ಆ್ಯಪ್ನಗರ

ಹಿಂದೂಸ್ತಾನಿ ಗಾಯನ ಲಹರಿ

ಲಕ್ಷ್ಮೇಶ್ವರ : ಇನ್ಪೋಸಿಸ್‌ ಪ್ರತಿಷ್ಠಾನ ಸಂಯೋಜನೆಯಲ್ಲಿ ನಡೆಯುತ್ತಿರುವ ಪುಲಿಗೆರೆ ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಮೊದಲು ಕಾರ್ಯಕ್ರಮ ಆಕಾಶವಾಣಿ ಕಲಾವಿದ ಪಂ.ಸದಾಶಿವ ಐಹೋಳಿ ಇವರ ಹಿಂದೂಸ್ತಾನಿ ಗಾಯನಯೊಂದಿಗೆ ಪ್ರಾರಂಭವಾಯಿತು.

Vijaya Karnataka 7 Jan 2019, 5:00 am
ಲಕ್ಷ್ಮೇಶ್ವರ : ಇನ್ಪೋಸಿಸ್‌ ಪ್ರತಿಷ್ಠಾನ ಸಂಯೋಜನೆಯಲ್ಲಿ ನಡೆಯುತ್ತಿರುವ ಪುಲಿಗೆರೆ ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಮೊದಲು ಕಾರ್ಯಕ್ರಮ ಆಕಾಶವಾಣಿ ಕಲಾವಿದ ಪಂ.ಸದಾಶಿವ ಐಹೋಳಿ ಇವರ ಹಿಂದೂಸ್ತಾನಿ ಗಾಯನಯೊಂದಿಗೆ ಪ್ರಾರಂಭವಾಯಿತು.
Vijaya Karnataka Web GDG-06LXR03
ಪುಲಿಗೆರೆ ಉತ್ಸವದ ಕೊನೆ ದಿನ ಭಾನುವಾರ ಸಂಜೆ ಮೊದಲು ಪಂ.ಸದಾಶಿವ ಐಹೋಳಿ ಇವರ ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಿದರು.


ಮಧುವತಿ ರಾಗದ ಪ್ರೀಯಾ ಮೋರೆ ಚೀಜ್‌ನೊಂದಿಗೆ ತಮ್ಮ ಗಾಯನ ಆರಂಭಿಸಿ ತಮ್ಮ ಮಧುರ ಕಂಠದಿಂದ ಸಂಗೀತ ಪ್ರೀಯರು ನಾದ ಲೋಕದಲ್ಲಿ ಮಿಂದೆದ್ದರು. ನಂತರ ನಂಬರು ನೆಚ್ಚರು ಬರಿದೇ ಕರೆಯವರು ಎಂಬ ಬಸವಣ್ಣವರ ವಚನವನ್ನು ತಮ್ಮ ಧ್ವನಿಸಿರಿಯಿಂದ ಆರಂಭಿಸಿದರು. ಹೀಗೆ ಅನೇಕ ಗಾಯನಗಳಿಂದ ಸುಮಾರು ಒಂದುವರೆ ಘಂಟೆಗೂ ಹೆಚ್ಚು ತಮ್ಮ ಹಿಂದೂಸ್ತಾನಿ ಗಾಯನದಿಂದ ಪ್ರೇಕ್ಷ ಕರ ಮನಗೆದ್ದರು.

ಗಾಯನ ಮಧ್ಯ ಹಾರ್ಮೋನಿಯಂ ಮತ್ತು ತಬಲಾ ಜುಗಲ ಬಂದಿ ಏರ್ಪಡುತ್ತಿದ್ದರು. ಆಗ ಜನರು ಹರ್ಷಗೊಂಡು ಚಪ್ಪಾಳೆ ತಟ್ಟುತ್ತಿದ್ದರು.

ತಮ್ಮ ಹಿಂದೂಸ್ತಾನ ಗಾಯನ ಇವರಿಗೆ ಆಕಾಶವಾಣಿಯ ಕಲಾವಿದ ಶ್ರೀಧರ ಮಾಂಡ್ರೆ ಅವರ ಗಾಯನಕ್ಕೆ ತಕ್ಕಂತೆ ತಬಲಾ ನೀಡುತ್ತಿದ್ದರು. ಅಶ್ವೀನ್‌ ವಾಲ್ವಾಲಕರ್‌ ಹಾರ್ಮೋನಿಯಂ ಮತ್ತು ಸುಜಾತಾ ಐಹೋಳೆ ತಾನ್ಪುರಿ ಸಾಥ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ