ಆ್ಯಪ್ನಗರ

ಗದಗನಲ್ಲಿ ಜೋರು ಮಳೆ

ಗದಗ : ಕಳೆದ ಸುಮಾರು ದಿನಗಳಿಂದ ಲೋಕಸಭಾ ಚುನಾವಣೆ ಕಾವು ಒಂದು ಕಡೆಯಾದರೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಾತಪದಿಂದ ಜಿಲ್ಲೆಯ ಜನರು ಬಸವಳಿದಿದ್ದರು. ಆದರೆ ಏಕಾಏಕಿ ಸುರಿದ ತುಂತುರು ಮಳೆಯೊಂದಿಗೆ ಆರಂಭವಾಗಿ ಗುಡುಗು ಸಿಡಿಲ ಆರ್ಭಟದೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು.

Vijaya Karnataka 24 May 2019, 5:00 am
ಗದಗ : ಕಳೆದ ಸುಮಾರು ದಿನಗಳಿಂದ ಲೋಕಸಭಾ ಚುನಾವಣೆ ಕಾವು ಒಂದು ಕಡೆಯಾದರೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಾತಪದಿಂದ ಜಿಲ್ಲೆಯ ಜನರು ಬಸವಳಿದಿದ್ದರು. ಆದರೆ ಏಕಾಏಕಿ ಸುರಿದ ತುಂತುರು ಮಳೆಯೊಂದಿಗೆ ಆರಂಭವಾಗಿ ಗುಡುಗು ಸಿಡಿಲ ಆರ್ಭಟದೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು.
Vijaya Karnataka Web heavy rain in gadag
ಗದಗನಲ್ಲಿ ಜೋರು ಮಳೆ


ಜಿಲ್ಲೆಯ ಮುಂಡರಗಿ, ಡಂಬಳ, ರೋಣ ಹಾಗೂ ವಿವಿಧೆಡೆ ಗುರುವಾರ ಸಂಜೆ ತುಂತುರು ಮಳೆ ಸುರಿದ ಹಿನ್ನೆಲೆಯಲ್ಲಿ ಇಡೀ ವಾತರವಣ ತಂಪಾಯಿತು. ಅವಳಿ ನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಯಿತು.ಸಂಜೆ ಆರಂಭವಾದ ಮಳೆಯಿಂದ ರಸ್ತೆ ತುಂಬಾ ನೀರು ಹರಿಯಿತು.

ನಗರದ ಪ್ರಮುಖ ಬೀದಿಯಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸಾರ್ವಜನಿರು ಪರದಾಡುವಂತಾಯಿತು. ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ರಭಸವಾಗಿ ಹರಿಯಿತು. ಇದರಿಂದ ರಸ್ತೆಯಲ್ಲಾ ಕೆಸರು ಮಯವಾಗಿತ್ತು. ಬೈಕ್‌ ಸವಾರರು, ಸೈಕಲ್‌ ಸವಾರರು, ವಿದ್ಯಾರ್ಥಿಗಳು ರಸ್ತೆ ದಾಟಲು ಹರ ಸಾಹಸ ಪಡುವಂತಾಯಿತು. ಜಿಲ್ಲೆಯಲ್ಲಿ ಕಲವು ಭಾಗದಲ್ಲಿ ಸುರಿದ ಮಳೆಯಿಂದ ಅಲ್ಲಲ್ಲಿ ವಿದ್ಯುತ್‌ ವ್ಯತ್ಯಯವಾಯಿತು.

ದಿಢೀರ್‌ ಮಳೆಯಿಂದ ರಸ್ತೆ ಬದಿಯ ವ್ಯಾಪಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು.

ವಿದ್ಯುತ್‌ ಕಟ್‌:

ಅವಳಿ ನಗರದಲ್ಲಿ ರಾತ್ರಿ ಸುರಿದ ಭರ್ಜರಿ ಮಳೆಗೆ ಅರ್ಧ ಗಂಟೆಗಳ ಕಾಲ ವಿದ್ಯುತ್‌ ಕಡಿತ ಮಾಡಲಾಗಿಯಿತು. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಜತೆಗೆ ಏಕಾಏಕಿ ಜೋರು ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ