ಆ್ಯಪ್ನಗರ

ಟಿಡಿಎಸ್‌ ಮಾಹಿತಿ ಎಲ್ಲರೂ ಪಡೆಯಿರಿ

ಗದಗ: ಟಿಡಿಎಸ್‌ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಮತ್ತು ಸರಿಯಾದ ಸಮಯಕ್ಕೆ ಟಿಡಿಎಸ್‌ ತುಂಬಿ ದಂಡ ಮತ್ತು ಶಿಕ್ಷೆಯಿಂದ ಮುಕ್ತರಾಗಿ ಎಂದು ಆದಾಯ ತೆರಿಗೆ ಇಲಾಖೆ ಹುಬ್ಬಳ್ಳಿಯ ಜಂಟಿ ಆಯುಕ್ತ ಆರ್‌.ವೈ.ಬಲವಡೆ ಹೇಳಿದರು.

Vijaya Karnataka 26 Jan 2020, 6:32 pm
ಗದಗ: ಟಿಡಿಎಸ್‌ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಮತ್ತು ಸರಿಯಾದ ಸಮಯಕ್ಕೆ ಟಿಡಿಎಸ್‌ ತುಂಬಿ ದಂಡ ಮತ್ತು ಶಿಕ್ಷೆಯಿಂದ ಮುಕ್ತರಾಗಿ ಎಂದು ಆದಾಯ ತೆರಿಗೆ ಇಲಾಖೆ ಹುಬ್ಬಳ್ಳಿಯ ಜಂಟಿ ಆಯುಕ್ತ ಆರ್‌.ವೈ.ಬಲವಡೆ ಹೇಳಿದರು.
Vijaya Karnataka Web get tds info everyone
ಟಿಡಿಎಸ್‌ ಮಾಹಿತಿ ಎಲ್ಲರೂ ಪಡೆಯಿರಿ


ನಗರದ ಜಿಲ್ಲಾವಾಣಿಜ್ಯೋದ್ಯಮ ಸಂಸ್ಥೆಯಲ್ಲಿಆದಾಯ ಕರ ಟಿಡಿಎಸ್‌ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಟಿಡಿಎಸ್‌ ಬಗ್ಗೆ ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಈಗಾಗಲೇ ತಂತ್ರಜ್ಞಾನವು ಕೂಡಾ ಅಷ್ಟೇ ಪ್ರಮಾಣದಲ್ಲಿಅಭಿವೃದ್ಧಿ ಹೊಂದಿದ್ದು ಟಿಡಿಎಸ್‌ ಮಾಡುವುದು ಒಂದು ದಿನ ತಡವಾದರೆ 200 ರೂ.ವರೆಗೆ ದಂಡ ತುಂಬಬೇಕಾಗುತ್ತದೆ. ಪ್ರತಿ ತಿಂಗಳು 7ನೇ ತಾರೀಖಿನೊಳಗಾಗಿ ಟಿಡಿಎಸ್‌ ತುಂಬಿ ಪೈಲಿಂಗ್‌ ಮಾಡಬೇಕಾಗುತ್ತದೆ. ಕಾನೂನು ಕೂಡಾ ಕಠಿಣವಾಗಿದ್ದು ಹೆಚ್ಚಿನ ಜಾಗೃತಿ ವಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮನೀಷ ಕಾಸೋಡೆಕರ ಮಾತನಾಡಿ, ತಂತ್ರಜ್ಞಾನ ಕೂಡ ಸಾಕಷ್ಟು ಮುಂದುವರಿದಿದ್ದು ತಡವಾದಲ್ಲಿಸೆಕ್ಷನ್‌ 271 ಕಾಯಿದೆ ಪ್ರಕಾರ ಎಷ್ಟು ಹಣ ಟಿಡಿಎಸ್‌ ಮಾಡಬೇಕಾಗುತ್ತದೆ. ಅಷ್ಟೇ ಹಣವನ್ನು ದಂಡ ತುಂಬಬೇಕಾಗುತ್ತದೆ. 3 ತಿಂಗಳಿಗೊಮ್ಮೆ ಟಿಡಿಎಸ್‌ ಮಾಡದೇ ಇದ್ದರೆ 10 ಸಾವಿರದಿಂದ 1 ಲಕ್ಷದವರೆಗೆ ದಂಡ ಇರುತ್ತದೆ. ತಪ್ಪು ಆದಲ್ಲಿಅದನ್ನು ಸರಿಪಡಿಸಲು ಅವಕಾಶ ಇರುತ್ತದೆ. 276 ಬಿ ಪ್ರಕಾರ ಸರಿಯಾಗಿ ಟಿಡಿಎಸ್‌ ಮಾಡದೆ ಹೋದರೆ 3 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನೌಕರರಿಗೆ ಸಂಬಳದ ಮೇಲೆ ಟಿಡಿಎಸ್‌ ಮಾಡಬೇಕಾಗುತ್ತದೆ. 194ಆಯ್‌ ಪ್ರಕಾರ ಭಾಡಿಗೆ ಮೇಲೆ ಕಟ್ಟಡ ಹಾಗೂ ಜಾಗೆ, ಫರ್ನಿಚರ್ಸ್ ಮತ್ತು ಪಿಟಿಂಗ್‌ ಮೇಲೆ ಶೇ. 10ರಷ್ಡು ಟಿಡಿಎಸ್‌ ಮಾಡಬೇಕಾಗಿತ್ತದೆ. 50 ಲಕ್ಷ ರೂ.ಮೇಲ್ಟಟ್ಟು ಆಸ್ತಿ ಖರೀದಿಸಿದರೆ ಶೇ.1ರಷ್ಟು ಟಿಡಿಎಸ್‌ ಕೊಡಬೇಕಾಗುತ್ತದೆ. ಬ್ಯಾಂಕಿನಲ್ಲಿಟಿಡಿಎಸ್‌ ಚಲನ ತುಂಬುವ ಸಂದರ್ಭದಲ್ಲಿತಪ್ಪಾದಲ್ಲಿ7ದಿನದೊಳಗೆ ಬ್ಯಾಂಕಿನಿಂದ ಸರಿಪಡಿಸಿಕೊಳ್ಳಲು ಅವಕಾಶ ಇರುತ್ತದೆ. ತಡವಾದರೆ ಇಲಾಖೆಯಿಂದ ಸರಿಪಡಿಸಿಕೊಳ್ಳಬೇಕು. 10 ಸಾವಿರ ರೂ. ಮೇಲ್ಟಟ್ಟು ಬಡ್ಡಿ ಬಂದಲ್ಲಿಟಿಡಿಎಸ್‌ ಮಾಡಬೇಕು. ನೌಕರರ ಸಂಬಳ 2.50 ಲಕ್ಷ ರೂ.ಒಳಗಿದ್ದರೆ ಟಿಡಿಎಸ್‌ ಮಾಡುವ ಅವಶ್ಯಕತೆ ಇರುವುದಿಲ್ಲಎಂದು ಪ್ರೋಜೆಕ್ಟರ್‌ ಮೂಲಕ ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಕುರಡಗಿ ಅಧ್ಯಕ್ಷತೆ ವಹಿಸಿ, ವ್ಯಾಪಾರಸ್ಥರಿಗೆ ಟಿಡಿಎಸ್‌ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅತೀ ಅವಶ್ಯವಾಗಿ ಇರುತ್ತದೆ. ಟಿಡಿಎಸ್‌ ಮಾಡುವುದು ಸಹಜ ಜವಾಬ್ದಾರಿ ಕೂಡ ಇರುತ್ತದೆ. ಅಷ್ಟೆ ತುಂಬುವ ಬಗ್ಗೆ ಮುಂಜಾಗೃತೆ ವಹಿಸಿ ಸಮಯಕ್ಕೆ ಸರಿಯಾಗಿ ಟಿಡಿಎಸ್‌ ತುಂಬುದು ಅತಿ ಅವಶ್ಯವಾಗಿದೆ ಎಂದರು.

ವಿ.ಎಸ್‌. ಮಾಟಲದಿನ್ನಿ, ಜಯದೇವ ಮೆಣಸಗಿ, ಪ್ರಶಾಂತ ಕುಂದಾಪುರ, ಜಯಶ್ರೀ ಮಾಲಗತ್ತಿ, ಮಾರುತಿ ಸಂಗಳದ, ಪ್ರಶಾಂತ ಆರ್ಯ, ಪ್ರದೀಪಸಿಂಗ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ