ನರೇಗಲ್ಲ : ಇಲ್ಲಿನ ಹಿರೇಕೆರೆಗೆ ಕೇಂದ್ರ ವಾಣಿಜ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುನೀಲ ಕುಮಾರ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಸಕಾಲಕ್ಕೆ ಮಳೆಯಾಗದ ಕಾರಣ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟಿ ಕುಸಿಯುತ್ತಿದೆ. ಜಲಮುಲ ನಾಶವಾಗುತ್ತಿದೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪುರಾತನ ಜಲಮೂಲಗಳ ಸಂರಕ್ಷ ಣೆಯ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕೆರೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಂದು ಗ್ರಾಮಗಳ ಕೆರೆ ಅಭಿವೃದ್ಧಿಗೆ ಸಾರ್ವಜನಿಕರು ಮುಂದಾದರೆ ಬರಗಾಲದಿಂದ ಮುಕ್ತಿ ಸಿಗಲಿದೆ. ಜಿಲ್ಲೆಯಲ್ಲಿ ಸರಾಸರಿ ಶೇ.55ರಷ್ಟು ಮಳೆಯಾಗುತ್ತಿದ್ದು ಅದರಲ್ಲಿ ಅಂದಾಜು ಶೇ.15ರಷ್ಟು ಮಾತ್ರ ಬಳಕೆಯಾಗುತ್ತಿದೆ. ಇನ್ನುಳಿದ ನೀರಿನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನರೇಗಲ್ಲನ ಹಿರೇಕೆರೆಯನ್ನು ನೆಲ, ಜಲ ಸಂರಕ್ಷ ಣಾ ಸಮೀತಿ ಹಾಗೂ ರೈತರು ಮುಂದೆ ನಿಂತು ಸ್ವಂತ ಹಣದಲ್ಲಿ ಹೊಳೆತ್ತುವ ಕಾರ್ಯದೊಂದಿಗೆ ಕೆರೆ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯ ಸಂತಸದ ವಿಷಯವಾಗಿದೆ. ಕೆರೆಗೆ ನೀರು ತುಂಬಿಸುವ ಮಾರ್ಗಗಳ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಿದರು. ನರೆಗಲ್ಲ ನೆಲ,ಜಲ, ಸಂರಕ್ಷ ಣೆ ಸಮಿತಿಯಿಂದ ಹಿರೆಕೆರೆ ಅಭಿವೃದ್ಧಿಗೆ ಮನವಿ ಸಲ್ಲಿಸಲಾಯಿತು.
ನರೇಗಲ್ಲ ನೆಲ, ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ, ಬಸವರಾಜ ವಂಕುಲಕುಂಟಿ ,ಉಮೇಶ ಸಂಗನಾಳಮಠ, ಕೆ.ಜಿ.ಉಡುಪಿ, ರವಿಂದ್ರನಾಥ ದೊಡ್ಡಮೇಟ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ, ಕೆ.ಸಿ. ಜೋಗಿ,ಪಪಂ ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮನವರ, ಎಂಜಿನಿಯರ ವಿ.ಪಿ. ಕಾಟೀವಾಲಿ,
ಕೃಷಿ ಇಲಾಖೆ ಜಂಟಿ ನಿರ್ದೆಶಕ ಸಿ.ಬಿ. ಬಾಲರಡ್ಡಿ, ಎಂ.ವಿ. ಚಳಗೆರಿ, ಯೋಜನಾ ನಿರ್ದೇಶಕ ಸಂತೋಷ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಸಿದ್ದೇಶ ಕೋಡಿಹಳ್ಳಿ ಇತರರು ಇದ್ದರು.
ಕಾಮಗಾರಿ ವೀಕ್ಷಣೆ :
ಅಧಿಕಾರಿಗಳ ತಂಡ ಸಮೀಪದ ಅಬ್ಬೆಗೆರಿಯ ಕೊಟುಮುಚಗಿ ರಸ್ತೆಯ ಪುರಾತನ ಕಲಕಕೇರಿ ಕೆರಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾದ ಒಡ್ಡುಗಳ ಕಾಮಗಾರಿ ವೀಕ್ಷಿಸಿತು. ಸುನೀಲ ಕುಮಾರ ಮಾತನಾಡಿ,ಜಮೀನುಗಳಲ್ಲಿನ ಬದುವುಗಳಲ್ಲಿ ಸಸಿಗಳನ್ನು ನೆಡಲು ಪ್ರೆರೇಪಿಸಬೇಕು . ರಸ್ತೆ ಅಕ್ಕ-ಪಕ್ಕದಲ್ಲಿಯೂ ಸಸಿ ನೆಡುವ ಕಾರ್ಯವಾಗಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಅಂತರ್ಜಲಮಟ್ಟ ವೃದ್ಧಿಸಲು ಕ್ರಮ ಕೈಗೊಳ್ಳಬೇಕು. ರೈತರ ಜಮಿನುಗಳಲ್ಲಿನ ಮಳೆ ನೀರು ಹರಿದು ಭೂಮಿ ಫಲವತ್ತಾದ ಮಣ್ಣು ಹರಿದು ಹೋಗದಂತೆ ನೀರು ಸಂಗ್ರಹಿಸಲು ಅಗತ್ಯವಾದ ಯೋಜನೆ ರೂಪಿಸಬೇಕು ಎಂದರು.
ಪ್ರತಿಯೊಂದು ಗ್ರಾಮಗಳ ಕೆರೆ ಅಭಿವೃದ್ಧಿಗೆ ಸಾರ್ವಜನಿಕರು ಮುಂದಾದರೆ ಬರಗಾಲದಿಂದ ಮುಕ್ತಿ ಸಿಗಲಿದೆ. ಜಿಲ್ಲೆಯಲ್ಲಿ ಸರಾಸರಿ ಶೇ.55ರಷ್ಟು ಮಳೆಯಾಗುತ್ತಿದ್ದು ಅದರಲ್ಲಿ ಅಂದಾಜು ಶೇ.15ರಷ್ಟು ಮಾತ್ರ ಬಳಕೆಯಾಗುತ್ತಿದೆ. ಇನ್ನುಳಿದ ನೀರಿನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನರೇಗಲ್ಲನ ಹಿರೇಕೆರೆಯನ್ನು ನೆಲ, ಜಲ ಸಂರಕ್ಷ ಣಾ ಸಮೀತಿ ಹಾಗೂ ರೈತರು ಮುಂದೆ ನಿಂತು ಸ್ವಂತ ಹಣದಲ್ಲಿ ಹೊಳೆತ್ತುವ ಕಾರ್ಯದೊಂದಿಗೆ ಕೆರೆ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯ ಸಂತಸದ ವಿಷಯವಾಗಿದೆ. ಕೆರೆಗೆ ನೀರು ತುಂಬಿಸುವ ಮಾರ್ಗಗಳ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಿದರು. ನರೆಗಲ್ಲ ನೆಲ,ಜಲ, ಸಂರಕ್ಷ ಣೆ ಸಮಿತಿಯಿಂದ ಹಿರೆಕೆರೆ ಅಭಿವೃದ್ಧಿಗೆ ಮನವಿ ಸಲ್ಲಿಸಲಾಯಿತು.
ನರೇಗಲ್ಲ ನೆಲ, ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ, ಬಸವರಾಜ ವಂಕುಲಕುಂಟಿ ,ಉಮೇಶ ಸಂಗನಾಳಮಠ, ಕೆ.ಜಿ.ಉಡುಪಿ, ರವಿಂದ್ರನಾಥ ದೊಡ್ಡಮೇಟ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ, ಕೆ.ಸಿ. ಜೋಗಿ,ಪಪಂ ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮನವರ, ಎಂಜಿನಿಯರ ವಿ.ಪಿ. ಕಾಟೀವಾಲಿ,
ಕೃಷಿ ಇಲಾಖೆ ಜಂಟಿ ನಿರ್ದೆಶಕ ಸಿ.ಬಿ. ಬಾಲರಡ್ಡಿ, ಎಂ.ವಿ. ಚಳಗೆರಿ, ಯೋಜನಾ ನಿರ್ದೇಶಕ ಸಂತೋಷ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಸಿದ್ದೇಶ ಕೋಡಿಹಳ್ಳಿ ಇತರರು ಇದ್ದರು.
ಕಾಮಗಾರಿ ವೀಕ್ಷಣೆ :
ಅಧಿಕಾರಿಗಳ ತಂಡ ಸಮೀಪದ ಅಬ್ಬೆಗೆರಿಯ ಕೊಟುಮುಚಗಿ ರಸ್ತೆಯ ಪುರಾತನ ಕಲಕಕೇರಿ ಕೆರಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾದ ಒಡ್ಡುಗಳ ಕಾಮಗಾರಿ ವೀಕ್ಷಿಸಿತು. ಸುನೀಲ ಕುಮಾರ ಮಾತನಾಡಿ,ಜಮೀನುಗಳಲ್ಲಿನ ಬದುವುಗಳಲ್ಲಿ ಸಸಿಗಳನ್ನು ನೆಡಲು ಪ್ರೆರೇಪಿಸಬೇಕು . ರಸ್ತೆ ಅಕ್ಕ-ಪಕ್ಕದಲ್ಲಿಯೂ ಸಸಿ ನೆಡುವ ಕಾರ್ಯವಾಗಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಅಂತರ್ಜಲಮಟ್ಟ ವೃದ್ಧಿಸಲು ಕ್ರಮ ಕೈಗೊಳ್ಳಬೇಕು. ರೈತರ ಜಮಿನುಗಳಲ್ಲಿನ ಮಳೆ ನೀರು ಹರಿದು ಭೂಮಿ ಫಲವತ್ತಾದ ಮಣ್ಣು ಹರಿದು ಹೋಗದಂತೆ ನೀರು ಸಂಗ್ರಹಿಸಲು ಅಗತ್ಯವಾದ ಯೋಜನೆ ರೂಪಿಸಬೇಕು ಎಂದರು.