ಆ್ಯಪ್ನಗರ

ನೀರು ನಿಲ್ಲಲು ಬದುವು ಸಹಕಾರಿ

ಡಂಬಳ : ದಿಬ್ಬದಿಂದ ಕಣವಿವರೆಗೆ ತತ್ವದಡಿಯಲ್ಲಿ ಜಮಿನುಗಳಿಗೆ ಬದುವು ನಿರ್ಮಿಸಲಾಗುತ್ತಿದ್ದು ಸಣ್ಣ, ದೊಡ್ಡ, ಎಸ್ಸಿ.ಎಸ್ಟಿ ಸೇರಿದಂತೆ ಎಲ್ಲ ವರ್ಗದ ರೈತರನ್ನು ತಲುಪುವುಲ್ಲದೆ ಮಳೆಯಿಂದ ಸಾಕಷ್ಟು ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಏರಿಕೆ ಕಂಡು ಬರುತ್ತದೆ ಎಂದು ಗದಗ ಉಪ ಕೃಷಿ ನಿರ್ದೆಶಕ ಸಹದೇವ ಯರಗಟ್ಟಿ ಹೇಳಿದರು.

Vijaya Karnataka 23 May 2019, 5:00 am
ಡಂಬಳ : ದಿಬ್ಬದಿಂದ ಕಣವಿವರೆಗೆ ತತ್ವದಡಿಯಲ್ಲಿ ಜಮಿನುಗಳಿಗೆ ಬದುವು ನಿರ್ಮಿಸಲಾಗುತ್ತಿದ್ದು ಸಣ್ಣ, ದೊಡ್ಡ, ಎಸ್ಸಿ.ಎಸ್ಟಿ ಸೇರಿದಂತೆ ಎಲ್ಲ ವರ್ಗದ ರೈತರನ್ನು ತಲುಪುವುಲ್ಲದೆ ಮಳೆಯಿಂದ ಸಾಕಷ್ಟು ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಏರಿಕೆ ಕಂಡು ಬರುತ್ತದೆ ಎಂದು ಗದಗ ಉಪ ಕೃಷಿ ನಿರ್ದೆಶಕ ಸಹದೇವ ಯರಗಟ್ಟಿ ಹೇಳಿದರು.
Vijaya Karnataka Web GDG-22DML1
ಮೇವುಂಡಿಯಲ್ಲಿ ನಡೆದ ಬದುವು ನಿರ್ಮಾಣ ಕೆಲಸವನ್ನು ಗದಗ ಉಪ ಕೃಷಿ ನಿರ್ದೆಶಕ ಸಹದೇವ ಯರಗುಪ್ಪಿ, ಮುಂಡರಗಿ ಕೃಷಿ ನಿರ್ದೆಶಕ ಎಸ್‌.ಬಿ.ನೆಗಳೂರ ಪರಿಶೀಲಿಸಿದರು.


ಸಮೀಪದ ಮೇವುಂಡಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ಬದುವು ನಿರ್ಮಾಣ ಕಾರ್ಯ ಪರಿಶೀಲಿಸಿ ಮಾತನಾಡಿದರು.

ಎಕರೆಗೆ 15ಅಡಿಯಂತೆ ತೆಗೆದ ತಗ್ಗುಗಳಲ್ಲಿ 2ಸಾವಿರ ಲೀಟರ್‌ ನೀರು ಸಂಗ್ರಹವಾಗುವುದು. ಎಕರೆಗೆ 30ಸಾವಿರ ಲೀ. ಸಂಗ್ರಹ ಆಗುವುದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಡಂಬಳ, ಹಳ್ಳಿಕೇರಿ, ಕದಾಂಪೂರ ಸೇರಿದಂತೆ 7ಗ್ರಾಮಗಳ ಈ ಯೋಜನೆ ಕಾರ್ಯ 40ಸಾವಿರ ಹೆಕ್ಟೕರ್‌ ಪ್ರದೇಶ ಒಳಪಡಲಿದ್ದು ಜಿಲ್ಲೆಯಲ್ಲಿ 17251 ಕೂಲಿ ಕಾರ್ಮಿಕರ ಬರಗಾಲದಲ್ಲಿ ಆಸರೆ ಆಗಿದ್ದು ದಿನೆ ದಿನೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ತಾಂತ್ರಿಕ ಸಹಾಯಕ ಸಿದ್ದು ಗುಡಿಮನಿ 10*10 ಚೌಕಾಕಾರ 1ಅಡಿ ಆಳವುಳ್ಳ ಅಳತೆ ವಿವರಣೆ ನೀಡಿದರು.

ಮುಂಡರಗಿ ಕೃಷಿ ನಿರ್ದೆಶಕ ಎಸ್‌.ಬಿ.ನೆಗಳೂರ, ಕೃಷಿ ಅಧಿಕಾರಿ ಎಸ್‌.ಬಿ.ರಾಮೆನಹಳ್ಳಿ, ರವಿಕುಮಾರ ಹಾವನೂರ, ಮಲ್ಲಪ್ಪ ನುಚ್ಚಂಬ್ಲಿ, ಮಲ್ಲಪ್ಪ ಕೊರ್ಲಹಳ್ಳಿ, ಸೋಮಶೇಖರ ಕೊರ್ಲಹಳ್ಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ