ಆ್ಯಪ್ನಗರ

ದೇವರ ಬೆಳ್ಳಿ ಕವಚದ ಮೆರವಣಿಗೆ

ಗದಗ : ನಗರದ ಜೋಡ ಮಾರುತಿ ದೇವಸ್ಥಾನದಲ್ಲಿಡಿ.11 ರಂದು ಬೆಳಗ್ಗೆ 10ಕ್ಕೆ ಜೋಡ ಹನಮಂತ ದೇವಸ್ಥಾನ ಟ್ರಸ್ಟ್‌ ಕಮೀಟಿ ಆಶ್ರಯದಲ್ಲಿಜೋಡ ಮಾರುತಿಗೆ ಬೆಳ್ಳಿ ಕವಚದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ಪೇಟೆವೀರಭದ್ರ ದೇವಸ್ಥಾನದ ವಿಎನ್‌ಟಿ ರೋಡ್‌ದಿಂದ ಜೋಡ ಮಾರುತಿ ಬೆಳ್ಳಿ ಕವಚದ

Vijaya Karnataka 10 Dec 2019, 5:00 am
ಗದಗ : ನಗರದ ಜೋಡ ಮಾರುತಿ ದೇವಸ್ಥಾನದಲ್ಲಿಡಿ.11 ರಂದು ಬೆಳಗ್ಗೆ 10ಕ್ಕೆ ಜೋಡ ಹನಮಂತ ದೇವಸ್ಥಾನ ಟ್ರಸ್ಟ್‌ ಕಮೀಟಿ ಆಶ್ರಯದಲ್ಲಿಜೋಡ ಮಾರುತಿಗೆ ಬೆಳ್ಳಿ ಕವಚದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ಪೇಟೆವೀರಭದ್ರ ದೇವಸ್ಥಾನದ ವಿಎನ್‌ಟಿ ರೋಡ್‌ದಿಂದ ಜೋಡ ಮಾರುತಿ ಬೆಳ್ಳಿ ಕವಚದ ಮೆರವಣಿಯಲ್ಲಿಮಹಿಳೆಯರ ಕುಂಭ ಮೇಳ, ವಿವಿಧ ವಾದ್ಯಮೇಳದೊಂದಿಗೆ ಜವಳಿ ಬಜಾರ, ನಾಮಜೋಶಿ ರೋಡ್‌, ಪಟೇಲ ರೋಡ್‌ ಮೂಲಕ ದೇವಸ್ಥಾನ ತಲುಪುವುದು. ಜೋಡ ಮಾರುತಿಯ ವಿಶೇಷ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ. ಡಿ.12 ರಂದು ಜೋಡ ಮಾರುತಿ ಬೆಳ್ಳಿ ಕವಚ ಧಾರಣೆ, ಅಭಿಷೇಕ, ವಿಶೇಷ ಅಲಂಕಾರ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಈ ಕಾರ್ಯಕ್ಕೆ 10 ಕೆಜಿ ಬೆಳ್ಳಿಯನ್ನು ವಿನಿಯೋಗಿಸಲಾಗಿದೆ. ಭಕ್ತರಿಂದ ಸಂಗ್ರಹಗೊಂಡ ಬೆಳ್ಳಿ ಹಾಗೂ ಹುಬ್ಬಳ್ಳಿಯ ನಾರಾಯಣ ಮಲ್ಲೇಶಪ್ಪ ಗಂಡಗಾಳೇಕರ (ಕಲಾಲ) ಅವರು 2.5 ಕೆಜಿ ಬೆಳ್ಳಿ ಹಾಗೂ ಅದರ ಮಜೂರಿ ವೆಚ್ಚವನ್ನು ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ವಹಿಸಿಕೊಂಡಿದ್ದಾರೆ ಎಂದು ಟ್ರಸ್ಟ್‌ ಕಮೀಟಿ ಹಾಗೂ ಯುವಕ ಮಂಡಳ ಪ್ರಕಟಣೆಯಲ್ಲಿತಿಳಿಸಿದೆ.
Vijaya Karnataka Web gods silver clad procession
ದೇವರ ಬೆಳ್ಳಿ ಕವಚದ ಮೆರವಣಿಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ