ಆ್ಯಪ್ನಗರ

ಕ್ರೀಡೆಯಿಂದ ಉತ್ತಮ ಆರೋಗ್ಯ

ಗದಗ: ಇಲ್ಲಿನ ಸಿದ್ಧಲಿಂಗ ನಗರದ ಬಡಾವಣೆಯಲ್ಲಿರುವ ಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿವಾರ್ಷಿಕ ಕ್ರೀಡಾಕೂಟ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಗಳ ಆಡಳಿತಾಧಿಕಾರಿ ಪೊ.ಎಸ್‌.ಎಸ್‌.ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯವೇ ಸಂಪತ್ತು. ಆರೋಗ್ಯವೇ ಮಹಾಭಾಗ್ಯ

Vijaya Karnataka 10 Dec 2019, 6:19 pm
ಗದಗ: ಇಲ್ಲಿನ ಸಿದ್ಧಲಿಂಗ ನಗರದ ಬಡಾವಣೆಯಲ್ಲಿರುವ ಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿವಾರ್ಷಿಕ ಕ್ರೀಡಾಕೂಟ ಜರುಗಿತು.
Vijaya Karnataka Web good health from sport
ಕ್ರೀಡೆಯಿಂದ ಉತ್ತಮ ಆರೋಗ್ಯ

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಗಳ ಆಡಳಿತಾಧಿಕಾರಿ ಪೊ.ಎಸ್‌.ಎಸ್‌.ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯವೇ ಸಂಪತ್ತು. ಆರೋಗ್ಯವೇ ಮಹಾಭಾಗ್ಯ ಆರೋಗ್ಯವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ ಸರಿಯಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯ ಸಿಗುತ್ತದೆ ಎಂದರು.

ಅನ್ನದಾನ ಹಿರೇಮಠ ಮಾತನಾಡಿ, ಮಕ್ಕಳ ಶಿಸ್ತು ಶಾಲೆಯನ್ನು ಪ್ರತಿನಿಧಿಸುತ್ತದೆ. ಶಿಸ್ತನ್ನು ಅಳವಡಿಸಿಕೊಂಡರೆ ಸದೃಢ ಆರೋಗ್ಯ ಸಿಗುತ್ತದೆ ಎಂದರು.

ಸಮೂಹ ಸಂಪನ್ಮೂಲ ಅಧಿಕಾರಿ ಎಸ್‌.ವಿ.ಬಂಡಿಹಾಳ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ಗಳಿಗೆ ದಾಸರಾಗದೇ ಹೆಚ್ಚು ಕ್ರೀಡೆಯಲ್ಲಿಭಾಗವಹಿಸಬೇಕು ಹಾಗೂ ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವ ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಎಸ್‌.ಎಚ್‌.ರಾಮದುರ್ಗ ಮಾತನಾಡಿ, ಧೈರ್ಯದಿಂದ ಮುನ್ನುಗ್ಗಿದಾಗ ಯಶ ಲಭಿಸುತ್ತದೆ. ಕ್ರೀಡೆಯಲ್ಲಿಒಳಾಂಗಣ ಹಾಗೂ ಹೊರಾಂಗಣ ಎಂಬ ಪ್ರಕಾರಗಳಿದ್ದು ಇವೆರಡರಲ್ಲಿಮಕ್ಕಳು ಭಾಗವಹಿಸಬೇಕು ಎಂದರು.

ಎಸ್‌.ಬಿ.ಗೌಡರ, ಎಸ್‌.ಬಿ.ಯಾದವಾಡ, ಶಿವಾನಂದ ಗಿಡ್ಡಕೆಂಚಣ್ಣವರ, ನಿರಂಜನ ನಾಲ್ವತವಾಡ, ಕೆ.ಎಸ್‌.ಪಲ್ಲೇದ, ಗಿರಿಜಾ ಹಿರೇಮಠ, ಮುಖ್ಯೋಪಾಧ್ಯಾಯನಿ ಶೀತಲ್‌.ಎ.ಎನ್‌., ಶಹನಾಜ್‌ ಬಚನಳ್ಳಿ ಇದ್ದರು. ವಿ.ಸಿ.ದಾನಪ್ಪಗೌಡ್ರ ನಿರೂಪಿಸಿದರು. ಎಂ.ಆರ್‌. ಬೂಮಕ್ಕನವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ