ಆ್ಯಪ್ನಗರ

ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಿ

ಮುಳಗುಂದ: ಅನ್ನ ನೀಡುವ ರೈತ,ದೇಶ ಕಾಯುವ ಯೋಧ,ಹಾಗೂ ಉತ್ತಮ ವಿದ್ಯಾರ್ಥಿಯನ್ನು ರೂಪಿಸುವ ಗುರು ರಾಷ್ಟ್ರದ ಅಭಿವೃದ್ಧಿಯ ಹರಿಕಾರರು ಎಂದು ಪಪಂ ಸದಸ್ಯ ವಿಜಯ ನೀಲಗುಂದ ಹೇಳಿದರು.

Vijaya Karnataka 29 Dec 2019, 5:00 am
ಮುಳಗುಂದ: ಅನ್ನ ನೀಡುವ ರೈತ,ದೇಶ ಕಾಯುವ ಯೋಧ,ಹಾಗೂ ಉತ್ತಮ ವಿದ್ಯಾರ್ಥಿಯನ್ನು ರೂಪಿಸುವ ಗುರು ರಾಷ್ಟ್ರದ ಅಭಿವೃದ್ಧಿಯ ಹರಿಕಾರರು ಎಂದು ಪಪಂ ಸದಸ್ಯ ವಿಜಯ ನೀಲಗುಂದ ಹೇಳಿದರು.
Vijaya Karnataka Web get involved in the country service
ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಿ


ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿನಡೆದ ರೈತ, ಯೋಧ, ಗುರು ಹಾಗೂ ಯೋಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ದೇಶಾಭಿಮಾನ ಬೆಳೆಸಿಕೊಂಡು ದೇಶ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಯೋಧ ಮಂಜುನಾಥ ನಲವಡಿ ಮಾತನಾಡಿ, ಎಲ್ಲರಿಗೂ ಕಷ್ಟ-ನಷ್ಟ ಸಹಜ. ಅದನ್ನು ಮೆಟ್ಟಿ ನಿಂತು ಸತತ ಪ್ರಯತ್ನದಿಂದ ಎಲ್ಲವನ್ನು ಸಾಧಿಸಲು ಸಾಧ್ಯ ಅದಕ್ಕೆ ಮೊದಲು ನಮಗೆ ಮುಂದೆ ಗುರಿ ಇರಬೇಕು ಎಂದರು.

ರೈತ ಮಹೇಶ ನೀಲಗುಂದ ಮಾತನಾಡಿ, ಕೃಷಿಯಿಂದ ಎಲ್ಲವನ್ನು ಸಾಧಿಸಲು ಸಾಧ್ಯ.ಕೃಷಿಯಲ್ಲಿರೈತರು ವಿವಿಧ ಬೆಳೆಗಳ ಪದ್ಧತಿ ಅಳವಡಿಸಿಕೊಂಡು ಬೇರೆ,ಬೇರೆ ತರದ ಬೆಳೆ ಬೆಳೆದರೆ ಉತ್ತಮ ಫಸಲು ಜತೆಯಲ್ಲಿಉತ್ತಮ ಆದಾಯ ಗಳಿಸಿ ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.

ನಿವೃತ್ತ ಶಿಕ್ಷಕ ಡಿ.ಎಸ್‌.ಅಂಗಡಿ ಮಾತನಾಡಿ, ಉತ್ತಮ ವಿದ್ಯಾರ್ಥಿ ರೂಪಗೊಳ್ಳಲು ಪ್ರಾಥಮಿಕ ಶಿಕ್ಷಣವೇ ಭದ್ರ ಬುನಾದಿಯಾಗಿದೆ.ಆದ್ದರಿಂದ ಇಲ್ಲಿಗಮನವಿಟ್ಟು ಕಲಿತ ಶಿಕ್ಷಣವೇ ಜೀವನದಲ್ಲಿದಾರಿ ದೀಪವಾಗುತ್ತದೆ. ವಿದ್ಯಾರ್ಥಿಯಾದವರು ಮೊದಲು ತಂದೆ-ತಾಯಿ,ಗುರು,ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

ಯೋಗ ಶಿಕ್ಷಕ ಗಿರೀಶ ಪಿರಂಗಿ ಮಕ್ಕಳಿಗೆ ಯೋಗದ ಜತೆಗೆ ಉತ್ತಮ ಆರೋಗ್ಯ,ಶಿಕ್ಷಣದಲ್ಲಿನೆನೆಪಿನ ಶಕ್ತಿ ವೃದ್ಧಿ ಬಗ್ಗೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವೀರಪ್ಪ ಸಿದ್ದನಗೌಡರ ಅಧ್ಯಕ್ಷತೆವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಪಂ ಸದಸ್ಯ ವಿಜಯ ನೀಲಗುಂದ,ಡಿ.ಎಸ್‌.ಅಂಗಡಿ, ಮಹೇಶ ನೀಲಗುಂದ, ಮಂಜುನಾಥ ನೆಲವಡಿ, ಯೋಗ ಶಿಕ್ಷಕ ಗಿರೀಶ ಪಿರಂಗಿ,ಎಸ್‌ಡಿಎಂಸಿ ಸದಸ್ಯ ಶರಣಪ್ಪ ಬೋಳನವರ, ಬಿ.ಎಲ್‌.ಜಾಧಾವ, ಇಸ್ಮಾಯಿಲ್‌.ಖಾಜಿ, ಎಂ.ಎಂ.ಮೆಗಲಮನಿ, ಎಸ್‌.ಎಂ.ಉಜ್ಜಣ್ಣವರ,ಎಂ.ಎಂ.ಕೊಪ್ಪಳ. ಪಿ.ಬಿ.ಕೆಂಚನಗೌಡರ,ಎಸ್‌.ವಿ.ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ