ಮುಂಡರಗಿ : ಮನರಂಜನೆಯ ಮೂಲಕ ಸ್ವಚ್ಛತೆಯ ಪಾಠ ಮತ್ತು ಜಾಗೃತಿ ಮೂಡಿಸುತ್ತಿರುವುದು ಮೆಚ್ಚುವಂತಹದ್ದು, ಇದರಿಂದ ಜನರು ಎಚ್ಚೆತ್ತುಕೊಂಡು ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಇಲ್ಲಿಯ ಪುರಸಭೆಯ ಆವರಣದಲ್ಲಿ ಜಿಲ್ಲಾ ಆಡಳಿತ ಗದಗ ಹಾಗೂ ಪುರಸಭೆ ಮುಂಡರಗಿ ಸಹಯೋಗದಲ್ಲಿ ಮಂಗಳೂರಿನ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ, ಸಂಗೀತಗಾರರಾದ ಕೃಷ್ಣ ಉಡುಪ, ಹೇಮಂತ ಹಾಗೂ ಬಸವ ಜಾಗೃತಿ ತಂಡ ಕೊತಬಾಳ ಇವರು ಹಮ್ಮಿಕೊಂಡಿದ್ದ ಸ್ವಚ್ಛತೆಗಾಗಿ ಜಾದು ಮತ್ತು ಸ್ವಚ್ಛತೆಗಾಗಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ಪುರಸಭೆಯ ವಾಹನಕ್ಕೆ ಹಾಕಿದರೆ ಸ್ವಚ್ಛ ಮುಂಡರಗಿ ಆಗಲು ಸಾಧ್ಯ ಹೇಳಿದರು.
ಅಧ್ಯಕ್ಷ ತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಮಾತನಾಡಿ, ಸ್ವಚ್ಛತೆ ಕೇವಲ ಪುರಸಭೆಯಿಂದ ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಸ್ವಚ್ಛ ಮುಂಡರಗಿ ಆಗುತ್ತದೆ. ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡಲು ಮುಂದಾಗಿ ಎಂದರು. ಯೋಜನಾ ನಿರ್ದೇಶಕ ಎಸ್.ಎನ್.ರುದೇಶ ಮಾತನಾಡಿ, ನಾಗರಿಕರು ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ, ಆದರೆ ಶೌಚಾಲಯ ನಿರ್ಮಾಣ ಸ್ವಚ್ಛತೆಗಾಗಿ ಇನ್ನು ಮುಕ್ತವಾಗಿ ಚರ್ಚಿಸುತ್ತಿಲ್ಲ. ಆ ದಿಸೆಯಲ್ಲಿ ಪ್ರಯತ್ನ ನಡೆದಿಲ್ಲ. ಹೀಗಾಗಿ ಇಂತಹ ಜಾಗೃತಿ ಕಾರ್ಯಕ್ರಮ ಪರಿಣಾಮ ಬೀರಲಿ ಎಂದರು.
ಉಪಾಧ್ಯಕ್ಷ ಬಸವರಾಜ ನರೇಗಲ್, ಸ್ಥಾಯಿ ಕಮೀಟಿ ಚೇರಮನ್ ಪ್ರಭು ಅಬ್ಬಿಗೇರಿ ಮುಂತಾದವರಿದ್ದರು. ಮುಖ್ಯಾಧಿಕಾರಿ ಸಿದ್ದಲಿಂಗಪ್ರಭು ಇಂಬ್ರಡ್ಡಿ ಸ್ವಾಗತಿಸಿದರು. ಮಂಜುನಾಥ ಇಟಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಮೊದಲು ಕೊತಬಾಳದ ಬಸವ ಜಾಗೃತಿ ತಂಡದ ವಿರೇಶ ಯಾಳಗಿ ಮತ್ತು ತಂಡದವರಿಂದ ಸ್ವಚ್ಛತೆ ಕುರಿತು ದೀಪ ನೃತ್ಯ ಮತ್ತು ಹಾಡು ಮೊಳಗಿದವು. ನಂತರ ಪ್ರಾರಂಭವಾದ ಮಂಗಳೂರಿನ ಕುದ್ರೋಳ್ಳಿ ಗಣೇಶ ಅವರ ಜಾದು ಕಾರ್ಯಕ್ರಮ ಸಾರ್ವಜನಿಕರನ್ನು ಮಂತ್ರಮುಗ್ದರನ್ನಾಗಿ ಮಾಡಿತು. ಕಸವೆಂಬ ಮಾರಿಯನ್ನು ಪೆಟ್ಟಿಗೆಯಲ್ಲಿಯೇ ಮಾಯಮಾಡುವ ಪ್ರದರ್ಶನ ಜನರ ಮೆಚ್ಚುಗೆ ಪಡೆಯಿತು. ಇದರ ಜತೆಗೆ ಅಂತರದಲ್ಲಿ ನಿಲ್ಲುವ ಮನುಷ್ಯ ಮತ್ತು ಹಲವು ಜಾತಿ ಮತ್ತು ಭಾಷೆ ಒಗ್ಗೂಡಿಸುವ ಜಾದು ಪ್ರಸಂಗ ಜನರನ್ನು ಆಕರ್ಷಿಸಿತು. ಸ್ವಚ್ಛತೆ ಹಿನ್ನೆಲೆಯಾಗಿಟ್ಟುಕೊಂಡು ಪ್ರದರ್ಶಿದ ಅನೇಕ ಜಾದೂಗಳು ಜನರಲ್ಲಿ ಜಾಗೃತಿ ಉಂಟುಮಾಡಿದವು.
ಕೃಷ್ಣ ಉಡುಪ ಮತ್ತು ಹೇಮಂತ ಅವರ ಹಾಡಿನ ಮೋಡಿಗೆ ಜನರು ಚಪ್ಪಾಳೆ ತಟ್ಟಿ ಆನಂದಿಸಿದರು. ಹಾಡಿನ ಮುಖಾಂತರ ಸ್ವಚ್ಛತೆಯ ಅರಿವು ಮೂಡಿಸಿದ್ದು ಮಾದರಿಯಾಗಿತ್ತು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಚಿತ್ರ ನಟಿ ಪಂಕಜಾ ರವಿಶಂಕರ, ಅಧಿಕಾರಿಗಳು ಮುಂತಾದವರಿದ್ದರು.
ಇಲ್ಲಿಯ ಪುರಸಭೆಯ ಆವರಣದಲ್ಲಿ ಜಿಲ್ಲಾ ಆಡಳಿತ ಗದಗ ಹಾಗೂ ಪುರಸಭೆ ಮುಂಡರಗಿ ಸಹಯೋಗದಲ್ಲಿ ಮಂಗಳೂರಿನ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ, ಸಂಗೀತಗಾರರಾದ ಕೃಷ್ಣ ಉಡುಪ, ಹೇಮಂತ ಹಾಗೂ ಬಸವ ಜಾಗೃತಿ ತಂಡ ಕೊತಬಾಳ ಇವರು ಹಮ್ಮಿಕೊಂಡಿದ್ದ ಸ್ವಚ್ಛತೆಗಾಗಿ ಜಾದು ಮತ್ತು ಸ್ವಚ್ಛತೆಗಾಗಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ಪುರಸಭೆಯ ವಾಹನಕ್ಕೆ ಹಾಕಿದರೆ ಸ್ವಚ್ಛ ಮುಂಡರಗಿ ಆಗಲು ಸಾಧ್ಯ ಹೇಳಿದರು.
ಅಧ್ಯಕ್ಷ ತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಮಾತನಾಡಿ, ಸ್ವಚ್ಛತೆ ಕೇವಲ ಪುರಸಭೆಯಿಂದ ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಸ್ವಚ್ಛ ಮುಂಡರಗಿ ಆಗುತ್ತದೆ. ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡಲು ಮುಂದಾಗಿ ಎಂದರು. ಯೋಜನಾ ನಿರ್ದೇಶಕ ಎಸ್.ಎನ್.ರುದೇಶ ಮಾತನಾಡಿ, ನಾಗರಿಕರು ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ, ಆದರೆ ಶೌಚಾಲಯ ನಿರ್ಮಾಣ ಸ್ವಚ್ಛತೆಗಾಗಿ ಇನ್ನು ಮುಕ್ತವಾಗಿ ಚರ್ಚಿಸುತ್ತಿಲ್ಲ. ಆ ದಿಸೆಯಲ್ಲಿ ಪ್ರಯತ್ನ ನಡೆದಿಲ್ಲ. ಹೀಗಾಗಿ ಇಂತಹ ಜಾಗೃತಿ ಕಾರ್ಯಕ್ರಮ ಪರಿಣಾಮ ಬೀರಲಿ ಎಂದರು.
ಉಪಾಧ್ಯಕ್ಷ ಬಸವರಾಜ ನರೇಗಲ್, ಸ್ಥಾಯಿ ಕಮೀಟಿ ಚೇರಮನ್ ಪ್ರಭು ಅಬ್ಬಿಗೇರಿ ಮುಂತಾದವರಿದ್ದರು. ಮುಖ್ಯಾಧಿಕಾರಿ ಸಿದ್ದಲಿಂಗಪ್ರಭು ಇಂಬ್ರಡ್ಡಿ ಸ್ವಾಗತಿಸಿದರು. ಮಂಜುನಾಥ ಇಟಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಮೊದಲು ಕೊತಬಾಳದ ಬಸವ ಜಾಗೃತಿ ತಂಡದ ವಿರೇಶ ಯಾಳಗಿ ಮತ್ತು ತಂಡದವರಿಂದ ಸ್ವಚ್ಛತೆ ಕುರಿತು ದೀಪ ನೃತ್ಯ ಮತ್ತು ಹಾಡು ಮೊಳಗಿದವು. ನಂತರ ಪ್ರಾರಂಭವಾದ ಮಂಗಳೂರಿನ ಕುದ್ರೋಳ್ಳಿ ಗಣೇಶ ಅವರ ಜಾದು ಕಾರ್ಯಕ್ರಮ ಸಾರ್ವಜನಿಕರನ್ನು ಮಂತ್ರಮುಗ್ದರನ್ನಾಗಿ ಮಾಡಿತು. ಕಸವೆಂಬ ಮಾರಿಯನ್ನು ಪೆಟ್ಟಿಗೆಯಲ್ಲಿಯೇ ಮಾಯಮಾಡುವ ಪ್ರದರ್ಶನ ಜನರ ಮೆಚ್ಚುಗೆ ಪಡೆಯಿತು. ಇದರ ಜತೆಗೆ ಅಂತರದಲ್ಲಿ ನಿಲ್ಲುವ ಮನುಷ್ಯ ಮತ್ತು ಹಲವು ಜಾತಿ ಮತ್ತು ಭಾಷೆ ಒಗ್ಗೂಡಿಸುವ ಜಾದು ಪ್ರಸಂಗ ಜನರನ್ನು ಆಕರ್ಷಿಸಿತು. ಸ್ವಚ್ಛತೆ ಹಿನ್ನೆಲೆಯಾಗಿಟ್ಟುಕೊಂಡು ಪ್ರದರ್ಶಿದ ಅನೇಕ ಜಾದೂಗಳು ಜನರಲ್ಲಿ ಜಾಗೃತಿ ಉಂಟುಮಾಡಿದವು.
ಕೃಷ್ಣ ಉಡುಪ ಮತ್ತು ಹೇಮಂತ ಅವರ ಹಾಡಿನ ಮೋಡಿಗೆ ಜನರು ಚಪ್ಪಾಳೆ ತಟ್ಟಿ ಆನಂದಿಸಿದರು. ಹಾಡಿನ ಮುಖಾಂತರ ಸ್ವಚ್ಛತೆಯ ಅರಿವು ಮೂಡಿಸಿದ್ದು ಮಾದರಿಯಾಗಿತ್ತು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಚಿತ್ರ ನಟಿ ಪಂಕಜಾ ರವಿಶಂಕರ, ಅಧಿಕಾರಿಗಳು ಮುಂತಾದವರಿದ್ದರು.