ಆ್ಯಪ್ನಗರ

ಆರೋಗ್ಯ ಜಾಗೃತಿ ಅವಶ್ಯ: ಪ್ರೊ.ತಿಮ್ಮೇಗೌಡ

ಗದಗ: ನಗರದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿಶ್ವ ಆರೋಗ್ಯದಿನ ಮತ್ತು ರಕ್ತದಾನ ಶಿಬಿರ ನಡೆಯಿತು.

Vijaya Karnataka 12 Apr 2019, 5:00 am
ಗದಗ: ನಗರದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿಶ್ವ ಆರೋಗ್ಯದಿನ ಮತ್ತು ರಕ್ತದಾನ ಶಿಬಿರ ನಡೆಯಿತು.
Vijaya Karnataka Web GDG-11RUDRAGOUD17


ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಜನಾರೋಗ್ಯದ ಕುರಿತು ಜಾಗೃತಿ ವಹಿಸುವ ಅಗತ್ಯತೆ ಹಾಗೂ ಆರೋಗ್ಯ ಕರ್ನಾಟಕ, ಆಯುಷ್ಯ್ಮಾನ್‌ ಭಾರತ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲರಿಗೂ ಎಲ್ಲೆಡೆಯೂ ಆರೋಗ್ಯ ಪರಿಕಲ್ಪನೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯದ ಸೇವೆ ದೊರಕುವಿಕೆಲ್ಲಾಗುತ್ತಿರುವ ಹಿನ್ನಡೆ, ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮಾಹಿತಿ ನೀಡಿದರು.

ವೈಯಕ್ತಿಕ ಶಿಸ್ತಿನಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಶತಾಯುಷಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಉದಾಹರಣೆ ಸಹಿತ ವಿವರಿಸಿದರು.

ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ.ಸುರೇಶ್‌.ಕೆ.ರಾವ್‌ ಮಾತನಾಡಿ, 50 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿಶ್ವ ಆರೋಗ್ಯ ಸಂಸ್ಥೆಯ ಸರ್ವ್‌ಲೆನ್ಸ್‌ ಮೇಡಿಕಲ್‌ ಅಧಿಕಾರಿ ಡಾ.ಮುಕುಂದ ಗಲಗಲಿ ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯದತ್ತ ಹೆಜ್ಜೆ ಇಡಬೇಕು ಎಂದರು.

ಜಿಲ್ಲಾ ಆಸ್ಪತ್ರೆಯ ರಕ್ತ ಭಂಡರಾದ ಅಧಿಕಾರಿ ಡಾ.ಅಶೋಕ. ಕೆ. ಪಿ ಅವರು ರಕ್ತದಾನದ ಮಹತ್ವ ಮತ್ತು ಅರ್ಹತೆಗಳ ಜೊತೆಗೆ ರೋಗಿಗಳಿಗೆ ಉಂಟಾಗುವ ಅನುಕೂಲಗಳ ಕುರಿತು ವಿವರಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುರೇಶ ನಾಡಗೌಡರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಹತ್ವದ ಜೊತೆಗೆ ದುಶ್ಚಟಗಳಿಂದಾಗುವ ಆರೋಗ್ಯದ ತೊಂದರೆಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದರು.

ಕೆ.ವಿ.ಪಾಟೀಲ, ಡಾ.ಶ್ರೀಪಾದ ಕುಲಕರ್ಣಿ, ಡಾ.ಕೀರ್ತಿ, ಡಾ.ಪ್ರೀತಿ, ಪಿಯಾಲಿ, ಡಾ.ಗೂಳಪ್ಪ, ಡಾ.ನಾಗವೇಣಿ ಎಸ್‌.ಜೆ., ಡಾ. ವಿರುಪಾಕ್ಷ ರೆಡ್ಡಿ ಮದಿನೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ