ಆ್ಯಪ್ನಗರ

ಮಹಿಳೆಯರಿಗಿರುವ ಸೌಲಭ್ಯಗಳ ಪಡೆಯಿರಿ

ಗದಗ: ಮಹಿಳೆಯರಿಗಾಗಿ ರಾಜ್ಯ, ಕೇಂದ್ರ ಸರಕಾರ ಅನೇಕ ಯೋಜನೆ ಜಾರಿಗೆ ತಂದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇರುವ ಸೌಲಭ್ಯ ಕುರಿತು ಅರಿವು ಹೊಂದಿ, ಅವುಗಳ ಸದುಯೋಪಯೋಗ ಪಡದುಕೊಳ್ಳಬೇಕು ಎಂದು ಜಿಲ್ಲಾಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ಮಧುಶ್ರೀ ಉಪ್ಪಾರ ಹೇಳಿದರು.

Vijaya Karnataka 24 Jan 2020, 6:20 pm
ಗದಗ: ಮಹಿಳೆಯರಿಗಾಗಿ ರಾಜ್ಯ, ಕೇಂದ್ರ ಸರಕಾರ ಅನೇಕ ಯೋಜನೆ ಜಾರಿಗೆ ತಂದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇರುವ ಸೌಲಭ್ಯ ಕುರಿತು ಅರಿವು ಹೊಂದಿ, ಅವುಗಳ ಸದುಯೋಪಯೋಗ ಪಡದುಕೊಳ್ಳಬೇಕು ಎಂದು ಜಿಲ್ಲಾಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ಮಧುಶ್ರೀ ಉಪ್ಪಾರ ಹೇಳಿದರು.
Vijaya Karnataka Web get the privileges for women
ಮಹಿಳೆಯರಿಗಿರುವ ಸೌಲಭ್ಯಗಳ ಪಡೆಯಿರಿ


ಜಿಲ್ಲಾವಿಶ್ವಕರ್ಮ ಮಹಿಳಾ ಸಂಘ ಹಾಗೂ ಜಿಲ್ಲಾವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿವಿಶ್ವಕರ್ಮ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನಿರ್ಮಲಾ ಪತ್ತಾರ ಕಾರ್ಯಾಗಾರ ಉದ್ಘಾಟಿಸಿ, ಮಹಿಳೆಯರು ನಾಲ್ಕು ಗೋಡೆಗಳ ಮಧ್ಯದಿಂದ ಹೊರಬಂದು ಸಮಾಜಮುಖಿ ಕಾರ್ಯಗಳಲ್ಲಿಪಾಲ್ಗೊಳ್ಳಬೇಕು. ಸಮಾಜದ ಉನ್ನತಿಗಾಗಿ ಪುರುಷನಿಗೆ ಸಮಾನವಾಗಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿಸಮಾಜದ ಮಹಿಳೆಯರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿಗದಗ ಜಿಲ್ಲಾನೌಕರರ ಕ್ಷೇಮಾಭಿವೃದ್ಧಿ ಸಂಘ ಮಾದರಿಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಸ್ತೀರ್ಣಾಧಿಕಾರಿ ಶಿಲ್ಪಾ ಪಾಟೀಲ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ ಎಂದು ತಿಳಿಸಿದರು.

ಜಿಲ್ಲಾನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮಾತನಾಡಿ, ವಿಶ್ವಕರ್ಮ ಜಿಲ್ಲಾಮಹಿಳಾ ಸಂಘವು ಅನೇಕ ಜನಪರ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಲಕ್ಷಿತ್ರ್ಮೕ ಕಡ್ಲಿಕೊಪ್ಪ, ಜ್ಯೋತಿ ಬಡಿಗೇರ, ಗಿರಿಜಮ್ಮ ಕಮ್ಮಾರ, ಭಾರತಿ ಹೊರಪೇಟೆ, ಜಯಶ್ರೀ ಬಡಿಗೇರ, ಶೋಭಾ ಬೆಂತೂರ ಇದ್ದರು.ರೂಪಾ ಪತ್ತಾರ ಪ್ರಾರ್ಥಿಸಿದರು. ನೇತ್ರವತಿ ಬಡಿಗೇರ ಸ್ವಾಗತಿಸಿದರು. ಸುಮಂಗಲಾ ಪತ್ತಾರ ನಿರೂಪಿಸಿದರು. ಅನ್ನಪೂರ್ಣ ಬಡಿಗೇರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ