ಆ್ಯಪ್ನಗರ

ವರುಣನ ಕೃಪೆಗಾಗಿ ಗುರ್ಜಿ ಪೂಜೆ

ಬೆಳ್ಳಟ್ಟಿ: ನಾಲ್ಕು ವರ್ಷದಿಂದ ರಾಜ್ಯದಲ್ಲಿ ಬರಗಾಲ ಆವರಿಸಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಮಳೆಬಂದು ಹೊಲದಲ್ಲಿ ಬೀಜ ಬಿತ್ತನೆ ಮಾಡುವ ಸಮಯದಲ್ಲಿ ರೈತರು ಮಳೆಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಸಕಾಲಕ್ಕೆ ಮಳೆ ಬೀಳದಿರುವುದರಿಂದ ಕಂಗಾಲಾದ ರೈತರು ಗುರ್ಜಿ ಪೂಜೆಗೆ ಮೊರೆ ಹೋಗುತ್ತಿದ್ದಾರೆ.

Vijaya Karnataka 28 Jun 2019, 5:00 am
ಬೆಳ್ಳಟ್ಟಿ: ನಾಲ್ಕು ವರ್ಷದಿಂದ ರಾಜ್ಯದಲ್ಲಿ ಬರಗಾಲ ಆವರಿಸಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಮಳೆಬಂದು ಹೊಲದಲ್ಲಿ ಬೀಜ ಬಿತ್ತನೆ ಮಾಡುವ ಸಮಯದಲ್ಲಿ ರೈತರು ಮಳೆಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಸಕಾಲಕ್ಕೆ ಮಳೆ ಬೀಳದಿರುವುದರಿಂದ ಕಂಗಾಲಾದ ರೈತರು ಗುರ್ಜಿ ಪೂಜೆಗೆ ಮೊರೆ ಹೋಗುತ್ತಿದ್ದಾರೆ.
Vijaya Karnataka Web GDG-27 BLT 01


ಸಮೀಪದ ರಣತೂರ, ಸೂವರ್ಣಗಿರಿ ತಾಂಡಾ ಗ್ರಾಮದಲ್ಲಿ ರೈತರು ಮಳೆರಾಯನ ಕೃಪೆಗಾಗಿ ಗುರ್ಜಿ ಗುರ್ಜಿ ಎಲ್ಲಿಂದ ಬಂದೆ ಹಳ್ಳಕೊಳ್ಳ ತಿರುಗ್ಯಾಡಿ ಬಂದೆ. ಕಾರ ಮಳೆಯು ಕಪ್ಪತ ಮಳೆಯೋ, ಸುರಿ ಸುರಿಯೋ ಮಳೆರಾಯ ಎಂದು ಗುರ್ಜಿ ಆಟದೊಂದಿಗೆ ಮಳೆರಾಯನನ್ನು ಸ್ಮರಿಸಲಾಯಿತು.

ಶತಮಾನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ಆಚರಣೆಯಲ್ಲಿರುವ ಗುರ್ಜಿ ಪೂಜೆ ವಿಶೇಷವಾಗಿದೆ. ಗ್ರಾಮದಲ್ಲಿ ರೈತ ಮಹೇಶ ಅವರ ತಲೆ ಮೇಲೆ ಹೆಂಚು ಇಟ್ಟು ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಹೊರಿಸಲಾಯಿತು. ಗುರ್ಜಿ ಹೊತ್ತವನ ಹಿಂದೆ ರೈತರೆಲ್ಲರು ಗುರ್ಜಿ ಹಾಡು ಹೇಳುತ್ತ ಮೂರು ದಿನಗಳವರೆಗೆ ಗ್ರಾಮದ ಎಲ್ಲಾ ಕಡೆ ಸಂಚರಿಸುತ್ತಾರೆ. ಗುರ್ಜಿ ಹೊತ್ತ ರೈತನ ತೆಲೆಯ ಮೇಲೆ ನೀರು ಸುರಿದು ಪ್ರತಿಯೊಬ್ಬರು ಗುರ್ಜಿ ಪೂಜೆ ಮಾಡುವುದರೊಂದಿಗೆ ಗ್ರಾಮದ ಪ್ರತಿ ಮನೆಯಿಂದಲು ಜೋಳ, ರೊಟ್ಟಿ, ಪಲ್ಲೆ, ದವಸಧಾನ್ಯ ಹಾಗೂ ಹಣವನ್ನು ಸಂಗ್ರಹಿಸಿ ಕೊನೆಯ ದಿನ ಮಾರುತಿ ದೇವಸ್ಥಾನ ಬಳಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಮೇಘರಾಜನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ