ಆ್ಯಪ್ನಗರ

ಹಳಿಬಂಡಿ ಹೋರಿಗೆ ಹೃದಯಾಘಾತ, ಸಾವು

ರೋಣ (ಗದಗ): ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿಆರಾಧ್ಯದೇವತೆ ಎನಿಸಿಕೊಂಡಿರುವ ಬನಶಂಕರಿ ದೇವಿ ರಥೋತ್ಸವಕ್ಕೆ ಹಗ್ಗ ಹೊತ್ತು ಹಳಿಬಂಡಿ ಎಳೆಯುವ ಹೋರಿ ಬನಶಂಕರಿಯಿಂದ ಮರಳಿ ಮಾಡಲಗೇರಿಗೆ ತಲುಪುತ್ತಿದ್ದಂತೆ ಹೂರ ಅಗಸಿ ಬಾಗಿಲಿನಲ್ಲಿಹೃದಯಾಘಾತದಿಂದ ಮೃತಪಟ್ಟಿದೆ.

Vijaya Karnataka 13 Jan 2020, 4:51 pm
ರೋಣ (ಗದಗ): ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿಆರಾಧ್ಯದೇವತೆ ಎನಿಸಿಕೊಂಡಿರುವ ಬನಶಂಕರಿ ದೇವಿ ರಥೋತ್ಸವಕ್ಕೆ ಹಗ್ಗ ಹೊತ್ತು ಹಳಿಬಂಡಿ ಎಳೆಯುವ ಹೋರಿ ಬನಶಂಕರಿಯಿಂದ ಮರಳಿ ಮಾಡಲಗೇರಿಗೆ ತಲುಪುತ್ತಿದ್ದಂತೆ ಹೂರ ಅಗಸಿ ಬಾಗಿಲಿನಲ್ಲಿಹೃದಯಾಘಾತದಿಂದ ಮೃತಪಟ್ಟಿದೆ.
Vijaya Karnataka Web heart attack death cow
ಹಳಿಬಂಡಿ ಹೋರಿಗೆ ಹೃದಯಾಘಾತ, ಸಾವು


ಹಳಿಬಂಡಿ ಎಳೆಯುವ ಸಲುವಾಗಿ ಗ್ರಾಮದ ಅಣ್ಣಪ್ಪ ಮೇಟಿ ಅವರು ನೆರೆಯ ಹುನಗುಂಡಿ ಗ್ರಾಮದಿಂದ ಸುಮಾರು 1 ಲಕ್ಷ ರೂ. ನೀಡಿ ಈ ಹೋರಿಯನ್ನು ಖರೀದಿಸಿದ್ದರು.

ಸೂತಕದ ಛಾಯೆ:
ಹಳಿಬಂಡಿ ಮಾಡಲಗೇರಿ ಗ್ರಾಮ ತಲುಪುತ್ತಿದ್ದಂತೆ ಇಡೀ ರಾತ್ರಿ ಹಳಿಬಂಡಿ ಮೆರವಣಿಗೆಗೆ ನಾಡಿನ ಹೆಸರಾಂತ ಕಲಾವಿದರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ಜರುಗುತ್ತಿದ್ದವು. ಆದರೆ ನೆಚ್ಚಿನ ಹೋರಿಯ ಅಕಾಲಿಕ ಅಗಲಿಕೆಯಿಂದ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸಿದೆ.

ತುಂಬಿದ ಮಲಪ್ರಭೆ ನದಿಯಲ್ಲಿಶುಕ್ರವಾರ ಎದೆ ಮಟ್ಟದ ನೀರಿನಲ್ಲಿಸುಮಾರು 15 ಕ್ವಿಂಟಲ್‌ಗೂ ಹೆಚ್ಚು ಭಾರವಾದ ಹಳಿಬಂಡಿಯನ್ನು ಕ್ಷಣ ಮಾತ್ರದಲ್ಲಿಎಳೆದು ದಡ ಸೇರಿಸಿ ಸಾವಿರಾರು ಜನರಿಂದ ಸೈ ಎನಿಸಿಕೊಂಡಿದ್ದ ಹೋರಿ ಇನ್ನು ನೆನಪು ಮಾತ್ರ. ಗ್ರಾಮಸ್ಥರು ಮೃತ ಹೋರಿಯ ಮೆರವಣಿಗೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ