ಆ್ಯಪ್ನಗರ

ವಿಶೇಷಚೇತನರು ಯುಡಿಆಐಡಿ ಕಾರ್ಡ್‌ ಪಡೆದುಕೊಳ್ಳಿ

ರೋಣ : ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಶೇಷಚೇತನರಿಗೆ ವಿಶಿಷ್ಠ ಗುರುತಿನ ಚೀಟಿಯ ಯೋಜನೆಯನ್ನು ಎಲ್ಲ ವಿಶೇಷಚೇತನರು ಪಡೆದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದು ತಾಲೂಕು ಪುನರ್ವಸತಿ ಕಾರ್ಯಕರ್ತ ಬಸವರಾಜ ಓಲಿ ಹೇಳಿದರು.

Vijaya Karnataka 20 Jul 2019, 5:00 am
ರೋಣ : ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಶೇಷಚೇತನರಿಗೆ ವಿಶಿಷ್ಠ ಗುರುತಿನ ಚೀಟಿಯ ಯೋಜನೆಯನ್ನು ಎಲ್ಲ ವಿಶೇಷಚೇತನರು ಪಡೆದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದು ತಾಲೂಕು ಪುನರ್ವಸತಿ ಕಾರ್ಯಕರ್ತ ಬಸವರಾಜ ಓಲಿ ಹೇಳಿದರು.
Vijaya Karnataka Web get a specialist udaid card
ವಿಶೇಷಚೇತನರು ಯುಡಿಆಐಡಿ ಕಾರ್ಡ್‌ ಪಡೆದುಕೊಳ್ಳಿ


ಗುರುವಾರ ತಾಲೂಕಿನ ಮಾಡಲಗೇರಿ ಗ್ರಾಪಂ ಆವರಣದಲ್ಲಿ ನಡೆದ ವಿಶೇಷಚೇತನರಿಗಾಗಿ ಅರಿವು ಸಿಂಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುಡಿಆಯ್‌ಡಿ ಕಾರ್ಡ್‌ ವಿಶೇಷಚೇತನ ವ್ಯಕ್ತಿಗಳ ಗುರುತು, ಅಂಗವೈಕಲ್ಯತೆಯ ಪ್ರಮಾಣ ಹಾಗೂ ಎಲ್ಲ ಅಗತ್ಯ ವಿವರಗಳನ್ನು ಇ-ರಿಡರ್‌ ಸಹಾಯದಿಂದ ಡಿಕೋಡ್‌ ಮಾಡಬಹುದು. ಆದ್ದರಿಂದ ವಿಶೇಷಚೇತನ ವ್ಯಕ್ತಿಗಳು ಎಲ್ಲ ದಾಖಲೆ ಒದಗಿಸುವ ಅವಶ್ಯಕತೆಯಿರುವುದಿಲ್ಲಾ. ಈ ಕಾರ್ಡ್‌ ದೇಶದಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುವುದರಿಂದ ಇದನ್ನು ಪಡೆಯುವುದು ಅವಶ್ಯವಾಗಿದೆ ಎಂದರು.

ಈ ಕಾರ್ಡ್‌ ವಿಶೇಷಚೇತನ ವ್ಯಕ್ತಿಗಳ ಗುರುತಿನ ಏಕೈಕ ದಾಖಲೆಯಾಗಿರುತ್ತದೆ. ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಈ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ. ಯುಡಿಐಡಿ ಯೋಜನೆಯು ಆರ್‌ಪಿಡಬ್ಲ್ಯೂ ಕಾಯಿದೆ 2016 ರಡಿ 21 ವಿವಿಧ ಅಂಗವಿಕಲತೆಯುಳ್ಳ ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಡೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಸ್ಮಾಟ್‌ಕಾರ್ಡ ನೀಡುವ ಯೋಜನೆ ಇದಾಗಿದೆ ಎಂದರು.

ಶಿಕ್ಷ ಕ ವಿ.ಎಚ್‌.ನವಲೆ,ಕಾರ್ಯದರ್ಶಿ ಎಮ್‌.ಪಿ.ಮಾತಾಳೆ, ವಿಆರ್‌ಡಬ್ಲೂ ಬಸವರಾಜ ಬಾವಿ, ಕುಬೇರಗೌಡ ಬಾಲನಗೌಡ್ರ, ಎಸ್‌.ಆರ್‌.ಸಣ್ಣಸಕ್ಕರಗೌಡ್ರ,ಜಯದೇವ ಗೋವಿಂದಗೌಡ್ರ, ರೇಣವ್ವ ಜೋಗಿ, ಸಂಕರಗೌಡ ಬಾಲನಗೌಡ್ರ, ಬಸನಗೌಡ ಹಿರೇಸಕ್ಕರಗೌಡ್ರ, ಯಲ್ಲವ್ವ ನೀರಲಗಿ, ಮುತ್ತಪ್ಪ ನೈನಾಪೂರ, ಬಸವರಾಜ ಗಿಡಮಣ್ಣವರ, ಬಸವ್ವ ರಾಯನಗೌಡ್ರ,ನಾಗರತ್ನಾ ಗುಳಗುಳಿ, ಎಮ್‌.ಜಿ.ರೇವಣಕರ ಸೇರಿದಂತೆ ಮುಂದಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ