ಆ್ಯಪ್ನಗರ

ನೈತಿಕ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ

ಮುಂಡರಗಿ: ಬದಲಾಗುತ್ತಿರುವ ದಿನಗಳಲ್ಲಿ ಗುರುಸೇವೆ ಎನ್ನುವುದೇ ಮರೆತು ಹೋಗಿದ್ದು,ಇಂದಿನ ಮಕ್ಕಳಿಗೆ ವಾಸ್ತವದ ಶಿಕ್ಷಣದ ಅವಶ್ಯಕತೆಯಿದೆ ಎಂದು ಹಿರೇಹಡಗಲಿ ಅಭಿನವ ಹಾಲಶ್ರೀಗಳು ಹೇಳಿದರು.

Vijaya Karnataka 15 Oct 2019, 5:00 am
ಮುಂಡರಗಿ: ಬದಲಾಗುತ್ತಿರುವ ದಿನಗಳಲ್ಲಿ ಗುರುಸೇವೆ ಎನ್ನುವುದೇ ಮರೆತು ಹೋಗಿದ್ದು,ಇಂದಿನ ಮಕ್ಕಳಿಗೆ ವಾಸ್ತವದ ಶಿಕ್ಷಣದ ಅವಶ್ಯಕತೆಯಿದೆ ಎಂದು ಹಿರೇಹಡಗಲಿ ಅಭಿನವ ಹಾಲಶ್ರೀಗಳು ಹೇಳಿದರು.
Vijaya Karnataka Web give a good buzz with moral education
ನೈತಿಕ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ


ಅವರು ಪಟ್ಟಣದ ಅಂಬಾ ಭವಾನಿ ದೇವಸ್ಥಾನ ಆವರಣದಲ್ಲಿಆಯೋಜಿಸಿದ್ದ ವಿವೇಕ ಸಂಪತ್‌ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಭಾರತೀಯ ಶಿಕ್ಷಣ ಪದ್ದತಿಯಲ್ಲಿಉತ್ತಮ ಸಂಸ್ಕಾರದಿಂದ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಕಾರದ ಶಿಕ್ಷಣಕ್ಕೆ ಹೆಚ್ಚಿನ ಬೆಲೆ ಇದೆ ಎಂದರು.

ವಿವೇಕ ಶಿಕ್ಷಣ ವಾಹಿನಿ ರಾಜ್ಯಾಧ್ಯಂತ ಬಹುದೊಡ್ಡ ಕೆಲಸ ಮಾಡುತ್ತ ಬಂದಿದೆ. ಪ್ರತಿ ವರ್ಷ ಸಾವಿರಾರು ಮಕ್ಕಳಿಗೆ ವಿವೇಕಾನಂದ, ಮುಂಡರಗಿ ಭೀಮರಾಯ ಹಾಗೂ ನಾಡಿನ ದಾರ್ಶನಿಕರ, ಸಂತರ ಚಿಂತನೆಗಳನ್ನು ಮಕ್ಕಳಿಗೆ ನೀಡುವುದರ ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವುದಷ್ಟೇ ಅಲ್ಲ. ಕುಟುಂಬದಲ್ಲಿರುವ ಸಂಬಂಧ ಗಟ್ಟಿ ಮಾಡುವ ಕೆಲಸವನ್ನು ವಿವೇಕ ಸಂಪದ ಮಾಡುತ್ತ ಬಂದಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ.ಸಂಕನೂರ ಮಾತನಾಡಿ, ಮುಂಡರಗಿ ತಾಲೂಕು ನಂಜುಂಡಪ್ಪನವರ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು. ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ವಿವೇಕ ಸಂಪತ್‌ ಸೇವಾ ಕೇಂದ್ರದಿಂದ ಉಚಿತ ಶಿಕ್ಷಣ ನೀಡಲು ಈ ತಾಲೂಕನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಅಭಿನಂದಿಸಿದರು.

ವಿವೇಕ ಶಿಕ್ಷಣ ವಾಹಿನಿ ಸಂಸ್ಥಾಪಕ ನಿತ್ಯಾನಂದ ಸೂರ್ಯವಂಶಿ ವಿವೇಕ ಸಂಪತ್‌ ಸೇವಾ ಕೇಂದ್ರ ಉದ್ಘಾಟಿಸಿದರು.

ಮನೋಜ್‌ ಗುಂಡಿಕೇರಿ, ಕೃಷ್ಣಾ ಗಾರವಾಡ, ಲಿಂಗರಾಜಗೌಡ ಪಾಟಲ, ಪ್ರಹ್ಲಾದ ಹೊಸಮನಿ, ಶಿವಪ್ಪ ಚಿಕ್ಕಣ್ಣವರ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಮುತ್ತು ಅಳವಂಡಿ, ಪರಶುರಾಮ ಸುಣಗಾರ, ಶ್ರೀನಿವಾಸ ಅಬ್ಬೀಗೇರಿ, ಟಿ.ಡಿ.ದಂಡೀನ, ದೇವು ಹಡಪದ, ಮಹಾಂತೇಶ ಕೊರಡಕೇರಿ, ಶಿವು ನಾಡಗೌಡ್ರ ಉಪಸ್ಥಿತರಿದ್ದರು. ಪವನಕುಮಾರ ಮೇಟಿ ಸ್ವಾಗತಿಸಿದರು. ಮಂಜುನಾಥ ಮುಧೋಳ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ