ಆ್ಯಪ್ನಗರ

ನಿರಂತರ ಅಭ್ಯಾಸದಿಂದ ಉತ್ತಮ ಫಲಿತಾಂಶ

ಮುಳಗುಂದ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭವಿಷ್ಯದ ಕಲ್ಪನೆ ಮುಂದಿಟ್ಟುಕೊಂಡು ನಿರಂತರ ಅಭ್ಯಾಸ ನೆಡೆಸಿದರೆ ಉತ್ತಮ ಪಲಿತಾಂಶ ಪಡೆಯಬಹುದು ಎಂದು ಗದಗ ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಹೇಳಿದರು.

Vijaya Karnataka 8 Nov 2019, 5:28 pm
ಮುಳಗುಂದ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭವಿಷ್ಯದ ಕಲ್ಪನೆ ಮುಂದಿಟ್ಟುಕೊಂಡು ನಿರಂತರ ಅಭ್ಯಾಸ ನೆಡೆಸಿದರೆ ಉತ್ತಮ ಪಲಿತಾಂಶ ಪಡೆಯಬಹುದು ಎಂದು ಗದಗ ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಹೇಳಿದರು.
Vijaya Karnataka Web good result from continuous practice
ನಿರಂತರ ಅಭ್ಯಾಸದಿಂದ ಉತ್ತಮ ಫಲಿತಾಂಶ


ಅವರು ಪಟ್ಟಣದ ಬಾಲಲೀಲಾ ಮಹಾಮತ ಶಿವಯೋಗಿಗಳ ಕಲಾ ಭವನದಲ್ಲಿಹಮ್ಮಿಕೊಂಡ ಮುಳಗುಂದ ಹೊಬಳಿ ಮಟ್ಟದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ದಿನನಿತ್ಯ ನಿರಂತರವಾಗಿ ಅಭ್ಯಾಸ ಮಾಡಬೇಕು ಮತ್ತು ಗೊತ್ತಾಗದ ಪ್ರಶ್ನೆಗಳಿಗೆ ಶಿಕ್ಷಕರಲ್ಲಿಕೇಳಿ ತಿಳಿದುಕೊಳ್ಳಬೇಕು. ಇದರಿಂದ ಉತ್ತಮ ಫಲಿಂತಾಶ ಪಡೆಯಲು ಸಹಕಾರಿಯಾಗಲಿದೆ ಎಂದರು. ನಂತರ ವಿದ್ಯಾರ್ಥಿ/ನಿಯರಿಗೆ ಪರೀಕ್ಷೆ ಸಮಯದಲ್ಲಿಯಾವರೀತಿ ಅಭ್ಯಾಸ ಮಾಡಬೇಕು, ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ಯಾವರೀತಿ ಉತ್ತರಿಸಬೇಕು ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿಗದಗ ಶಿಕ್ಷಣಾಧಿಕಾರಿ ಮಂಗಳಾ ತಾಪಸಕರ. ಎಸ್‌.ಕೆ.ಹವಾಲ್ದಾರ, ಪಿ.ಎಂ.ಮೆಣಸಿನಕಾಯಿ. ಸಿ.ಎಚ್‌.ದೊಡ್ಡಮನಿ,ಆರ್‌.ಆರ್‌.ಪಟ್ಟಣ, ಗುಳೆದಗುಡ್ಡ ಹಾಗೂ ಎಸ್‌.ಎಂ.ಉಜ್ಜಣ್ಣವರ, ಎಂಎಂ.ಮೆಗಲಮನಿ ಹಾಗೂ ಮುಳಗುಂದ ಹೊಬಳಿ ಮಟ್ಟದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ/ನಿಯರು ಮತ್ತು ಪ್ರೌಢಶಾಲಾ ಶಿಕ್ಷಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ