲ್ಲಿಮಣ್ಣಿನ ಮೂರ್ತಿ ಇಟ್ಟು ಮನೆಮನೆಗೆ ಹೋಗುತ್ತಾರೆ. ಮನೆಯಲ್ಲಿರುವ ತಗಣಿ,ಚುಕ್ಕಾಡಿಗಳನ್ನು ತಮ್ಮ ಬುಟ್ಟಿಯಲ್ಲಿಹಾಕಿಕೊಂಡು ಹೋಗುತ್ತಾರೆ. ಜೋಕುಮಾರನ ಆಚರಣೆಯಲ್ಲಿಇದು ಪ್ರಮುಖವಾದ ಸಂಪ್ರದಾಯವಾಗಿದೆ.

ಜೋಕುಮಾರನನ್ನು ಕುಂಬಾರರು ತಯಾರಿಸುತ್ತಾರೆ. ಜೋಕುಮಾರನ ಕುರಿತು ಹಾಡು ಹೇಳುತ್ತ ಗ್ರಾಮೀಣ ಪ್ರದೇಶಗಳಲ್ಲಿಮೊಟ್ಟಮೊದಲು ಗೌಡರು ಇಲ್ಲವೇ ಶಾನಭೋಗರ ಮನೆಗಳಿಗೆ ಭೇಟಿ ನೀಡಿದ ನಂತರ 7 ದಿನ ಊರಿನ ವಿವಿಧ ಮನೆ ಸುತ್ತುತ್ತಾರೆ. ನಂತರ ಬರುವ ಹುಣ್ಣುಮೆಯನ್ನು ಜೋಕ್ಯಾನ ಹುಣ್ಣುಮೆ,ಅನಂತನ ಹುಣ್ಣುಮೆ ಎಂದು ಕರೆಯುತ್ತಾರೆ. ಅಲ್ಪಾಯುಷಿಯಾದ ಜೋಕುಮಾರನನ್ನು ಅನಂತನಹುಣ್ಣಿಮೆ ದಿನ ರಾತ್ರಿ ಊರಿನ ಹರಿಜನಕೇರಿಯಲ್ಲಿಟ್ಟು ಈತನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಹೆಣ್ಣುಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಭಾವಿಸಿ ಗಂಡಸರು ಆತನನನ್ನು ಒನಕೆಯಿಂದ ಬಡಿದು ಸಾಯಿಸುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ಸುಖಕಾಲವೆಂದು,ಬೋರಲು ಬಿದ್ದರೆ ದುಃಖ ಕಾಲವೆಂದು ಗ್ರಾಮೀಣರು ನಂಬುತ್ತಾರೆ. ಸತ್ತ ನಂತರ ರುಂಡ-ಮುಂಡಗಳನ್ನು ಅಗಸರು ಊರಿನ ಬದಿಯ ಹಳ್ಳಕ್ಕೆ ಒಯ್ದು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಹಾಕಿ ಬರುತ್ತಾರೆ. ಆಗ ಜೋಕುಮಾರನು ನರಳುತ್ತಾನೆ.ಇದರಿಂದ ತಮಗೆ ಅಪಾಯವಾಗುವುದು ಎಂದು ನಂಬುತಗ್ತಾರೆ.ಅಗಸರು ಮೂರು ದಿನಗಳ ಕಾಲ ಬಟ್ಟೆ ಒಗೆಯಲು ಹಳ್ಳಕ್ಕೆ ಹೋಗುವುದಿಲ್ಲ.ನಾಲ್ಕನೇ ದಿನ ಆತನನ್ನು ಸಂತೈಸಲು ಕರ್ಮಾದಿ ಕಾಯಕ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ