ಆ್ಯಪ್ನಗರ

ಹಕ್ಕು ಜತೆ ಕರ್ತವ್ಯವನ್ನೂ ನಿಭಾಯಿಸಿ

ಲಕ್ಕುಂಡಿ: ನಮ್ಮ ಹಕ್ಕು ಪಡೆಯಲು ಹೇಗೆ ಹೋರಾಡುತ್ತೆಯೋ ಅದರಂತೆ ನಮ್ಮ ಕರ್ತವ್ಯಗಳನ್ನು ಪ್ರಮಾಣಿಕವಾಗಿ ಪಾಲಿಸಿದಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರೊ.ಜಿ.ಎಂ.ಹಕಾರಿ ಹೇಳಿದರು.

Vijaya Karnataka 6 Nov 2019, 5:00 am
ಲಕ್ಕುಂಡಿ: ನಮ್ಮ ಹಕ್ಕು ಪಡೆಯಲು ಹೇಗೆ ಹೋರಾಡುತ್ತೆಯೋ ಅದರಂತೆ ನಮ್ಮ ಕರ್ತವ್ಯಗಳನ್ನು ಪ್ರಮಾಣಿಕವಾಗಿ ಪಾಲಿಸಿದಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರೊ.ಜಿ.ಎಂ.ಹಕಾರಿ ಹೇಳಿದರು.
Vijaya Karnataka Web handle the duty with a claim
ಹಕ್ಕು ಜತೆ ಕರ್ತವ್ಯವನ್ನೂ ನಿಭಾಯಿಸಿ


ಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿಗದಗ ಕನಕದಾಸ ಶಿಕ್ಷಣ ಸಮಿತಿಯ ಕೆವಿಎಸ್‌ಆರ್‌ ಕಾಲೇಜ್‌ ಹಮ್ಮಿಕೊಂಡ ಎನ್‌ಎಸ್‌ಎಸ್‌ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿಮಾತನಾಡಿದರು. 1956ರಲ್ಲಿಸಂವಿಧಾನ ರಚಿತವಾದ ಮೇಲೆ ದೇಶದ ನಾಗರಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ರೂಪಿತವಾಯಿತು. ಅದರಂತೆ ಇಲ್ಲಿಯವರೆಗೂ 6 ಮೂಲ ಹಕ್ಕುಗಳು ಮತ್ತು 11 ಕರ್ತವ್ಯ ಜಾರಿಗೆ ತರಲಾಗಿದೆ. ನೆಲ, ಜಲ, ಭಾಷೆಗಾಗಿ ಹಕ್ಕನ್ನು ಮಂಡಿಸುತ್ತವೆಯೊ ಇವುಗಳ ಸಂರಕ್ಷಣೆ ಬಗ್ಗೆಯೂ ಸಹ ಕರ್ತವ್ಯ ಎಂದರು.

ದೇಶದಲ್ಲಿಶೇ. 60 ರಷ್ಟು ಜನ ಕರ್ತವ್ಯಗಳ ಬಗ್ಗೆ ಅರಿವು ಇದೆ ಆದರೆ ಇನ್ನು ಶೇ. 40 ರಷ್ಟು ಜನಕ್ಕೆ ಕರ್ತವ್ಯವದ ಬಗ್ಗೆ ಅಜ್ಞಾನದ ಕಾರ್ಮೊಡ ಇದ್ದು ಇವರು ಕೇವಲ ತಮ್ಮ ಹಕ್ಕಿನ ಬಗ್ಗೆ ಮಾತ್ರ ಚಿಂತನೆ ಮಾಡುತ್ತಿರುವುದು ವಿಷಾದ ಸಂಗತಿಯಾಗಿದೆ ಎಂದರು.

ಪ್ರೊ.ಪ್ರದೀಪ ನಾಯಕ ಮಾತನಾಡಿ, ಇಂದಿನ ದಂದ್ವಾತೀತ ಸಾಮಾಜಿಕ ವ್ಯವಸ್ಥೆಯಲ್ಲಿಕೌಟುಂಬಿಕ ಕಲಹಗಳು ಅಧಿಕವಾಗುತ್ತಿದ್ದು ಹೊಂದಾಣಿಕೆ ಎಂಬುದು ಕ್ಷೀಣವಾಗುತ್ತಿದೆ. ಈ ದಿಸೆಯಲ್ಲಿವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿ ವಿಜ್ಞಾನಿಗಳಾದ ಅಬ್ದುಲ್‌ ಕಲಾಂ, ಮೇಡಮ್‌ ಕ್ಯೂರಿ, ರಾಬರ್ಟ್‌ ಅಲ್ವಾ ಎಡಿಸನ್‌ ಅವರಂತಹ ಆತ್ಮ ಸ್ಥೈರ್ಯಗಳನ್ನು ಅಳವಡಿಸಿಕೊಂಡು ಸಾಧನೆಯ ಶಿಖರವನ್ನು ಏರಬೇಕು. ಇದಕ್ಕೆ ಎನ್‌.ಎಸ್‌.ಎಸ್‌.ಶಿಬಿರದ ತರಬೇತಿಯು ಬುನಾದಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ರಮಾಕಾಂತ ದೊಡ್ಡಮನಿ, ಗ್ರಾಪಂ ಮಾಜಿ ಸದಸ್ಯ ಪ್ರಕಾಶ ಅರಹುಣಶಿ, ಬಿ.ಐ. ಮುಳ್ಳಾಳ ಮಾತನಾಡಿದರು.

ಪ್ರೊ. ಬಿ.ರಾಮಚಂದ್ರ ಜೋಗಿನ, ಪ್ರೊ. ಪ್ರಕಾಶ ಪಾಟೀಲ, ಎಸ್‌.ಐ. ಚವಡಿ, ಗ್ರಾಪಂ ಸದಸ್ಯ ಮಹಾಂತೇಶ ಮೆಣಸಿನಕಾಯಿ, ಅಜ್ಜಪ್ಪಗೌಡ ಪಾಟೀಲ, ಶಿವು ಡಿಗ್ಗಾವಿ,ಬಿ.ಐ. ಮುಳ್ಳಾಳ,ಜ್ಯೋತಿ ಬಸನಗೌಡ, ದುರ್ಗಪ್ಪ ಪೂಜಾರ ಇದ್ದರು. ಮಹಾದೇವಯ್ಯ ಎನ್‌.ಎಂ. ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ