ಆ್ಯಪ್ನಗರ

ರಕ್ತದಾನದಿಂದ ಆರೋಗ್ಯ ಸುಧಾರಣೆ

ಗದಗ : ರೋಣ ತಾಲೂಕಿನ ಬೆಳವಣಿಕೆಯ ಎಸ್‌.ವಿ.ಸಂಯುಕ್ತ ಪದವಿಪೂರ್ವ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಹದಲಿ ಗ್ರಾಪಂ ಸಹಯೋಗದಲ್ಲಿ ಹದಲಿಯಲ್ಲಿ ಏರ್ಪಡಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಚಿತ ರಕ್ತ ತಪಾಸಣೆ ಮಾಡಲಾಯಿತು. ನಂತರ ರಕ್ತಗುಂಪಿನ ವಿವರದ ಚೀಟಿ ವಿತರಿಸಲಾಯಿತು.

Vijaya Karnataka 25 Dec 2018, 5:00 am
ಗದಗ : ರೋಣ ತಾಲೂಕಿನ ಬೆಳವಣಿಕೆಯ ಎಸ್‌.ವಿ.ಸಂಯುಕ್ತ ಪದವಿಪೂರ್ವ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಹದಲಿ ಗ್ರಾಪಂ ಸಹಯೋಗದಲ್ಲಿ ಹದಲಿಯಲ್ಲಿ ಏರ್ಪಡಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಚಿತ ರಕ್ತ ತಪಾಸಣೆ ಮಾಡಲಾಯಿತು. ನಂತರ ರಕ್ತಗುಂಪಿನ ವಿವರದ ಚೀಟಿ ವಿತರಿಸಲಾಯಿತು.
Vijaya Karnataka Web health improvement with donation
ರಕ್ತದಾನದಿಂದ ಆರೋಗ್ಯ ಸುಧಾರಣೆ


ರಕ್ತತಪಾಸಣಾ ತಜ್ಞ ಡಾ.ದತ್ತಾತ್ರೇಯ ವೈಕುಂಠೆ ಶಿಬಿರಾರ್ಥಿಗಳ ರಕ್ತತಪಾಸಣೆ ಮಾಡಿ ರಕ್ತದಾನದ ಮಹತ್ವವನ್ನು ಹೇಳಿ ಎಲ್ಲ ಯುವಕರು ಕನಿಷ್ಠ ವರ್ಷಕ್ಕೆ ಒಂದೆರಡು ಬಾರಿಯಾದರೂ ರಕ್ತದಾನ ಮಾಡಬೇಕು ಇದರಿಂದ ಆರೋಗ್ಯ ಸುಧಾರಣೆಯಾಗುವುದು ಎಂದರು.

ರಕ್ತದ ಗುಂಪಿನಿಂದ ಆಯಾ ವ್ಯಕ್ತಿಯ ಗುಣಧರ್ಮ, ವ್ಯಕ್ತಿತ್ವ ಅರಿಯಬಹುದು. ಒಂದೊಂದು ಗುಂಪಿನಿಂದ ವ್ಯಕ್ತಿತ್ವ ವ್ಯತ್ಯಾಸವಾಗಿರುತ್ತದೆ ಎಂದರು.

ಹದಲಿ ಗ್ರಾಪಂÜ ಮಾಜಿ ಉಪಾಧ್ಯಕ್ಷ ವೈ.ಬಿ.ಬನಹಟ್ಟಿ ಶಿಬಿರ ಉದ್ಘಾಟಿಸಿ, ಅನಾರೋಗ್ಯ, ಅಪಘಾತದಿಂದ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಅವರ ಆರೋಗ್ಯ ಸುಧಾರಣೆಗೆ ಯುವಕರು ಮುಂದಾಗಬೇಕೆಂದರು.

ಸಂಜೆ ನಡೆದ ಶಿಬಿರದಲ್ಲಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಅತಿಯಾದ ಮೊಬೈಲ್‌ ಬಳಕೆ ಹಾಗೂ ಗ್ರಾಮೀಣ ಸೊಗಡಿನ ಜನಪದ ಕಲೆಗಳು ವಿಷಯವಾಗಿ ಎಂ.ಜಿ.ಹಿರೇಮಠ ಉಪನ್ಯಾಸ ನೀಡಿದರು.

ಗ್ರಾಪಂ ಸದಸ್ಯ ಬಸವರಾಜ ಬದನೆಕಾಯಿ ಅಧ್ಯಕ್ಷ ತೆ ವಹಿಸಿದ್ದರು.

ಉಮೇಶ ಕರಿ, ಮಲ್ಲಪ್ಪ ಚಲವಾದಿ, ವೀರಣ್ಣ ಹಲಗತ್ತಿ, ಕೆ.ಎಚ್‌.ಶಿವನಗೌಡ್ರ, ಬಿ.ಜಿ.ಸುಂಕದ, ಅಜ್ಜಪ್ಪಗೌಡ್ರ ಅಲ್ಲಪ್ಪಗೌಡ, ಎಂ.ಎಸ್‌.ಬಿಜಲಿ, ಆರ್‌.ಬಿ.ಮುಂದಿನಮನಿ ಇದ್ದರು. ಎಸ್‌.ಆರ್‌.ಬಳಗಾನೂರಮಠ ನಿರೂಪಿಸಿದರು. ಕೆ.ವಿ.ಪೂಜಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ