ಮಾಳಿಂಗರಾಯ ಪೂಜಾರ
ಲಕ್ಷ್ಮೇಶ್ವರ : ಕೇಂದ್ರ ಮತ್ತು ರಾಜ್ಯ ಸರಕಾರ ಗುಡಿಸಲು ಭಾರತವನ್ನಾಗಿಸಲು ಅನೇಕ ಯೋಜನೆ ರೂಪಿಸಿಲಾಗುತ್ತಿದ್ದು, ಆದರೆ ಅದು ನಿಜವಾದ ಫಲಾನುಭವಿಗಳಿಗೆ ದೊರೆಯದೆ ಉಳ್ಳವರ ಪಾಲಾಗುತ್ತಿವೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ರಾಜ್ಯ ಸರಕಾರದ ಅನೇಕ ಯೋಜನೆಯಲ್ಲಿಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆದರೆ ಮನೆಗಳು ಕಳಪೆ ಗುಣಮಟ್ಟದ್ದಾಗಿದೆ ಎಂಬುದು ಜನರು ಆರೋಪ.
ಪಟ್ಟಣದಲ್ಲಿಕೊಳಚೆ ನಿರ್ಮೂಲನೆ ಮಂಡಳಿಯವರು ಲಕ್ಷೆತ್ರ್ಮೕಶ್ವರದಲ್ಲಿ4 ವಾರ್ಡುಗಳಲ್ಲಿಒಟ್ಟು 343 ಮನೆ ನಿರ್ಮಾಣ ಮಾಡುತ್ತಿದ್ದು, ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡದೇ ಅವರಿಂದ ಹಣ ಪಡೆದು ಮನೆ ಕಟ್ಟಿಕೊಡುತ್ತೇವೆ ಎಂದು ಹೇಳಿ ಮನೆ ಕೆಡವಿಸಿ ಬೀದಿಗೆ ತಂದಿದ್ದಾರೆ ಎಂದು ನಿವಾಸಿಗಳ ಆರೋಪ. ಆದರೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು ತಮಗೆ ತಿಳಿದಂತೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಕಳಪೆ ಮಟ್ಟದ ಕಚ್ಚಾ ಸಾಮಗ್ರಿ ಬಳಸಲಾಗುತ್ತಿದೆ. ಹಸಿ ಬ್ಲಾಕ್ ಬಳಸಿ ಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಕಾಲಂ, ಲಿಂಟಲ್ಗೆ ಹಾಕಲು ಕಬ್ಬಿಣದ ಕಳಪೆ ಮಟ್ಟದ ಸರಳುಗಳನ್ನು ಬಳಸಲಾಗುತ್ತಿದೆ ಎಂದು ಆರೊಪಿಸುತ್ತಿದ್ದಾರೆ.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಾಣಕ್ಕಾಗಿ ಒಟ್ಟು 4.91 ಲಕ್ಷ ಯೋಜನಾ ವೆಚ್ಚ ಸಿದ್ದ ಪಡಿಸಿ ಗುತ್ತಿಗೆ ನೀಡಲಾಗಿದೆ. ಇದರಲ್ಲಿಕೇಂದ್ರ ಮತ್ತು ರಾಜ್ಯ ಸರಕಾರದಿಂದ ಎಸ್ಸಿ, ಎಸ್ಟಿ ಜನಾಂಗದವರಿಗೆ 3.50 ಲಕ್ಷ ಹಾಗೂ ಇತರೆ ಜನಾಂಗದವರಿಗೆ 2.70 ಲಕ್ಷ ನೀಡಲಾಗುತ್ತದೆ ಇನ್ನುಳಿದ ಹಣ ಕಟ್ಟಬೇಕು ಅಥವಾ ಬ್ಯಾಂಕ್ಗಳ ಮೂಲಕ ಬೋಜಾ ನೀಡಿ ಲೋನ್ ಮೂಲಕ ಹಣ ಕಟ್ಟಬೇಕು ಎಂಬುದನ್ನು ಫಲಾನುಭವಿಗಳಿಗೆ ತಿಳಿಸದೆ ಎಲ್ಲವನ್ನು ಕತ್ತಲೆಯಲ್ಲಿಇಟ್ಟು ಉಚಿತವಾಗಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಮನೆಗಳನ್ನು ಕೆಡವಲು ಹೇಳಿದ್ದಾರೆ. ಮನೆ ಕೆಡವಲು ನೀಡಬೇಕಾದ ಹಣವನ್ನು ಸಹಿತ ನೀಡದೆ ಫಲನುಭವಿಗಳ ಹತ್ತಿರ ಹಣ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮೀಸಲಾತಿ ಅನುಸಾರವಾಗಿ ಮನೆ ನಿರ್ಮಾಣ ಮಾಡದೆ ತಮಗೆ ಇಷ್ಟ ಬಂದವವರಿಗೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸ್ಲಂ ಬೋರ್ಡ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇಲಾಖೆ ನಿಯಾಮ ಗಾಳಿಗೆ ತೂರಿ ತಮಗೆ ತಿಳಿದಂತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಅನರ್ಹರಿಗೂ ಕಾರ್ಮಿಕ ಕಾರ್ಡುಗಳು:
ಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆ ನಿರ್ಮಾಣ ಮಾಡಿಕೊಳ್ಳಲು ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕ ಕಾರ್ಡುಗಳನ್ನು ಮಾಡಿಸುತ್ತಿದ್ದಾರೆ. ಸೌಲಭ್ಯ ಪಡೆಯಲು ಕಾರ್ಮಿಕ ಅಲ್ಲದವರಿಗೂ ಕಾರ್ಡುಗಳನ್ನು ನೀಡಲಾಗುತ್ತಿದೆ ಎಂದು ದೂರುಗಳು ಬರುತ್ತಿವೆ.
ಲಕ್ಷ್ಮೇಶ್ವರ : ಕೇಂದ್ರ ಮತ್ತು ರಾಜ್ಯ ಸರಕಾರ ಗುಡಿಸಲು ಭಾರತವನ್ನಾಗಿಸಲು ಅನೇಕ ಯೋಜನೆ ರೂಪಿಸಿಲಾಗುತ್ತಿದ್ದು, ಆದರೆ ಅದು ನಿಜವಾದ ಫಲಾನುಭವಿಗಳಿಗೆ ದೊರೆಯದೆ ಉಳ್ಳವರ ಪಾಲಾಗುತ್ತಿವೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ರಾಜ್ಯ ಸರಕಾರದ ಅನೇಕ ಯೋಜನೆಯಲ್ಲಿಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆದರೆ ಮನೆಗಳು ಕಳಪೆ ಗುಣಮಟ್ಟದ್ದಾಗಿದೆ ಎಂಬುದು ಜನರು ಆರೋಪ.
ಪಟ್ಟಣದಲ್ಲಿಕೊಳಚೆ ನಿರ್ಮೂಲನೆ ಮಂಡಳಿಯವರು ಲಕ್ಷೆತ್ರ್ಮೕಶ್ವರದಲ್ಲಿ4 ವಾರ್ಡುಗಳಲ್ಲಿಒಟ್ಟು 343 ಮನೆ ನಿರ್ಮಾಣ ಮಾಡುತ್ತಿದ್ದು, ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡದೇ ಅವರಿಂದ ಹಣ ಪಡೆದು ಮನೆ ಕಟ್ಟಿಕೊಡುತ್ತೇವೆ ಎಂದು ಹೇಳಿ ಮನೆ ಕೆಡವಿಸಿ ಬೀದಿಗೆ ತಂದಿದ್ದಾರೆ ಎಂದು ನಿವಾಸಿಗಳ ಆರೋಪ. ಆದರೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು ತಮಗೆ ತಿಳಿದಂತೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಕಳಪೆ ಮಟ್ಟದ ಕಚ್ಚಾ ಸಾಮಗ್ರಿ ಬಳಸಲಾಗುತ್ತಿದೆ. ಹಸಿ ಬ್ಲಾಕ್ ಬಳಸಿ ಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಕಾಲಂ, ಲಿಂಟಲ್ಗೆ ಹಾಕಲು ಕಬ್ಬಿಣದ ಕಳಪೆ ಮಟ್ಟದ ಸರಳುಗಳನ್ನು ಬಳಸಲಾಗುತ್ತಿದೆ ಎಂದು ಆರೊಪಿಸುತ್ತಿದ್ದಾರೆ.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಾಣಕ್ಕಾಗಿ ಒಟ್ಟು 4.91 ಲಕ್ಷ ಯೋಜನಾ ವೆಚ್ಚ ಸಿದ್ದ ಪಡಿಸಿ ಗುತ್ತಿಗೆ ನೀಡಲಾಗಿದೆ. ಇದರಲ್ಲಿಕೇಂದ್ರ ಮತ್ತು ರಾಜ್ಯ ಸರಕಾರದಿಂದ ಎಸ್ಸಿ, ಎಸ್ಟಿ ಜನಾಂಗದವರಿಗೆ 3.50 ಲಕ್ಷ ಹಾಗೂ ಇತರೆ ಜನಾಂಗದವರಿಗೆ 2.70 ಲಕ್ಷ ನೀಡಲಾಗುತ್ತದೆ ಇನ್ನುಳಿದ ಹಣ ಕಟ್ಟಬೇಕು ಅಥವಾ ಬ್ಯಾಂಕ್ಗಳ ಮೂಲಕ ಬೋಜಾ ನೀಡಿ ಲೋನ್ ಮೂಲಕ ಹಣ ಕಟ್ಟಬೇಕು ಎಂಬುದನ್ನು ಫಲಾನುಭವಿಗಳಿಗೆ ತಿಳಿಸದೆ ಎಲ್ಲವನ್ನು ಕತ್ತಲೆಯಲ್ಲಿಇಟ್ಟು ಉಚಿತವಾಗಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಮನೆಗಳನ್ನು ಕೆಡವಲು ಹೇಳಿದ್ದಾರೆ. ಮನೆ ಕೆಡವಲು ನೀಡಬೇಕಾದ ಹಣವನ್ನು ಸಹಿತ ನೀಡದೆ ಫಲನುಭವಿಗಳ ಹತ್ತಿರ ಹಣ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮೀಸಲಾತಿ ಅನುಸಾರವಾಗಿ ಮನೆ ನಿರ್ಮಾಣ ಮಾಡದೆ ತಮಗೆ ಇಷ್ಟ ಬಂದವವರಿಗೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸ್ಲಂ ಬೋರ್ಡ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇಲಾಖೆ ನಿಯಾಮ ಗಾಳಿಗೆ ತೂರಿ ತಮಗೆ ತಿಳಿದಂತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಅನರ್ಹರಿಗೂ ಕಾರ್ಮಿಕ ಕಾರ್ಡುಗಳು:
ಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆ ನಿರ್ಮಾಣ ಮಾಡಿಕೊಳ್ಳಲು ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕ ಕಾರ್ಡುಗಳನ್ನು ಮಾಡಿಸುತ್ತಿದ್ದಾರೆ. ಸೌಲಭ್ಯ ಪಡೆಯಲು ಕಾರ್ಮಿಕ ಅಲ್ಲದವರಿಗೂ ಕಾರ್ಡುಗಳನ್ನು ನೀಡಲಾಗುತ್ತಿದೆ ಎಂದು ದೂರುಗಳು ಬರುತ್ತಿವೆ.