ಆ್ಯಪ್ನಗರ

ಕೆಲಸ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡಿ

ರೋಣ : ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಪಾವತಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಜಕ್ಕಲಿ ಗ್ರಾಮದ ರೈತ ಹಾಗೂ ಕೃಷಿ ಕಾರ್ಮಿಕ ಮಹಿಳೆಯರು ಗ್ರಾಪಂಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 8 Feb 2019, 5:00 am
ರೋಣ : ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಪಾವತಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಜಕ್ಕಲಿ ಗ್ರಾಮದ ರೈತ ಹಾಗೂ ಕೃಷಿ ಕಾರ್ಮಿಕ ಮಹಿಳೆಯರು ಗ್ರಾಪಂಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web give job or give unemployment allowance
ಕೆಲಸ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡಿ


ತಾಪಂ ಸದಸ್ಯ ಸಂದೇಶ ದೊಡ್ಡಮೇಟಿ ಮಾತನಾಡಿ, ಜಕ್ಕಲಿ ಗ್ರಾಮದ ಮಹಿಳೆಯರು ರೋಣ ತಾಪಂ ಎದುರು ಪ್ರತಿಭಟನೆ ನಡೆಸಿ ಮನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿದ್ದರು. ಇದರಿಂದ 15 ದಿನಗಳಿಂದ ಗ್ರಾಮದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಸಹಕಾರದಿಂದ ಮನರೇಗಾ ಯೋಜನೆಯಡಿ ಇಂಗುಗುಂಡಿಗಳ ನಿರ್ಮಾಣ ನಡೆದಿತ್ತು. ಗ್ರಾಮದ ಯುವನೊಬ್ಬನ ಹೇಳಿಕೆಯಿಂದಾಗಿ ಅಧಿಕಾರಿಗಳು ಕೆಲಸ ನಿಲ್ಲಿಸಿದ್ದು ಸರಿಯಲ್ಲ. ದುಡಿಯುವ ಕೈಗಳಿಗೆ ನಿರಂತರ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಯುವಕನಿಂದ ಕ್ಷಮೆ :
ಮನರೇಗಾ ಯೋಜನೆಯಡಿ ನಡೆದಿರುವ ಕೆಲಗಳು ಕಳಪೆಯಾಗಿವೆ. ಕೆಲಸ ಬಂದ್‌ ಮಾಡುವಂತೆ ಗ್ರಾಮದ ಯುವಕನೊಬ್ಬ ದೂರವಾಣಿ ಕರೆ ಮಾಡಿ ತಿಳಿಸಿದ್ದ ಎಂದು ಎಡಿ ಮತ್ತು ಅಭಿಯಂತರ ಹೇಳಿದರು. ಈ ವೇಳೆ ಆ ಯುವಕನನ್ನು ಗ್ರಾಮ ಪಂಚಾಯಿತಿಗೆ ಕರೆಯಿಸಿದಾಗ ಮಹಿಳೆಯರು ಹಿಗ್ಗಾ ಮುಗ್ಗಾ ತಳಿಸಿದರು. ಇದರಿಂದ ದೂರವಾಣಿ ಕರೆ ಮಾಡಿರುವುದು ತಪ್ಪಾಗಿದೆ ಎಂದು ಯುವಕ ಕ್ಷ ಮೆ ಕೇಳಿದ ಘಟನೆಯೂ ನಡೆಯಿತು.

ಎಡಿಗೆ ತರಾಟೆ : ಸ್ಥಳಕ್ಕೆ ಆಗಮಿಸಿದ ಮನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಂತೋಷ ಪಾಟೀಲರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಕೆಲಸ ಕೊಡುವವರೆಗೂ ನೀವು ಸ್ಥಳದಿಂದ ಕದಲುವಂತಿಲ್ಲವೆಂದು ಮಹಿಳೆಯರು ಪಟ್ಟು ಹಿಡಿದರು. ಜಕ್ಕಲಿ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಕೆಲಸ ಬಂದ್‌ ಮಾಡುವುದಿಲ್ಲವೆಂದು ಎಡಿ ಸಂತೋಷ ಪಾಟೀಲ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಬೀಬಿಜಾನ ಕಳ್ಳಿಗುಡಿ, ಫಾತಿಮಾ ಬಾಲೆಸಾಬನವರ, ಪುಷ್ಪಾ ಗಾಣಿಗೇರ, ಶಿವಲೀಲಾ ಕೊಪ್ಪದ, ವಿಜಯಲಕ್ಷ್ಮೀ ರಂಗಣ್ಣವರ, ಜಮೀದಾರ ಸವದತ್ತಿ, ಪಾರಮ್ಮ ರಂಗಣ್ಣವರ, ಕಸ್ತೂರೇವ್ವ ರಂಗಣ್ಣವರ, ಲಕ್ಷ ್ಮವ್ವ ಕೊಪ್ಪದ, ಶಾರದಾ ಬಾರಕೇರ, ಬಸಪ್ಪ ಜಂಗಣ್ಣವರ, ಭೀಮಪ್ಪ ಜಂಗಣ್ಣವರ, ರಾಜೇಸಾಬ ಕಳ್ಳಿಗುಡಿ, ಮುತ್ತಪ್ಪ ಚಿನ್ನೂರ, ಶರಣಪ್ಪ ಕೋರಿ ಸೇರಿದಂತೆ 200ಕ್ಕೂ ಅಧಿಕ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ