ಆ್ಯಪ್ನಗರ

ಗುಣಮಟ್ಟದ ಶಿಕ್ಷಣದಿಂದ ಉತ್ತಮ ಫಲಿತಾಂಶ

ಗದಗ: ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು. ಕಲಿಕೆಯೊಂದಿಗೆ ಕಲಿಸುವಿಕೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಬರಲು ಕಂಕಣಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಹೇಳಿದರು.

Vijaya Karnataka 22 Sep 2019, 5:00 am
ಗದಗ: ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು. ಕಲಿಕೆಯೊಂದಿಗೆ ಕಲಿಸುವಿಕೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಬರಲು ಕಂಕಣಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಹೇಳಿದರು.
Vijaya Karnataka Web good result from quality education
ಗುಣಮಟ್ಟದ ಶಿಕ್ಷಣದಿಂದ ಉತ್ತಮ ಫಲಿತಾಂಶ


ನಗರದ ಐಎಂಎ ಸಭಾಂಗಣದಲ್ಲಿರೋಟರಿ ಗದಗ ಸೆಂಟ್ರಲ್‌ ಕ್ಲಬ್‌ ಶಿಕ್ಷಕರ ದಿನಾಚರಣೆ ನಿಮಿತ್ತ ಗ್ರಾಮೀಣ ಪ್ರದೇಶದಲ್ಲಿಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಆಯ್ದ 10 ಆದರ್ಶ ಶಿಕ್ಷಕ-ಶಿಕ್ಷಕಿಯರ ಸನ್ಮಾನ ಸಮಾರಂಭದಲ್ಲಿಅವರು ಮಾತನಾಡಿದರು.

ಸಮಾಜದಲ್ಲಿಶಿಕ್ಷಕರ ಬಗ್ಗೆ ಬಹಳಷ್ಟು ಗೌರವವಿದೆ. ಆ ಗೌರವ ಕಾಯ್ದುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಸೌಲಭ್ಯ ನೀಡುತ್ತಿದ್ದು ಅವುಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಪ್ರೊ. ಅನಿಲ ವೈದ್ಯ ಮಾತನಾಡಿ, ಪ್ರಾಥಮಿಕ ಮಾಧ್ಯಮಿಕ ಹಂತದಲ್ಲಿಶಿಕ್ಷಣ ನೀಡುವ ಅದರಲ್ಲೂವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿಶಿಕ್ಷಣ ನೀಡುವ ಕಾರ್ಯದಲ್ಲಿತೊಡಗಿರುವ ಶಿಕ್ಷಕ ಶಿಕ್ಷಕಿಯರ ಕಾರ್ಯ ನಿಜಕ್ಕೂ ಶ್ಲಾತ್ರ್ಯಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸೆಂಟ್ರಲ್‌ ಅಧ್ಯಕ್ಷ ರಾಜು ಗುಡಿಮನಿ ಮಾತನಾಡಿ, ಸಮಾಜದಲ್ಲಿಗುರುವಿಗೆ ಬಹು ದೊಡ್ಡ ಸ್ಥಾನ ನೀಡಲಾಗಿದೆ. ಗುರುವನ್ನು ದೇವರೆಂದು ಪೂಜ್ಯಭಾವನೆಯಿಂದ ಗೌರವಿಸಲಾಗುತ್ತಿದೆ. ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯ ಮಾಡುತ್ತಿರುವ ರೋಟರಿ ಗದಗ ಸೆಂಟ್ರಲ್‌ ಗ್ರಾಮೀಣ ಪ್ರದೇಶಕ್ಕೆ ತನ್ನ ಸೇವೆ ವಿಸ್ತರಿಸಿದೆ ಎಂದರು.

ಇದೇ ಸಂದರ್ಭದಲ್ಲಿಎಚ್‌.ಬಿ.ರಡ್ಡೇರ, ಎಂ.ಎಚ್‌.ಕಂಬಳಿ, ಪ್ರೊ.ಅನಿಲ ವೈದ್ಯ, ಸುರೇಶ ಕೊಪ್ಪದ, ಜಿ.ಬಿ.ದೊಣ್ಣಿ, ಶಾಂತಾ ಹುರಕಡ್ಲಿ, ವಿಜಯಾ ಓದುಸುಮಠ, ಸುಧಾ ಬೆನಕಲ್ಲ, ಎಚ್‌.ಬಿ.ಮೇಟಿ, ಮಂಜುನಾಥ ಹದ್ದಣ್ಣವರ, ಎಂ.ಸಿ.ವಗ್ಗಿ ಅವರನ್ನು ಸನ್ಮಾನಿಸಲಾಯಿತು.

ಡಾ.ಹಿರೇಗೌಡರ, ಡಾ.ಪ್ರಭು ಗಂಜಿಹಾಳ, ಡಾ.ರಾಜು ರೋಖಡೆ, ವಿಜಯಕುಮಾರ ಹಿರೇಮಠ, ಸಿ.ಎಫ್‌.ಹವಳದ, ಸಿ.ಜಿ.ಹಿರೇಗೌಡರ, ಎಂ.ಐ.ಬೇಲೇರಿ, ರಾಜು ಕುರಡಗಿ, ಸಿ.ಎಫ್‌.ಹವಳದ, ಪ್ರಕಾಶ ಉಗಲಾಟ, ಬಿ.ಅಪ್ಪುರಾಜ, ಆರ್‌.ಆರ್‌.ದಾನಪ್ಪಗೌಡರ, ಬಿ.ಬಿ.ಸಂಕನಗೌಡ್ರ, ಎಸ್‌.ಎಸ್‌.ಮೇಟಿ, ಆರ್‌.ವಿ.ಉಮನಾಬಾದಿ, ಎಂ.ಸಿ.ಚಂದಪ್ಪನವರ, ಪಿ.ಎಂ.ಮೂಲಿಮನಿ, ವ್ಹಿ.ಕೆ.ಗುರುಮಠ, ಆರ್‌.ಬಿ.ದೊಂಡಪ್ಪಗೌಡರ, ವ್ಹಿ.ಎಸ್‌.ಗದ್ದಿಕೇರಿ, ಪಿ.ವ್ಹಿ.ಹೆಗಡೆ, ಪ್ರೊ.ಟಿ.ಎನ್‌.ಗೋಡಿ ಇದ್ದರು.

ಪುಷ್ಪಾ ಪ್ರಭು ಪ್ರಾರ್ಥಿಸಿದರು. ರಾಜು ಗುಡಿಮನಿ ಸ್ವಾಗತಿಸಿದರು. ಕವಿತಾ ದಂಡಿನ ಪರಿಚಯಿಸಿದರು. ಚೇತನ ಅಂಗಡಿ ವರದಿ ವಾಚಿಸಿದರು. ಎಂ.ಸಿ.ಐಲಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ