ಆ್ಯಪ್ನಗರ

ವಿಶ್ವ ಶಾಂತಿಗಾಗಿ ಪಾದಯಾತ್ರೆ

ಗದಗ: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶಿವಾನುಭವ ಶ್ರಾವಣ ಶಿಬಿರದ ಅಂಗವಾಗಿ ಜ್ಯೋತಿರ್ಲಿಂಗ ಸಹಿತ ಓಂ ನಮಃ ಶಿವಾಯ ಪಾದಯಾತ್ರೆ ನಡೆಯಿತು.

Vijaya Karnataka 28 Aug 2019, 5:00 am
ಗದಗ: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶಿವಾನುಭವ ಶ್ರಾವಣ ಶಿಬಿರದ ಅಂಗವಾಗಿ ಜ್ಯೋತಿರ್ಲಿಂಗ ಸಹಿತ ಓಂ ನಮಃ ಶಿವಾಯ ಪಾದಯಾತ್ರೆ ನಡೆಯಿತು.
Vijaya Karnataka Web hiking for world peace
ವಿಶ್ವ ಶಾಂತಿಗಾಗಿ ಪಾದಯಾತ್ರೆ


ಪಾದಯಾತ್ರೆ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗಿ, ಸರಾಫ ಬಜಾರ್‌, ಟಾಂಗಾಕೂಟ, ನಾಮಜೋಶಿ ರೋಡ್‌, ಗಡಿಯಾರ ಕಂಬ, ವೀರಶೈವ ಲೈಬ್ರರಿ, ಮಹೇಂದ್ರಕರ್‌ ಸರ್ಕಲ್‌, ತೋಂಟದಾರ್ಯ ಮಠ, ಗಾಂಧಿ ಸರ್ಕಲ್‌ ಮಾರ್ಗವಾಗಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣಕ್ಕೆ ತಲುಪಿತು. ಮೆರವಣಿಗೆಉದ್ದಕ್ಕೂ ಶಿವಸಂದೇಶ ಪತ್ರವನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಆ.28ರಿಂದ ಸೆ.6ರಂದು ಬೆಳಗ್ಗೆ 6ರಿಂದ7ರವರಿಗೆ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶಿವಾನುಭವ ಶ್ರಾವಣ ಶಿಬಿರ ಆಯೋಜಿಸಿದೆ. ಸದ್ಭಕ್ತರು ಶಿಬಿರದ ಲಾಭ ಪಡೆಯಬೇಕೆಂದು ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ