ಗದಗ: ಜಿಲ್ಲೆಯ ವಿವಿಧೆಡೆ ಮಂಗಳವಾರ 9ನೇ ದಿನದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಡೋಳ್ಳು ಕುಣಿತ ನೋಡುಗರನ್ನು ಗಮನ ಸೆಳೆಯಿತು. ಸುಮಂಗಲೆಯರು ಕುಂಭ ಹೊತ್ತು ಮೇಳ, ಮಹಿಳೆಯರಿಂದ ಆರತಿ ಮಾಡುವ ಮೂಲಕ ಗಣೇಶ ಮೂರ್ತಿಗಳಿಗೆ ವಿದಾಯ ಹೇಳಲಾಯಿತು.
9 ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆ ವಿಶೇಷ ಪೂಜೆ ನೆರವೇರಿದವು. ಗಣೇಶ ಮಂಡಳಿಗಳಿಂದ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆದವು. ಎಲ್ಲೆಡೆ ಪಟಾಕಿ ಅಬ್ಬರ ಜೋರಾಗಿತ್ತು. ವಿಸರ್ಜನಾ ಮೆರವಣಿಗೆಯಲ್ಲಿಯುವಕರು, ಮಕ್ಕಳು ಸಂಭ್ರಮ ಮೇರೆ ಮೀರಿತ್ತು. ಹುಯಿಲಗೋಳ ನಾರಾಯಣರಾವ್ ವೃತ್ತ (ಟಾಂಗಾ ಕೂಟ), ಮೈಕ್ರೋ ಟವರ್, ಜೋಡಹನಮಂತ ದೇವರ ಗುಡಿ ರಸ್ತೆ ಮೂಲಕ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿಂಹದ ಕೆರೆಯಲ್ಲಿವಿಸರ್ಜನೆಯಾದವು.
ಸಂಭ್ರಮದ ಮೆರವಣಿಗೆ:
ವಿವಿಧ ಗಜಾನೋತ್ಸವ ಸಮಿತಿಗಳು, ಸಂಘ-ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿಪ್ರತಿಷ್ಠಾಪಿಸ್ಪಟ್ಟಿದ್ದ ಗಣಪತಿ ಮೂರ್ತಿಗಳಿಗೆ ಮಂಗಳವಾರ ಕೊನೆಯದಾಗಿ ಪೂಜೆ ನೆರವೇರಿಸಲಾಯಿತು. ಭಕ್ತರು ವಿಘ್ನ ನಿವಾರಕನಿಗೆ ನೈವೇದ್ಯ ಅರ್ಪಿಸಿದರು. ಇದೇ ಸಂದರ್ಭ ವಸ್ತುಗಳ ಸವಾಲು ಮಾಡಲಾಯಿತು. ಭಕ್ತರು ತಮ್ಮ ಶಕ್ತಾನುಸಾರ ಹಣ್ಣು, ಹಾರ, ತುರಾಯಿ, ಶಾಲು ಸೇರಿದಂತೆ ಗಣೇಶನಿಗೆ ಸಿಂಗರಿಸಿದ್ದ ವಿವಿಧ ವಸ್ತುಗಳನ್ನು ಸವಾಲಿನಲ್ಲಿಪಡೆದರು. ಅದಾದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಡಿಜೆ ಸೌಂಡ್ಗೆ ಹೆಜ್ಜೆ:
ಸಿಂಗರಿಸಿದ್ದ ಟ್ರ್ಯಾಕ್ಟರ್, ರಿಕ್ಷಾ ಸೇರಿದಂತೆ ವಿವಿಧ ವಾಹನದಲ್ಲಿಗಣೇಶ ಮೂರ್ತಿಗಳನ್ನು ಕೂರಿಸಿ ಪ್ರಮುಖ ಮಾರ್ಗ, ವೃತ್ತಗಳಲ್ಲಿಮೆರವಣಿಗೆ ನಡೆಸಲಾಯಿತು. ಸಂಭ್ರಮದಲ್ಲಿದ್ದ ಭಕ್ತರು ಡಿಜೆ ಸೌಂಡ್ಗೆ ಹೆಜ್ಜೆ ಹಾಕುತ್ತಸಾಗಿದರು. ಮಕ್ಕಳು, ಯುವಕರು, ಹಿರಿಯರು ಸಹ ಡಿಜೆಗೆ ಹೆಜ್ಜೆ ಹಾಕುವುದು ಕಂಡು ಬಂದಿತು. ಕೆಲವು ಸಂಘ ಸಂಸ್ಥೆಗಳು ದೊಡ್ಡ ಬ್ಯಾನರ್ಗಳನ್ನು ಉಪಯುಕ್ತ ಮಾಹಿತಿ ನೀಡುವ ಮೂಲಕ ಮೆರವಣಿಗೆ ನೋಡುವ ಜನರಿಗೆ ಉಪಯುಕ್ತ ಮಾಹಿತಿ ನೀಡಿದರು. ಸುಮಂಗಲೆಯರು ಕುಂಭ ಮೇಳ, ಮಹಿಳೆಯರಿಂದ ಆರತಿ ಮಾಡಿದರು. ನಂತರ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿಂಹದ ಕೆರೆಯಲ್ಲಿವಿಸರ್ಜನೆ ಮಾಡಿದರು.
ಪಾರೀತೋಷಕ ವಿತರಣೆ
ಅವಳಿ ನಗರದಲ್ಲಿಪ್ರತಿಷ್ಠಾಪಿಸಲಾಗಿರುವ ಗಣೇಶೋತ್ಸವ ಮಂಡಳಿಗಳು ಕೈಗೊಂಡಿರುವ ಪೆಂಡಾಲ್ ಅಲಂಕಾರ, ವೇದಿಕೆ ಅಲಂಕಾರ, ಗಣೇಶ ಮೂರ್ತಿಯ ವಿಶಿಷ್ಟ ಭಂಗಿ ಮುಂತಾದ ವಿಭಾಗಗಳಲ್ಲಿಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯಿಂದ ವಿವಿಧ ಪಾರಿತೋಷಕ ನೀಡಲಾಯಿತು. ಸಂಘದವರು ಸಹ ನಾನಾ ಚಟುವಟಿಕೆಯನ್ನು ಮಕ್ಕಳಿಗಾಗಿ ಹಮ್ಮಿಕೊಂಡಿದ್ದರು. ಅವರಿಗೂ ಸಹ ಬಹುಮಾನ ನೀಡಿದರು.
ಗಣೇಶ ದೃಶ್ಯಾವಳಿ ವೀಕ್ಷಣೆ:
ಅವಳಿ ನಗರದಲ್ಲಿಗಣೇಶೋತ್ಸವದಂಗವಾಗಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿರುವ ವಿವಿಧ ಭಂಗಿಯ ಗಣೇಶ ಮೂರ್ತಿಗಳು, ದೃಶ್ಯಾವಳಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವೀಕ್ಷಿಸಲು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಗಣೇಶ ಮಂಡಳಿಗಳು ಗಣೇಶನ ಮಹಿಮೆ ಸಾರುವ, ಭಾರತೀಯ ಅಧ್ಯಾತ್ಮದ ಹಿನ್ನೆಲೆ, ಹಿಂದೂ ಪರಂಪರೆ, ಹಿರಿಮೆ, ಗರಿಮೆ ಸಾರುವ ದೃಶ್ಯಾವಳಿಗಳನ್ನು ರೂಪಿಸಲಾಗಿದೆ.
9 ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆ ವಿಶೇಷ ಪೂಜೆ ನೆರವೇರಿದವು. ಗಣೇಶ ಮಂಡಳಿಗಳಿಂದ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆದವು. ಎಲ್ಲೆಡೆ ಪಟಾಕಿ ಅಬ್ಬರ ಜೋರಾಗಿತ್ತು. ವಿಸರ್ಜನಾ ಮೆರವಣಿಗೆಯಲ್ಲಿಯುವಕರು, ಮಕ್ಕಳು ಸಂಭ್ರಮ ಮೇರೆ ಮೀರಿತ್ತು. ಹುಯಿಲಗೋಳ ನಾರಾಯಣರಾವ್ ವೃತ್ತ (ಟಾಂಗಾ ಕೂಟ), ಮೈಕ್ರೋ ಟವರ್, ಜೋಡಹನಮಂತ ದೇವರ ಗುಡಿ ರಸ್ತೆ ಮೂಲಕ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿಂಹದ ಕೆರೆಯಲ್ಲಿವಿಸರ್ಜನೆಯಾದವು.
ಸಂಭ್ರಮದ ಮೆರವಣಿಗೆ:
ವಿವಿಧ ಗಜಾನೋತ್ಸವ ಸಮಿತಿಗಳು, ಸಂಘ-ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿಪ್ರತಿಷ್ಠಾಪಿಸ್ಪಟ್ಟಿದ್ದ ಗಣಪತಿ ಮೂರ್ತಿಗಳಿಗೆ ಮಂಗಳವಾರ ಕೊನೆಯದಾಗಿ ಪೂಜೆ ನೆರವೇರಿಸಲಾಯಿತು. ಭಕ್ತರು ವಿಘ್ನ ನಿವಾರಕನಿಗೆ ನೈವೇದ್ಯ ಅರ್ಪಿಸಿದರು. ಇದೇ ಸಂದರ್ಭ ವಸ್ತುಗಳ ಸವಾಲು ಮಾಡಲಾಯಿತು. ಭಕ್ತರು ತಮ್ಮ ಶಕ್ತಾನುಸಾರ ಹಣ್ಣು, ಹಾರ, ತುರಾಯಿ, ಶಾಲು ಸೇರಿದಂತೆ ಗಣೇಶನಿಗೆ ಸಿಂಗರಿಸಿದ್ದ ವಿವಿಧ ವಸ್ತುಗಳನ್ನು ಸವಾಲಿನಲ್ಲಿಪಡೆದರು. ಅದಾದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಡಿಜೆ ಸೌಂಡ್ಗೆ ಹೆಜ್ಜೆ:
ಸಿಂಗರಿಸಿದ್ದ ಟ್ರ್ಯಾಕ್ಟರ್, ರಿಕ್ಷಾ ಸೇರಿದಂತೆ ವಿವಿಧ ವಾಹನದಲ್ಲಿಗಣೇಶ ಮೂರ್ತಿಗಳನ್ನು ಕೂರಿಸಿ ಪ್ರಮುಖ ಮಾರ್ಗ, ವೃತ್ತಗಳಲ್ಲಿಮೆರವಣಿಗೆ ನಡೆಸಲಾಯಿತು. ಸಂಭ್ರಮದಲ್ಲಿದ್ದ ಭಕ್ತರು ಡಿಜೆ ಸೌಂಡ್ಗೆ ಹೆಜ್ಜೆ ಹಾಕುತ್ತಸಾಗಿದರು. ಮಕ್ಕಳು, ಯುವಕರು, ಹಿರಿಯರು ಸಹ ಡಿಜೆಗೆ ಹೆಜ್ಜೆ ಹಾಕುವುದು ಕಂಡು ಬಂದಿತು. ಕೆಲವು ಸಂಘ ಸಂಸ್ಥೆಗಳು ದೊಡ್ಡ ಬ್ಯಾನರ್ಗಳನ್ನು ಉಪಯುಕ್ತ ಮಾಹಿತಿ ನೀಡುವ ಮೂಲಕ ಮೆರವಣಿಗೆ ನೋಡುವ ಜನರಿಗೆ ಉಪಯುಕ್ತ ಮಾಹಿತಿ ನೀಡಿದರು. ಸುಮಂಗಲೆಯರು ಕುಂಭ ಮೇಳ, ಮಹಿಳೆಯರಿಂದ ಆರತಿ ಮಾಡಿದರು. ನಂತರ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿಂಹದ ಕೆರೆಯಲ್ಲಿವಿಸರ್ಜನೆ ಮಾಡಿದರು.
ಪಾರೀತೋಷಕ ವಿತರಣೆ
ಅವಳಿ ನಗರದಲ್ಲಿಪ್ರತಿಷ್ಠಾಪಿಸಲಾಗಿರುವ ಗಣೇಶೋತ್ಸವ ಮಂಡಳಿಗಳು ಕೈಗೊಂಡಿರುವ ಪೆಂಡಾಲ್ ಅಲಂಕಾರ, ವೇದಿಕೆ ಅಲಂಕಾರ, ಗಣೇಶ ಮೂರ್ತಿಯ ವಿಶಿಷ್ಟ ಭಂಗಿ ಮುಂತಾದ ವಿಭಾಗಗಳಲ್ಲಿಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯಿಂದ ವಿವಿಧ ಪಾರಿತೋಷಕ ನೀಡಲಾಯಿತು. ಸಂಘದವರು ಸಹ ನಾನಾ ಚಟುವಟಿಕೆಯನ್ನು ಮಕ್ಕಳಿಗಾಗಿ ಹಮ್ಮಿಕೊಂಡಿದ್ದರು. ಅವರಿಗೂ ಸಹ ಬಹುಮಾನ ನೀಡಿದರು.
ಗಣೇಶ ದೃಶ್ಯಾವಳಿ ವೀಕ್ಷಣೆ:
ಅವಳಿ ನಗರದಲ್ಲಿಗಣೇಶೋತ್ಸವದಂಗವಾಗಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿರುವ ವಿವಿಧ ಭಂಗಿಯ ಗಣೇಶ ಮೂರ್ತಿಗಳು, ದೃಶ್ಯಾವಳಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವೀಕ್ಷಿಸಲು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಗಣೇಶ ಮಂಡಳಿಗಳು ಗಣೇಶನ ಮಹಿಮೆ ಸಾರುವ, ಭಾರತೀಯ ಅಧ್ಯಾತ್ಮದ ಹಿನ್ನೆಲೆ, ಹಿಂದೂ ಪರಂಪರೆ, ಹಿರಿಮೆ, ಗರಿಮೆ ಸಾರುವ ದೃಶ್ಯಾವಳಿಗಳನ್ನು ರೂಪಿಸಲಾಗಿದೆ.