ಆ್ಯಪ್ನಗರ

ಗೌರವದಿಂದ ಬಾಳಲು ಕಾನೂನು ಸಲಹೆ ಪಡೆಯಿರಿ

ಗದಗ: ಹುಲಕೋಟಿಯಲ್ಲಿಗಿಟಸರ್ಡ್‌ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಗಿಟಸರ್ಡ್‌ ಹುಲಕೋಟಿ, ಸೃಷ್ಠಿ ಸಂಕುಲ ಆರೋಗ್ಯ ಮತ್ತು ಸೇವಾ ಸಂಸ್ಥೆ ಮತ್ತು ಜಿಲ್ಲಾಮಹಿಳಾ ರಕ್ಷಣಾ ಒಕ್ಕೂಟದ ಆಶ್ರಯದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗೆ ಕಾನೂನು ಸೇವೆಗಳ ಶಿಬಿರ ನಡೆಯಿತು.

Vijaya Karnataka 17 Sep 2019, 5:00 am
ಗದಗ: ಹುಲಕೋಟಿಯಲ್ಲಿಗಿಟಸರ್ಡ್‌ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಗಿಟಸರ್ಡ್‌ ಹುಲಕೋಟಿ, ಸೃಷ್ಠಿ ಸಂಕುಲ ಆರೋಗ್ಯ ಮತ್ತು ಸೇವಾ ಸಂಸ್ಥೆ ಮತ್ತು ಜಿಲ್ಲಾಮಹಿಳಾ ರಕ್ಷಣಾ ಒಕ್ಕೂಟದ ಆಶ್ರಯದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗೆ ಕಾನೂನು ಸೇವೆಗಳ ಶಿಬಿರ ನಡೆಯಿತು.
Vijaya Karnataka Web get legal advice to live with respect
ಗೌರವದಿಂದ ಬಾಳಲು ಕಾನೂನು ಸಲಹೆ ಪಡೆಯಿರಿ


ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ.ಸಲಗರೆ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ದಮನಿತ ಮಹಿಳೆಯರು ಗೌರವಯುತವಾಗಿ ಜೀವಿಸುವ ಹಕ್ಕು ಇದೆ. ಸಮಾಜದಲ್ಲಿಗೌರವಯುತವಾಗಿ ಬಾಳಲು ಎಲ್ಲಇಲಾಖೆಗಳಿಂದ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಅವರಿಗೆ ದೊರಕುವ ಕಾನೂನು ಸೌಲಭ್ಯ ಪಡೆಯಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್‌. ಮಾತನಾಡಿ, ಪ್ರತಿಯೊಬ್ಬ ಮಹಿಳೆ ಆರೋಗ್ಯವಾಗಿರಬೇಕಾದರೆ ಪೌಷ್ಟಿಕ ಆಹಾರ ಸೇವಿಸಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇಲಾಖೆಯಿಂದ ದೊರೆಯುವ ಸೌಲಭ್ಯ ಪಡೆಯಲು ಸಲಹೆ ನೀಡಿದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕ ಮಧು ಲೋಕಾಪುರ ಅವರು ದಮನಿತ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ನಿಗಮದಿಂದ ದೊರಕುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಡಾ.ಸುಧಾ ಮಂಕಣಿ ಮಾತನಾಡಿ, ಮಕ್ಕಳು ಸದೃಢವಾಗಬೇಕಾದರೆ ಮಹಿಳೆಯರು ಸತ್ವಯುತ ಆಹಾರ ಸೇವಿಸಬೇಕು ಎಂದರು.

ಜಿಲ್ಲಾಮಹಿಳಾ ರಕ್ಷಣಾ ಒಕ್ಕೂಟದ ಅಧ್ಯಕ್ಷೆ ಹಜರತಬಿ ಮಾತನಾಡಿ, ನಾವು ನಿಗಮದಿಂದ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆದಿದ್ದು. ಅದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಅವರು ಉದ್ಯೋಗ ಪ್ರಾರಂಭಿಸಿದ್ದಾರೆ ಎಂದರು.ಮುರಳಿ ನಾಯಕ, ಎಲ್‌.ಜಿ.ಹಿರೇಗೌಡರ, ಎಂ.ಎಸ್‌.ಕಲ್ಮನಿ, ಈರಣ್ಣ , ಸಾವಿತ್ರಿ ಪೂಜಾರ, ನವೀನ ಹಿರೇಗೌಡರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ