ಆ್ಯಪ್ನಗರ

ಗ್ರಾಪಂಗೆ ಬೀಗ, ತಹಸೀಲ್ದಾರಗೆ ಮುತ್ತಿಗೆ

ನರಗುಂದ : ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಎಂದು ಸರಕಾರ ನೀಡಿರುವ 3800 ರೂ ಚೆಕ್‌ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ. ಒಂದೇ ಕುಟುಂಬಕ್ಕೆ ಮೂರ್ನಾಲ್ಕು ಚೆಕ್‌ಗಳನ್ನು ವಿತರಿಸಿದ್ದು, ಹಲವು ಸಂತ್ರಸ್ತರಿಗೆ ನೀಡಿಲ್ಲ ಎಂದು ಆರೋಪಿಸಿ ಪರಿಹಾರ ವಂಚಿತರು ವಾಸನ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.

Vijaya Karnataka 20 Aug 2019, 5:00 am
ನರಗುಂದ : ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಎಂದು ಸರಕಾರ ನೀಡಿರುವ 3800 ರೂ ಚೆಕ್‌ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ. ಒಂದೇ ಕುಟುಂಬಕ್ಕೆ ಮೂರ್ನಾಲ್ಕು ಚೆಕ್‌ಗಳನ್ನು ವಿತರಿಸಿದ್ದು, ಹಲವು ಸಂತ್ರಸ್ತರಿಗೆ ನೀಡಿಲ್ಲ ಎಂದು ಆರೋಪಿಸಿ ಪರಿಹಾರ ವಂಚಿತರು ವಾಸನ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.
Vijaya Karnataka Web GDG-19NRD3
ನರಗುಂದ ತಾಲೂಕು ವಾಸನ ಗ್ರಾಪಂಗೆ ಬೀಗ ಹಾಕಿದ ಪರಿಹಾರ ವಂಚಿತ ಸಂತ್ರಸ್ತರು


ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹ ಪೀಡಿತ 10 ಗ್ರಾಮಗಳಿಗೆ ಮೊದಲ ಹಂತವಾಗಿ ಸರಕಾರ 3800 ರೂ. ಚೆಕ್‌ ವಿತರಣೆಗೆ ಶಾಸಕರು ಚಾಲನೆ ನೀಡಿದ್ದರು. ತಾಲೂಕಾಡಳಿತ ಪ್ರತಿ ಕುಟುಂಬಕ್ಕೆ ಚೆಕ್‌ ವಿತರಣೆ ಕೈಗೊಂಡಿದೆ. ಆದರೆ ವಾಸನ ಗ್ರಾಮದಲ್ಲಿ ಪ್ರಭಾವ ಬೆಳಸಿ ಒಂದಕ್ಕಿಂತ ಹೆಚ್ಚು ಪರಿಹಾರ ಚೆಕ್‌ಗಳನ್ನು ಪಡೆದಿದ್ದಾರೆ. ಆದರೆ ನಿಜವಾದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದರೆ ಕಂದಾಯ ಇಲಾಖೆಯವರನ್ನು ಕೇಳಿ ಎನ್ನುತ್ತಾರೆ, ಕಂದಾಯ ಇಲಾಖೆಯನ್ನು ಕೇಳಿದರೆ ಗ್ರಾಪಂನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರಿಂದ ಆಕ್ರೋಶಗೊಂಡ ಪರಿಹಾರ ವಂಚಿತ ಸಂತ್ರಸ್ತರು ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಮೈಸೂರು ನಾಗರಿಕ ವೇದಿಕೆಯಿಂದ ಪರಿಹಾರ ವಿತರಣೆಗೆ ಗ್ರಾಮಕ್ಕೆ ಆಗಮಿಸಿದ್ದ ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ ಅವರನ್ನು ಮುತ್ತಿಗೆ ಹಾಕಿ ಸಂತ್ರಸ್ತರು ತರಾಟೆ ತೆಗೆದುಕೊಂಡರು. ಮನೆಯಲ್ಲಿ ಮದುವೆ ಆಗಿ ಬೇರೆಯಾದವರಿಗೆ ಚೆಕ್‌ ಕೊಟ್ಟಿರಬೇಕು ಸರಿಪಡಿಸಿ ನಿಮಗೂ ಚೆಕ್‌ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರರು ಭರವಸೆ ನೀಡಿದರು. ಈ ನಡುವೆ, ಆರೋಪಗಳು ಮುಂದುವರಿದಾಗ ಗ್ರಾಮದ ಮುಖಂಡ ಹನಮಂತ ಮಳಲಿ, ಬಾಬು ಹಿರೇಹೊಳಿ ಹಾಗೂ ಗ್ರಾಮದ ಮುಖಂಡರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ