ಆ್ಯಪ್ನಗರ

ಡಿಕೆಸಿ ಬಂಧನ ವಿರೋಧಿಸಿ ಹೆದ್ದಾರಿ ತಡೆ

ನರಗುಂದ: ಕಾಂಗ್ರೆಸ್‌ ನಾಯಕರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 5 Sep 2019, 5:00 am
ನರಗುಂದ: ಕಾಂಗ್ರೆಸ್‌ ನಾಯಕರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web GDG-4NRD1
ಡಿ.ಕೆ.ಶಿಕವಕುಮಾರ ಬಂಧನ ವಿರೋಧಿಧಿಸಿ ನರಗುಂದದಲ್ಲಿರಾಷ್ಟ್ರೀಯ ಹೆದ್ದಾರಿಯಲ್ಲಿಕಾಂಗ್ರೆಸ್‌ ಕಾರ್ಯಕರ್ತರು ಕುಳಿತು ಪ್ರತಿಭಟನೆ ನಡೆಸಿದರು.


ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧಿಸಿ ಜೈಲಿಗೆ ಕಳುಹಿಸಿರುವುದನ್ನು ವಿರೋಧಿಸಿ ಇಲ್ಲಿನ ಶಿವಾಜಿ ಸರ್ಕಲ್‌ನಲ್ಲಿಹುಬ್ಬಳ್ಳಿ - ವಿಜಯಪುರ ಮಧ್ಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಹೆದ್ದಾರಿ ಸ್ಥಗಿತದಿಂದ ಸಾರಿಗೆ ಬಸ್‌ ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡಬೇಕಾಯಿತು. ನಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್ಲಅವರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಕೂಡಲೆ ಡಿ.ಕೆ.ಶಿವಕುಮಾರ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.

ಕೆಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಡಿ.ಕೊಳ್ಳಿ ಮಾತನಾಡಿ, ರಾಜ್ಯದಲ್ಲಿಪ್ರವಾಹದಿಂದ ಮನೆ,ಮಠ ಕಳೆದುಕೊಂಡು ತೊಂದರೆಯಲ್ಲಿರುವವರಿಗೆ ಪರಿಹಾರ ನೀಡಿಲ್ಲ, ಬೆಳೆ ಪರಿಹಾರ ನೀಡಿಲ್ಲ. ಕೇಂದ್ರ ಸರಕಾರದ ಸಚಿವರು ನೆರೆ ಪ್ರದೇಶ ವೀಕ್ಷಣೆ ಮಾಡಿ ಹೋಗಿದ್ದರೂ ಪರಿಹಾರ ಪರಿಹಾರ ಬಿಡುಗಡೆ ಮಾಡಿಲ್ಲಎಂದು ದೂರಿದರು.

ಪುರಸಭೆ ಸದಸ್ಯೆ ರಾಜೇಶ್ವರಿ ವೀರನಗೌಡ್ರ, ಕಾರ್ಯದರ್ಶಿ ರಾಜು ಕಲಾಲ,ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಉದಯ ವೀರನಗೌಡ್ರ ಮಾತನಾಡಿದರು.

ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ, ಟಿ.ಬಿ.ಶಿರಿಯಪ್ಪಗೌಡ್ರ, ವಿಠಲ ತಿಮ್ಮರಡ್ಡಿ, ಗಿರೀಶರಡ್ಡಿ ನೀಲರಡ್ಡಿ, ಇಸಾಕ ಮಸೂತಿಮನಿ, ಪುರಸಭೆ ಸದಸ್ಯ ಅಪ್ಪಣ್ಣ ನಾಯ್ಕರ,ಪಕ್ಕೀರಪ್ಪ ಸವದತ್ತಿ, ಬಸಪ್ಪ ಸವದತ್ತಿ, ಆರ್‌.ಬಿ.ಅಳಗವಾಡಿ,ಡಿ.ಕೆ. ಚೌಡರಡ್ಡಿ, ರವಿ ಹಿರೇಮಠ, ಬಸು ಘಾಟಗೆ, ಎಂ.ಬಿ.ಅರಹುಣಸಿ, ಬಸು ಪಾಟೀಲ, ವಿಜಯ ಚಲವಾದಿ, ಭರತ ರಡ್ಡಿ, ಹನಮಂತ ರಿತ್ತಿ,ಪ್ರಕಾಶ ಭಜಂತ್ರಿ ದುರಗಪ್ಪ ಹೊನಕೇರಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ