ಆ್ಯಪ್ನಗರ

ಹೊರ ಬಂದವರಿಗೆ ಲಾಠಿ ಬಿಸಿ

ನರಗುಂದ: ನೋವೆಲ್‌ ಕೊರೊನಾ ವೈರಸ್‌ ಹತೋಟಿಗೆ ಕರೆ ನೀಡಿದ್ದ ಕರ್ನಾಟಕ ಲಾಕ್‌ ಡೌನ್‌ಗೆ ಬೆಂಬಲ ವ್ಯಕ್ತವಾಗಿದ್ದು ಬೆಳಿಗ್ಗೆಯಿಂದ ಅಂಗಡಿ ಮುಗ್ಗಟ್ಟುಗಳು ಬಾಗಿಲು ತೆರೆಯಲಿಲ್ಲ. ಹಾಲು, ಪೆಟ್ರೊಲ್‌,ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಕಾಯಿಪಲ್ಲೆವ್ಯಾಪಾರ ಬಂದ್‌, ಹೋಟೆಲ್‌ಗಳು ಬಂದಾಗಿದ್ದರಿಂದ ಪಟ್ಟಣ ಸ್ತಬ್ದವಾಗಿತ್ತು.

Vijaya Karnataka 25 Mar 2020, 5:00 am
ನರಗುಂದ: ನೋವೆಲ್‌ ಕೊರೊನಾ ವೈರಸ್‌ ಹತೋಟಿಗೆ ಕರೆ ನೀಡಿದ್ದ ಕರ್ನಾಟಕ ಲಾಕ್‌ ಡೌನ್‌ಗೆ ಬೆಂಬಲ ವ್ಯಕ್ತವಾಗಿದ್ದು ಬೆಳಿಗ್ಗೆಯಿಂದ ಅಂಗಡಿ ಮುಗ್ಗಟ್ಟುಗಳು ಬಾಗಿಲು ತೆರೆಯಲಿಲ್ಲ. ಹಾಲು, ಪೆಟ್ರೊಲ್‌,ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಕಾಯಿಪಲ್ಲೆವ್ಯಾಪಾರ ಬಂದ್‌, ಹೋಟೆಲ್‌ಗಳು ಬಂದಾಗಿದ್ದರಿಂದ ಪಟ್ಟಣ ಸ್ತಬ್ದವಾಗಿತ್ತು.
Vijaya Karnataka Web heat the lathi to the outsiders
ಹೊರ ಬಂದವರಿಗೆ ಲಾಠಿ ಬಿಸಿ


ಮಾ.31ರವರೆಗೆ ಕರ್ನಾಟಕ ಬಂದ್‌ಗೆ ಸರಕಾರ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿಬೆಳಗ್ಗೆಯಿಂದ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಅಲ್ಲಲ್ಲಿಓಡಾಡುತ್ತಿದ್ದ, ಗುಂಪು ಗುಂಪಾಗಿ ಕುಳಿತವರಿಗೆ ಪೋಲಿಸರು ಲಾಠಿ ತೋರಿಸಿ ಚದುರಿಸಿದರೆ, ಬೈಕ್‌ನಲ್ಲಿಓಡಾಡುತ್ತಿದ್ದ ವಾಹನ ಸವಾರರಿಗೆ ಲಾಠಿ ಬಿಸಿ ತೋರಿಸಿದ ಘಟನೆ ನಡೆಯಿತು.

ಹೋಟೆಲ್‌ಗಳಲ್ಲಿಊಟ, ಉಪಹಾರಕ್ಕೆ ಅವಕಾಶವಿದ್ದರೂ ಹೋಟೆಲ್‌ಗಳು ಸಂಪೂರ್ಣ ಬಂದ್‌ ಆಗಿದ್ದವು. ಕಾಯಿಪಲ್ಲೆಮಾರಾಟ ಇರಲಿಲ್ಲ. ಔಷಧಿ, ಹಾಲು, ಪೆಟ್ರೋಲ್‌ ಮಾರಾಟ ಎಂದಿನಂತೆ ಇತ್ತು. ಬ್ಯಾಂಕುಗಳು ತೆರೆದಿದ್ದವು. ಹುಬ್ಬಳ್ಳಿ -ವಿಜಯಪುರ ಹೆದ್ದಾರಿ, ಶಿವಾಜಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಗಾಂಧಿ ಚೌಕ್‌, ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್‌ ಸಂಚಾರ ಸ್ಥಗಿಗೊಂಡ ಹಿನ್ನೆಲೆಯಲ್ಲಿಬಸ್‌ ನಿಲ್ದಾಣ ಬಣ ಬಣ ಎನ್ನುತ್ತಿತ್ತು.

ಯುಗಾದಿ ಹಬ್ಬದ ಸಂಭ್ರಮಕ್ಕೆ ಕೊರೊನಾ ತಡೆಯೊಡ್ಡಿದೆ. ಮನೆ,ವಾಹನ, ಅಂಗಡಿಗಳ ಸ್ವಚ್ಛತೆ ಮಾಡಿ ಅಮವಾಸ್ಯೆ ಪೂಜೆಗೂ ಅವಕಾಶ ಸಿಗದೆ ಜನ ಮನೆ ಹಿಡಿದು ಕುಳಿತು ವಾಹನಗಳ ಪೂಜೆಯಲ್ಲಿಬೀಜಿಯಾಗಿದ್ದರು. ಹೂಮಾಲೆ, ಪೂಜಾ ಸಾಮಗ್ರಿಗಳ ಖರೀದಿಗೆ ಮನೆಯಿಂದ ಹೊರಬಂದು ಹುಡಕಾಟದಲ್ಲಿತೊಡಗಿದ್ದರು. ಕೆಲವರಿಗೆ ಸಿಕ್ಕ ಹೂ ಮಾಲೆ ಖರೀದಿಸಿ ಮನೆಯತ್ತ ಸಾಗಿದರು. ಇನ್ನು ಕೆಲವರು ಪೋಲಿಸರು ಬೆದರಿಸಿ ಮನೆಗೆ ಕಳುಹಿಸಿದರು.

ತಂಪೆರೆದ ಮಳೆರಾಯ :
ಕೊರೊನಾ ವೈರಸ್‌ಗೆ ಇಡಿ ನರಗುಂದ ಸ್ಥಬ್ದವಾದ ಬೆನ್ನಲ್ಲೆಮಧ್ಯಾಹ್ನ 3.40ರ ಸುಮಾರಿಗೆ ಜಿಟಿ ಜಿಟಿ ಮಳೆ ಆರಂಭವಾಗಿ ನಂತರ ಅರ್ಧಗಂಟೆಗೂ ಹೆಚ್ಚುಕಾಲ ರಭಸವಾಗಿ ಸುರಿಯಿತು. ಮಾರುಕಟ್ಟೆಯಿಂದ ಬಸ್‌ ನಿಲ್ದಾಣ, ವಿನಾಯಕ ನಗರದತ್ತ ಮಳೆಯಾಗಿಯಾದರೆ ಇತ್ತ ಐತಿಹಾಸಿಕ ಗುಡ್ಡದಿಂದ ಹಿಂದಿನ ಭಾಗದಲ್ಲಿಜಿಟಿ ಜಿಟಿ ಮಳೆ ಇರಲಿಲ್ಲ. ಗುಡುಗು ಮಿಂಚು ಆರ್ಭಟವೂ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ