ಆ್ಯಪ್ನಗರ

ಹೆದ್ದಾರಿ ತಡೆದು ಕರವೇ ಪ್ರತಿಭಟನೆ

ರೋಣ: ಕೆಆರ್‌ ಪೇಟೆ ಬಿಜೆಪಿ ಶಾಸಕ ಮತ್ತು ನೂತನ ಸಚಿವ ನಾರಾಯಣಗೌಡ ಕಾರ್ಯಕ್ರಮವೊಂದರಲ್ಲಿಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿರುವ ಸಚಿವ ನಾರಾಯಣಗೌಡರನ್ನು ತಕ್ಷಣವೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು.

Vijaya Karnataka 28 Feb 2020, 4:40 pm
ರೋಣ: ಕೆಆರ್‌ ಪೇಟೆ ಬಿಜೆಪಿ ಶಾಸಕ ಮತ್ತು ನೂತನ ಸಚಿವ ನಾರಾಯಣಗೌಡ ಕಾರ್ಯಕ್ರಮವೊಂದರಲ್ಲಿಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿರುವ ಸಚಿವ ನಾರಾಯಣಗೌಡರನ್ನು ತಕ್ಷಣವೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಇವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ, ತಾಲೂಕು ಘಟಕಗಳು ಜಂಟಿಯಾಗಿ ಗುರುವಾರ ಮಿನಿ ವಿಧಾನಸೌಧ ಎದುರಿನ ಹುಬ್ಬಳ್ಳಿ ರಾಯಚೂರ ರಾಜ್ಯ ಹೆದ್ದಾರಿ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web 27 RON 4_25
ರೋಣ ಮಿನಿ ವಿಧಾನಸೌಧ ಎದುರಿನ ಹುಬ್ಬಳ್ಳಿ-ರಾಯಚೂರ ರಾಜ್ಯ ಹೆದ್ದಾರಿ ತಡೆ ನಡೆಸಿದ ಕರವೇ ಕಾರ್ಯಕರ್ತರು.


ಕರವೇ ರಾಜ್ಯ ಉಪಾಧ್ಯಕ್ಷ ಎಚ್‌.ಎಸ್‌.ಸೋಂಪೂರ ಮಾತನಾಡಿ, ಮರಾಠ ಪ್ರೇಮ ತೋರುವ ಮೂಲಕ ನಾರಾಯಣಗೌಡ ಕನ್ನಡಿಗರ ಅಪಮಾನ ಮಾಡಿದವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಅಲ್ಲಿಯವರೆಗೂ ಕರವೇ ಹೋರಾಟ ನಿಲ್ಲಿಸುವುದಿಲ್ಲ.ಒಂದು ವೇಳೆ ಸರಕಾರ ಉದಾಸೀನ ನೀತಿ ಅನುಸರಿಸಿದರೆ ಉಗ್ರ ರೀತಿಯ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಕರವೇ ಮುಖಂಡ ನಿಂಗಪ್ಪ ಹೊನ್ನಾಪೂರ ಮಾತನಾಡಿದರು. ಸಚಿವ ನಾರಾಯಣಗೌಡ ವಿರುದ್ದ ಘೋಷಣೆ ಕೂಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರರ ಮೂಲಕ ಸರಕಾರಕ್ಕೆ ಸಚಿವ ಸಂಪುಟದಿಂದ ಕೈಬಿಡುವಂತೆ ಮನವಿ ಸಲ್ಲಿಸಿದರು. ಉಮೇಶ ಮೇಟಿ, ಶಿರಾಜ ಗೋಡಿ, ನಿಂಗನಗೌಡ ಮಾಲಿಪಾಟೀಲ, ಆಶಾ ಜೂಲಗುಡ್ಡ, ನಿಂಗಪ್ಪ ಹೊನ್ನಾಪೂರ, ಹಾಲಪ್ಪ ಅರಹುಣಸಿ,ರಾಜ ಶಿರಹಟ್ಟಿ, ಶ್ರೀನಿವಾಸ ಕೊರ್ಲಗಟ್ಟಿ, ನಬಿಸಾಬ ಕಿಲ್ಲೇದಾರ, ರಷ್ಮೀ ಅಬ್ಬಿಗೇರಿ,ರತ್ನಮ್ಮ ಅಬ್ಬಿಗೇರಿ, ನೀಲನಗೌಡ ಪಾಟೀಲ, ಹೇಮಣ್ಣ ಹಡಗಲಿ,ರವೀಂದ್ರ ಮುಗಳಿ, ಯಲ್ಲಪ್ಪಗೌಡ ಪಾಟೀಲ,ಮಲ್ಲಿಕಾರ್ಜುನ ಮುಧೋಳ,ಬಸವರಾಜ ಶಿವಶಿಂಪರ,ಶರಣಪ್ಪ ಕರಮುಡಿ, ವಿರೇಶ ಬಾರಕೇರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ