ಆ್ಯಪ್ನಗರ

ಗ್ರಾಮ ಪಂಚಾಯತ ಮಟ್ಟದ ಕೆಡಿಪಿ ಸಭೆ

ಲಕ್ಕುಂಡಿ : ಕೆಡಿಪಿ ಸಭೆಯು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುತ್ತಿರುವುದು ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ದ್ಯಾವನೂರ ಅಭಿಪ್ರಾಯಪಟ್ಟರು.

Vijaya Karnataka 21 Aug 2019, 5:00 am
ಲಕ್ಕುಂಡಿ : ಕೆಡಿಪಿ ಸಭೆಯು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುತ್ತಿರುವುದು ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ದ್ಯಾವನೂರ ಅಭಿಪ್ರಾಯಪಟ್ಟರು.
Vijaya Karnataka Web GDG-20LKD2


ಸಮೀಪದ ಚಿಕ್ಕ ಹಂದಿಗೋಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಕೆಡಿಪಿ ಸಭೆಗಳು ಗ್ರಾಮ ಮಟ್ಟದಲ್ಲಿ ನಡೆಯುವದರಿಂದ ಗ್ರಾಮದ ಹಲವಾರು ಸಮಸ್ಯೆಗಳು ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥವಾಗಲು ಸಾಧ್ಯವಾಗುತ್ತದೆ ಎಂದರು.

ಪಿಡಿಒ ಎಸ್‌.ವೈ.ಕುಂಬಾರ ಮಾತನಾಡಿ, ಸರಕಾರವು ಪ್ರತಿ ತ್ರೈಮಾಸಿಕದಲ್ಲಿ ಗ್ರಾಪಂ ಮಟ್ಟದ ಕೆಡಿಪಿ ಸಭೆ ನಡೆಸಲು ಆದೇಶ ನೀಡಿದ್ದರಿಂದ ವಿಕೇಂದ್ರಕರಣಕ್ಕೆ ಮತ್ತಷ್ಟು ಬಲ ತಂದು ಕೊಟ್ಟಿದೆ ಎಂದರು.

ಕೃಷಿ, ನೀರು ಸರಬರಾಜು, ಹೆಸ್ಕಾಂ, ಆರೋಗ್ಯ, ಪೊಲೀಸ್‌, ಶಾಲೆಯ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು. ಗ್ರಾಪಂ ಉಪಾಧ್ಯಕ್ಷೆ ಮಹಾದೇವಮ್ಮ ಹಿರೇಮಠ, ಸದಸ್ಯರಾದ ಈರಪ್ಪ ಆಲೂರ, ದೇವಪ್ಪ ಸೈದಾಪೂರ, ಕಮಲಾಕ್ಷಿ ಕುಲಕರ್ಣಿ, ಹನುಮವ್ವ ಗಡ್ಡಿ, ದೇವಕ್ಕ ಇಂಗಳಳ್ಳಿ, ಫಕ್ಕೀರಮ್ಮ ಹರಿಜನ, ದೇವಕ್ಕ ಗೊರವರ, ಮಂಜುನಾಥ ಕೊರ್ಲಹಳ್ಳಿ, ಮಹಾರುದ್ರಪ್ಪ ಪತ್ತಾರ, ಫಕೀರಗೌಡ್ರ ಪಾಟೀಲ, ಕಸ್ತೂರೆವ್ವ ಶೇರಿ ಉಪಸ್ಥಿತರಿದ್ದರು. ನಾಡಗೀತೆಯೊಂದಿಗೆ ಸಭೆ ಪ್ರಾರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ