ಆ್ಯಪ್ನಗರ

ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ: ಸಿಸಿ ಪಾಟೀಲ್‌

ಎಲ್ಲ ವಿಷಯವೂ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ದೇಶ ದ್ರೋಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳುತ್ತೆವೆ.

Vijaya Karnataka Web 22 Feb 2020, 11:11 am
ಗದಗ: ಪಾಕಿಸ್ತಾನ ಪರ ಬೆಂಗಳೂರಿನಲ್ಲಿ ಘೋಷಣೆ ಕೂಗಿರುವದು ದುರದೃಷ್ಟಕರ. ಅದು ಫ್ರೀಡಂ ಪಾರ್ಕ್ ನಂತಹ ಪವಿತ್ರ ಸ್ಥಳದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ್‌ ತಿಳಿಸಿದರು.
Vijaya Karnataka Web ಸಿಸಿ ಪಾಟೀಲ್‌
ಸಿಸಿ ಪಾಟೀಲ್‌


ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್‌ ಪ್ರಕರಣ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಗದಗದಲ್ಲಿ ಸುದ್ಧಿಗೋಷ್ಠಿನಲ್ಲಿ ಸಚಿವರು ಮಾತನಾಡಿದರು.

ಅಮೂಲ್ಯಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಅಂತಾರೆ, ಹಾಗಾದ್ರೆ ಅವಳ ಕೈನಲ್ಲಿ ಮೈಕ್ ಹೇಗೆ ಬಂತು? ಎಂದು ಆಯೋಜಕರಿಗೆ ಸಚಿವರು ಪ್ರಶ್ನಿಸಿದರು.

ಕೆಲವು ದೇಶದ್ರೋಹ ಸಂಘಟನೆಗಳ ಜತೆಗೆ ಯುವ ಸಮುದಾಯ ಕೈ ಜೊಡಿಸುತ್ತಿರುವುದು ಬಹಳ ವಿಷಾದನೀಯ. ಕೆಲವು ವರ್ಗದ ಜನರು ಯಾವುದಾದರೂ ಆಮಿಷಕ್ಕೆ ಒಳಗಾಗಿ ಹೀಗೆ ಮಾಡುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದು ಸಿಸಿ ಪಾಟೀಲ್‌ ತಿಳಿಸಿದರು.

ಈ ಎಲ್ಲ ವಿಷಯವೂ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ದೇಶ ದ್ರೋಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳುತ್ತೆವೆ ಎಂದರು.

ದೇಶ ಪ್ರೇಮದ ಬಗೆ ಯಾವುದೇ ರಾಜೀ ಇಲ್ಲಾ, ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಹಾದಾಯಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಯೋಜನೆ ಬಗ್ಗೆ ಕೇಂದ್ರದ ನಾಯಕರಿಗೆ ಸಾಕಷ್ಟು ಮನವರಿಕೆ ಮಾಡಿದ್ದೆವೆ. ಗೋವಾ ಹಾಗೂ ಮಹಾರಾಷ್ಟ್ರ ಮನವೊಲಿಸಲು ಕೇಂದ್ರ ಗೃಹ ಸಚಿವರು ಸಫಲರಾಗಿದ್ದಾರೆ ಎಂದರು.

13.46 ಟಿಎಂಸಿ ನೀರು ಸದ್ಬಳಕೆಗೆ ಕ್ರಮಕೈಗೊಳುತ್ತೆವೆ. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಜೆಟ್‌ನಲ್ಲಿ ಯೋಜನೆ ಜಾರಿಗೆ ಸಂಪನ್ಮೂಲ ಮಿಸಲಿಡಲು ಸಿಎಂಗೆ ಮನವಿ ಮಾಡುತ್ತೇವೆ. ಕೇಂದ್ರಕ್ಕೆ ಒತ್ತಡ ಹೇರುವ ಅವಶ್ಯಕತೆ ಇಲ್ಲಾ, ತಾನಾಗಿಯೇ ಕೇಂದ್ರ ನೋಟಿಫಿಕೆಷನ್ ಹೊರಡಿಸುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಭರವಸೆ ನಿಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ