ಆ್ಯಪ್ನಗರ

ಸರಕಾರಿ ಶಾಲೆ ಶುಲ್ಕ ಕಡಿಮೆ ಮಾಡಿ: ಬಳ್ಳಾರಿ

ಕಾಕೋಳ : ಸರಕಾರ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷ ಣಕ್ಕೆ ಒತ್ತು ನೀಡುತ್ತಿದೆ. ಸರಕಾರಿ ಶಾಲೆಗಳ ಕಟ್ಟಡ ಮತ್ತು ಗುಣಮಟ್ಟದ ಶಿಕ್ಷ ಣದ ಜತೆಗೆ ಶುಲ್ಕ ಕಡಿಮೆ ಮಾಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.

Vijaya Karnataka 10 Feb 2019, 5:00 am
ಕಾಕೋಳ : ಸರಕಾರ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷ ಣಕ್ಕೆ ಒತ್ತು ನೀಡುತ್ತಿದೆ. ಸರಕಾರಿ ಶಾಲೆಗಳ ಕಟ್ಟಡ ಮತ್ತು ಗುಣಮಟ್ಟದ ಶಿಕ್ಷ ಣದ ಜತೆಗೆ ಶುಲ್ಕ ಕಡಿಮೆ ಮಾಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.
Vijaya Karnataka Web government school fees reduce bellary
ಸರಕಾರಿ ಶಾಲೆ ಶುಲ್ಕ ಕಡಿಮೆ ಮಾಡಿ: ಬಳ್ಳಾರಿ


ರಾಣೇಬೆನ್ನೂರ ತಾಲೂಕಿನ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಜ್ಜರಿ ಗ್ರಾಮದಲ್ಲಿ ನೂತನ ಸರಕಾರಿ ಶಾಲಾ ಕಟ್ಟಡಕ್ಕೆ ಮತ್ತು ಎಸ್‌.ಟಿ ಕಾಲೊನಿಯ ಸಿಸಿ ರಸ್ತೆಗೆ ಶನಿವಾರ ಭೂಮಿಪೂಜೆ ಮಾಡಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿನ ಸರಕಾರಿ ಶಾಲೆಗಳ ಕಟ್ಟಡಕ್ಕೆ 7. 14 ಕೋಟಿ ಮಂಜೂರಾಗಿದೆ. ಶಿಥಿಲಾವಸ್ಥೆಗೆ ಬಂದಿರುವ ಕಟ್ಟಡಕ್ಕೆ ಕೇಂದ್ರದಿಂದ ಸುಮಾರು 33 ಕೋಟಿಗೆ ಪ್ರಸ್ತಾವನೆಗೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ಆ ಕೆಲಸವೂ ನಡೆಯುತ್ತದೆ. ಮೂಲ ಸೌಕರ್ಯ ಸರಿಯಾಗಿದ್ದರೆ ಕಲಿಕೆಯಲ್ಲಿ ಬಡ ಮಕ್ಕಳು ಮುಂದೆ ಬರುತ್ತಾರೆ ಎಂದರು.

ಬಜೆಟ್‌ನಲ್ಲಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಮದಗ ಮಾಸೂರ ಕೆರೆಗೆ 25 ಕೋಟಿ ಹಣ ಘೋಷಣೆ ಮಾಡಿದ್ದು ಉಳಿದ ಯಾವ ಅಭಿವೃದ್ದಿ ಕೆಲಸಕ್ಕೆ ಒತ್ತು ನೀಡದಿರುವುದು ನಿರಾಸಾದಾಯಕವಾಗಿದೆ ಎಂದರು.

ಜಿ.ಪಂ ಸದಸ್ಯ ಏಕನಾಥ ಬಾನುವಳ್ಳಿ ಮಾತನಾಡಿ, ಮಕ್ಕಳ ಸಂಖ್ಯೆ ಅನುಗುಣಕ್ಕೆ ಕೊಠಡಿಗಳು ಅವಶ್ಯವಿರುತ್ತದೆ. ಶಿಕ್ಷ ಣ ಇಲಾಖೆಯಿಂದ ಪ್ರತಿ ವರ್ಷ ಶಾಲಾ ನಿರ್ವಹಣೆಗೆ ಬರುವ ಹಣದಲ್ಲಿ ಒಂದೊಂದು ಕೊಠಡಿಗಳಿಗೆ ಸುಣ್ಣ ಬಣ್ಣ ಮಾಡಿಸಬೇಕು. ಮೂರ್ನಾಲ್ಕು ವರ್ಷಗಳಲ್ಲಿ ಎಲ್ಲಾ ಕೊಠಡಿಗಳಿಗೆ ಬಣ್ಣ ಪೂರೈಸಿ ಕಟ್ಟಡ ಹಾಳಾಗದಂತೆ ನೊಡಿಕೊಂಡು ಹೋದರೆ ಶಾಲೆಯ ಅಂದ ಚೆಂದವು ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳು ಸರಕಾ ಶಾಲೆಗಳತ್ತ ಗಮನ ಸೆಳೆಯುವಂತೆ ಮಾಡುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌ ಶ್ರೀಧರ ಮಾತನಾಡಿ, ಎಸ್‌ಡಿಎಮ್‌ಸಿ ಹಾಗೂ ಗ್ರಾಮಸ್ಥರು ಸರಕಾರದ ಯೋಜನೆಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳÜಬೇಕು. ಅಷ್ಟೇ ಅಲ್ಲದೇ ಇಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಿದ್ದು ಅವರಿಗೆ ಶೌಚಾಲಯ ಕಾಮಗಾರಿ ಪೂರ್ಣ ಮಾಡಿ ಕೊಡಬೇಕು ಎಂದು ಕೇಳಿಕೊಂಡರು

ಗುತ್ತಿಗೆದಾರರಿಗೆ ತರಾಟೆ

ಕಾಕೋಳದಲ್ಲಿ ಸಮುದಾಯ ಭವನ ಮತ್ತು ಸಿಸಿ ರಸ್ತೆ ನಿರ್ಮಾಣ, ಯತ್ನಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಸೇರಿದಂತೆ ಹಲವೆಡೆ ಕಾಮಗಾರಿಗಳ ಭೂಮಿ ಪೂಜೆ ನಡೆಯಿತು.

ಈ ವೇಳೆ, ಈ ಹಿಂದೆ ಗ್ರಾಮದಲ್ಲಿ ನೂತನ ಗಟಾರ ನಿರ್ಮಾಣಕ್ಕೆ ಅಭಿಯಂತರರು ಸ್ಕೇಚ್‌ ಹಾಕಿ ಕಾಮಗಾರಿ ಮಾಡಲು ಮುಂದಾದಾಗ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಕೆಲಸ ನಿಲ್ಲಿಸಿದ್ದಾರೆಂದು ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತ ದಿಲೀಪ್‌ ಮೋಟೆಬೆನ್ನೂರ ಆರೋಪಿಸಿದರು. ಇದರಿಂದ ಗುತ್ತಿಗೆದಾರ ಮತ್ತು ಗ್ರಾಮಸ್ಥರ ನಡುವೆ ಕೆಲ ಕಾಲ ವಾಗ್ವಾದ ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ತಾ.ಪ ಸದಸ್ಯ ಭರಮಪ್ಪ ಉರ್ಮಿ, ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಬುಡಪನಹಳ್ಳಿ, ಪರಮೇಶ ಲಮಾಣಿ, ಮಾರ್ತಾಡೆಪ್ಪ ಮೊಟೆಬೆನ್ನೂರ, ಸುರೇಶ ಯತ್ನಳ್ಳಿ, ಸಿ.ಆರ್‌.ಪಿ ಸಲ್ಮಾ ಶೇಖ, ನಾಗನಗೌಡ ಪಾಟೀಲ, ತಿರಕಪ್‌ ಬುಡಪನಹಳ್ಳಿ, ಸುರೇಶ ಕರೆಮಲ್ಲಣ್ಣನವರ, ಕಾಕೋಳ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಹವಳೆಪ್ಪನವರ, ರಾಜುಗೌಡ ಪಾಟೀಲ, ದಯಾನಂದ ಜಾಧವ ಮತ್ತಿತರರು ಹಾಜರಿದ್ದರು.

ಸಿ.ಆರ್‌ ಭಗವಂತಗೌಡರ ಸ್ವಾಗತಿಸಿದರು. ಆನಂದ ಏಳಕುರಿ ನಿರೂಪಿಸಿದರು. ಆರ್‌.ಎಚ್‌ ಕೋಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ