ಆ್ಯಪ್ನಗರ

ಮಹಾತ್ಮರ ಕೃತಿಗಳಲ್ಲಿ ಉತ್ತಮ ಸಂದೇಶ

ಮುಂಡರಗಿ: ಸರಕಾರ ಎಲ್ಲಮಹಾತ್ಮರ ಜಯಂತಿ ಆಚರಿಸುವ ಉದ್ದೇಶ ಸಮಾಜ, ನಾಡಿಗೆ ನೀಡಿದ ಮಹಾತ್ಮರ ಕೊಡುಗೆ ಸ್ಮರಿಸಿ ಗೌರವ ಕೊಡುವುದರ ಜತೆಗೆ ಅವರ ಆದರ್ಶಗಳನ್ನು ಅನುಸರಿಸಿ ಸಮಾಜ ಪರಿವರ್ತನೆ ಮಾಡುವುದಾಗಿದೆ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಹೇಳಿದರು.

Vijaya Karnataka 16 Nov 2019, 5:00 am
ಮುಂಡರಗಿ: ಸರಕಾರ ಎಲ್ಲಮಹಾತ್ಮರ ಜಯಂತಿ ಆಚರಿಸುವ ಉದ್ದೇಶ ಸಮಾಜ, ನಾಡಿಗೆ ನೀಡಿದ ಮಹಾತ್ಮರ ಕೊಡುಗೆ ಸ್ಮರಿಸಿ ಗೌರವ ಕೊಡುವುದರ ಜತೆಗೆ ಅವರ ಆದರ್ಶಗಳನ್ನು ಅನುಸರಿಸಿ ಸಮಾಜ ಪರಿವರ್ತನೆ ಮಾಡುವುದಾಗಿದೆ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಹೇಳಿದರು.
Vijaya Karnataka Web good message in the works of mahatma
ಮಹಾತ್ಮರ ಕೃತಿಗಳಲ್ಲಿ ಉತ್ತಮ ಸಂದೇಶ


ತಾಲೂಕು ಆಡಳಿತದಿಂದ ತಾಲೂಕು ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿತಹಸೀಲ್ದಾರ ಕಚೇರಿಯಲ್ಲಿನಡೆದ ಕನಕದಾಸರ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಕ್ತ ಕನಕದಾಸರ ಮೋಹನ ತರಂಗಿಣಿ, ಭಕ್ತ ಹರಿದಾಸ ಕೃತಿಗಳಲ್ಲಿಅಮೂಲ್ಯ ಸಂದೇಶಗಳಿವೆ. ಮಹಾತ್ಮರು ಮಹಾನ್‌ ಕೃತಿ ರಚಿಸುವ ಸಾಮರ್ಥ್ಯ ಹೊಂದಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಆದರೆ ಅವರ ಕೃತಿ ಓದುವ ಸಾಮರ್ಥ್ಯ ನಾಡು ಪಡೆಯದೇ ಇರುವುದು ವಿಷಾದಕರ ಎಂದರು.

ತಾಪಂ ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿ, 16 ನೇ ಶತಮಾನದಲ್ಲಿಸಮಾಜದ ಅಂಕುಡೊಂಕುಗಳನ್ನು ತಮ್ಮ ದಾಸಸಾಹಿತ್ಯದ ಮೂಲಕ ಬದಲಾವಣೆಗೆ ಪ್ರಯತ್ನಿಸಿದ ಕನಕದಾಸರ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ವಿಚಾರಧಾರೆಗಳು ನಮ್ಮ ಜೀವನದಲ್ಲಿಹಾಸುಹೊಕ್ಕಾಗಬೇಕು ಎಂದರು. ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಡಾ.ಡಿ.ಎಲ್‌.ಕಲ್ಲಕುಟಿಗರ್‌ ಮಾತನಾಡಿ, ಇಡೀ ಮನುಕುಲದ ಉದ್ಧಾರಕ್ಕಾಗಿ ವೈಭವಯುತ ಜೀವನ ಬಿಟ್ಟು ಆದರ್ಶದ ಹಾದಿ ಹಿಡಿದ ಕನಕದಾಸರು ನಮಗೆ ಆದರ್ಶಪ್ರಾಯರು ಎಂದರು.

ಶಿವನಗೌಡ ಗೌಡರ, ದೇವಪ್ಪ ಇಟಗಿ ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಆಯಾ ಸಮುದಾಯಕ್ಕೆ ಸೀಮಿತಗೊಳಿಸದೆ ಸರಕಾರ ಒಟ್ಟಾಗಿ ಎಲ್ಲಮಹಾತ್ಮರ ಜಯಂತಿಗಳನ್ನು ಒಂದೆಡೆ ಆಚರಿಸುವಂತಾಗಬೇಕು ಹೀಗಾದಾಗ ಮಹಾತ್ಮರಿಗೆ ನಾವು ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿದರು.

ತಾಪಂ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಶ್ರೀನಿವಾಸ ಅಬ್ಬಿಗೇರಿ, ಕೊಟ್ರಗೌಡ ಪಾಟೀಲ, ಲಕ್ಷತ್ರ್ಮಣ ತಗಡಿನಮನಿ, ಶಂಕರ ಉಳ್ಳಾಗಡ್ಡಿ, ಶೇಖಣ್ಣ ಚಿಂಚಲಿ, ಯಲ್ಲಪ್ಪ ಕುಕನೂರ, ಮಂಜುನಾಥ ಮುಧೋಳ, ಶಿರಸ್ತೆದಾರ ಬಿ.ಎಸ್‌.ಕನ್ನೂರ, ಎಸ್‌.ಎಚ್‌.ಬಿಚ್ಚಾಲಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ