ಆ್ಯಪ್ನಗರ

ಗ್ರಾಪಂ ನೌಕರರ ಪ್ರತಿಭಟನಾ ರಾರ‍ಯಲಿ

ಗದಗ : ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇತ್ತೀಚೆಗೆ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.

Vijaya Karnataka 1 Jun 2019, 5:00 am
ಗದಗ : ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇತ್ತೀಚೆಗೆ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.
Vijaya Karnataka Web GDG-31RUDRAGOUD7
ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.


ನಗರದ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ರಾರ‍ಯಲಿ, ಗಾಂಧಿ ವೃತ್ತ, ರೋಟರಿ ವೃತ್ತ, ಪಂ.ಪುಟ್ಟರಾಜ ಗವಾಯಿಗಳ ವೃತ್ತ, ಹಳೇ ಡಿಸಿ ಆಫೀಸ್‌ ವೃತ್ತ, ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತ, ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಡಳಿತ ಭವನದ ವರೆಗೆ ಮೆರವಣಿಗೆ ನಡೆಸಿ, ಜಿ.ಪಂ. ಕಚೇರಿ ಎದುರು ಕೆಲಕಾಲ ಧರಣಿ ಮಾಡಲಾಯಿತು.

ಗ್ರಾಪಂ ನೌಕರರ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಬಿ. ನಾಡಗೌಡ್ರ ಮಾತನಾಡಿ, ಕಳೆದ ಒಂದು ವರ್ಷದಿಂದ ಬಾಕಿ ಉಳಿದ ವೇತನ ಇಎಫ್‌ಎಂಎಸ್‌ ಗೆ ಸೇರದಿರುವವುದನ್ನು ವೇತನ ತೆರಿಗೆ ಸಂಗ್ರಹದಲ್ಲಿ ನೀಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ಕೊಡಬೇಕು. ಎಲ್ಲಾ ನೌಕರರ ಸೇವಾ ಪುಸ್ತಕ ತೆರೆಯಬೇಕು. ನನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿಗಳನ್ನು ತಕ್ಷ ಣವೇ ರಚಿಸಬೇಕು ಎಂದು ಒತ್ತಾಯಿಸಿದರು.

ಜಿಪಂ ಸಿಇಒ ಮಂಜುನಾಥ ಚವ್ಹಾಣ ಮನವಿ ಸ್ವೀಕರಿಸಿ ಮಾತನಾಡಿ, ನೌಕರರಿಗೆ ಇಎಫ್‌ಎಂಎಸ್‌ ಮೂಲಕ ವೇತನ ನೀಡಲು ಹಾಗೂ ಅನುಮೋದಿಸಲು ಈಗಾಗಲೇ ತಾಪಂ ಇಒ, ಗ್ರಾಪಂ ಪಿಡಿಒ ಅವರಿಗೆ ಸೂಚಿಸಲಾಗಿದೆ. ನೌಕರರ ಸೇವಾ ಪುಸ್ತಕ, ತುಟ್ಟಿಭತ್ಯೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಮತ್ತೊಮ್ಮೆ ಸೂಚಿಸಲಾಗುವುದು. ನೌಕರರ ಬೇಡಿಕೆಗಳ ಕುರಿತಾಗಿ ಸರ್ಕಾರ, ಇಲಾಖೆಗೆ ಪತ್ರ ಬರೆಯುವುದಾಗಿ ಅವರು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಮಹೇಶ ಹಿರೇಮಠ, ಗ್ರಾ.ಪಂ. ನೌಕರರ ಸಂಘ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಜಕ್ಕಮ್ಮನವರ, ಖಜಾಂಚಿ ತುಕಾರಾಮ ಹುಲಗಣ್ಣವರ, ತಾಲೂಕು ಮುಖಂಡರಾದ ರುದ್ರಗೌಡ ಸಂಕನಗೌಡ್ರ, ರುದ್ರಪ್ಪ ಕಂದಗಲ್ಲ, ವೀರನಗೌಡ ಪಾಟೀಲ, ಶರಣಪ್ಪ ಮೇಟಿ, ಶರಣಪ್ಪ ಬಾರಕೇರ, ಕೊಟ್ರೇಶ ಓಲಿ, ಬಸವರಾಜ ಸುಗ್ನಳ್ಳಿ, ಬಸವರಾಜ ಅರ್ಕಸಾಲಿ, ಎಸ್‌.ಎನ್‌. ಹಡಪದ, ಸವಿತಾ ಅಣ್ಣಿಗೇರಿ, ಶಿವು ಮೊರಬ, ಸಿದ್ದಪ್ಪ ಶ್ಯಾಗೋಟಿ, ಉಮೇಶ ಮುದಕವಿ, ಶಿಲ್ಪಾ ಬ್ಯಾಳಿ, ದೇವಪ್ಪ ಕಲ್ಮನಿ, ಗುರಪ್ಪ ಜಂಗಳಿ, ಮಲಿಯಪ್ಪ ಮಾದರ, ಮರಿಯಪ್ಪ ಈರಗಾರ, ಶಾರದಾ, ಚಂದ್ರು ಗಾಜಿ, ಬಸವರಾಜ ಮೇವುಂಡಿ, ಯಲ್ಲಪ್ಪ ಪೂಜಾರ, ಶಿವಾನಂದ ಚಲವಾದಿ, ಪ್ರಕಾಶ ಬೋರಣ್ಣಿ, ಮೈಲಾರಪ್ಪ ಚಲವಾದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ